ಉಳ್ಳಾಲ, ಜು.7: ಉಳ್ಳಾಲ ಪ್ರೆಸ್ಕ್ಲಬ್ನಲ್ಲಿ ಜರಗಿದ ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮಕ್ಕೆ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಕಟಪೂರ್ವ ಪ್ರದೀಪ್ ಕುಮಾರ್ ಕಲ್ಕೂರ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿ ಅನುಷ್ಠಾನದಡಿ ಗಟ್ಟಿ ಕನ್ನಡಿಗರು. ಭಾಷಾ, ಜೀವನ, ವಸ್ತ್ರಸಂಹಿತೆ, ಬದುಕು, ಆಹಾರಗಳಲ್ಲಿ ಸ್ವಚ್ಛತೆ ಅನ್ನುವುದು ಇಡೀ ದೇಶದಲ್ಲಿ ಇರುವುದು ತೌಳವನಾಡಿನಲ್ಲಿ ಮಾತ್ರ. ಸರಕಾರದ ವ್ಯವಸ್ಥೆಗಳು ಪ್ರಾದೇಶಿಕ ಮಾನ್ಯತೆ, ಹಕ್ಕು, ಗೌರವ ನೀಡುವಾಗ ಅಲ್ಲಿ ನೆಲೆ ನಿಂತ ವ್ಯಕ್ತಿಗಳಿಗೇ ಕೊಡಬೇಕಿದೆ. ಧಾರ್ಮಿಕ విధి ಪ್ರತಿ ಧರ್ಮಗಳಲ್ಲಿಯೂ ಚೌಕಟ್ಟಿನಲ್ಲಿ ಆಯಾಯ ರೀತಿಯಲ್ಲಿರುವುದು ಒಗ್ಗಟ್ಟಿನ ಸಂದೇಶ. ದೇವರು ಹಾಗೂ ದೈವವನ್ನು ಒಂದೇ ರೀತಿಯಲ್ಲಿ ಆರಾಸಿಕೊಂಡು ಬಂದಿರುವ ವಿಶಿಷ್ಟ ಜನಾಂಗ ತೌಳವ, ಬದುಕು, ಆಹಾರ ಪದ್ಧತಿಯ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿಲ್ಲ. ತೌಳವ ನಾಡಿನಲ್ಲಿ ಬ್ಯಾರಿ, ಕೊಂಕಣಿ ಭಾಷೆಯೇ ವೈಶಿಷ್ಟ್ಯ,ವಾದುದು. ರಾಷ್ಟ್ರಭಿಮಾನದಲ್ಲಿ ಗಟ್ಟಿ ಯಾಗಿರುವವರು ತುಳುವರು ಎಂದರು.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುಳುನಾಡು ರಕ್ಷಣಾ ವೇದಿಕೆಯ ಉಳ್ಳಾಲ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಡಿ.ಐ. ಅಬೂಬಕರ್ ಕೈರಂಗಳ, ಗೌರವಾಧ್ಯಕ್ಷರಾಗಿ ಡಾ| ಶೇಖ್ ಬಾವ, ಪ್ರಧಾನ ಕಾರ್ಯದರ್ಶಿಯಾಗಿ ಸುಕೇಶ್ ಜೆ.ಕೆ. ಉಚ್ಚಿಲ್, ಕೋಶಾಧಿಕಾರಿಯಾಗಿ ಅರುಣ್ ಡಿ’ಸೋಜಾ, ಗ್ರಾಮ ಸಮಿತಿಗೆ ಅಧ್ಯಕ್ಷರಾಗಿ ಶಬೀರ್ ತಲಪಾಡಿ, ಶಿಯಾಬ್ ತಂಗಳ್, ಸಾಜಿದ್ ಉಳ್ಳಾಲ, ಸಿದ್ಧಿಪ್ ಅರ್ಕಾನ ಪದಗ್ರಹಣ ಸ್ವೀಕರಿಸಿದರು.
ಜೆಡಿಎಸ್ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹೈದರ್ ಪರ್ತಿಪ್ಪಾಡಿ, ಜೇಸಿಐ ಕೊಣಾಜೆ ಮಂಗಳಗಂಗೋತ್ರಿ ಮಾಜಿ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ನ ಅನ್ಸಾರ್ನ ಕೆ.ಎಂ.ಸಿದ್ದೀಖ್ ಮೋಂಟುಗೋಳಿ ಭಾಗವಹಿಸಿದ್ದರು. ಡಿ.ಐ ಅಬೂಬಕರ್ ಕೈರಂಗಳ ಸ್ವಾಗತಿಸಿದರು. ಡಾ| ಮಂಜುಳಾ ಶೆಟ್ಟಿ ನಿರೂಪಿಸಿದರು. ಪ್ರಶಾಂತ್ ಭಟ್ ಕಡಬ ಪ್ರಾಸ್ತಾವಿಕ ಮಾತುಗಳನ್ನಾಡಿದರು ಸುಕೇಶ್ ಜೆ.ಕೆ. ಉಚ್ಚಿಲ್ ವಂದಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post