ಪುತ್ತೂರು: ವಿವಾಹಿತ ಮಹಿಳೆಯೊಬ್ಬಳು ಅನ್ಯಕೋಮಿನ ನಾಲ್ಕು ಮಕ್ಕಳ ತಂದೆಯ ಜತೆ ಓಡಿ ಹೋಗಿದ್ದು, ಅವರಿಬ್ಬರು ರಿಜಿಸ್ಟರ್ ಮದುವೆಯಾಗಲು ಸಿದ್ದತೆ ನಡೆಸಿರುವುದಾಗಿ ತಿಳಿದು ಬಂದಿದೆ. ಇದೊಂದು ಲವ್ ಜಿಹಾದ್ ಪ್ರಕರಣ, ಪೊಲೀಸ್ ಇಲಾಖೆ ತಕ್ಷಣ ಮಧ್ಯ ಪ್ರವೇಶಿಸಿ ಇದನ್ನು ತಡೆಯಬೇಕೆಂದು ಹಿಂದೂತ್ವವಾದಿ ಸಂಘಟನೆಗಳು ಆಗ್ರಹಿಸಿವೆ.
ವಿಟ್ಲಪಡ್ನೂರು ಗ್ರಾಮದ 2 ಮಕ್ಕಳ ತಾಯಿ ನಾಪತ್ತೆಯಾದ ಮಹಿಳೆ. ಈಕೆ ನಾಪತ್ತೆಯಾದ ಬಗ್ಗೆ ಐದು ದಿನಗಳ ಹಿಂದೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಹಿಳೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈಕೆ ಸಜಿಪ ಮೂಲದ ಅನ್ಯ ಕೋಮಿಗೆ ಸೇರಿದ ನಾಲ್ಕು ಮಕ್ಕಳ ತಂದೆಯ ಜತೆಗೆ ಪಲಾಯನ ಮಾಡಿದ್ದಾರೆಂದು ಅವರು ಆರೋಪಿಸಿದ್ದಾರೆ.
ಮಹಿಳೆಯ ಪತಿ ನಿಧನವಾಗಿದ್ದು, ಮಕ್ಕಳ ಜತೆಗೆ ಪರ್ತಿಗ್ರಾಮ ಗ್ರಾಮ ಚಾವಡಿಯಲ್ಲಿ ವಾಸವಾಗಿದ್ದರು. ಈಕೆ ನಾಪತ್ತೆಯಾಗುತ್ತಿದ್ದಂತೆ ಪುತ್ರ ಠಾಣೆಗೆ ದೂರು ನೀಡಿದ್ದಾರೆ. ವಶೀಕರಣ ಮಾಡಿ ವಿಧವೆ ಮಹಿಳೆಯನ್ನು ಬಲೆಗೆ ಬೀಳಿಸಲಾಗಿದೆ ಎಂಬ ಮಾತು ಕುಟುಂಬ ಸದಸ್ಯರಿಂದ ಕೇಳಿ ಬರುತ್ತಿದೆ. ಇನ್ನೂ ಇವರಿಬ್ಬರು ಬಂಟ್ವಾಳ ನೊಂದಾವಣಿ ಕಛೇರಿಯಲ್ಲಿ ವಿವಾಹಕ್ಕೆ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದು ಬಂದಿದ್ದು ಮೂಲಕ ಲವ್ ಜಿಹಾದ್ ಎಂಬ ಅನುಮಾನಗಳು ವ್ಯಕ್ತವಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post