• About us
  • Contact us
  • Disclaimer
Friday, October 31, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಮಹೀಂದ್ರಾ ಇಲೆಕ್ಟ್ರಿಕ್ ರಿಕ್ಷಾ ಕಂಪೆನಿ ವಿರುದ್ಧ ರಿಕ್ಷಾ ಚಾಲಕರಿಂದ ಪ್ರತಿಭಟನೆ

Coastal Times by Coastal Times
January 10, 2024
in ಕರಾವಳಿ
ಮಂಗಳೂರು: ಮಹೀಂದ್ರಾ ಇಲೆಕ್ಟ್ರಿಕ್ ರಿಕ್ಷಾ ಕಂಪೆನಿ ವಿರುದ್ಧ ರಿಕ್ಷಾ ಚಾಲಕರಿಂದ ಪ್ರತಿಭಟನೆ
73
VIEWS
WhatsappTelegramShare on FacebookShare on Twitter

ಮಂಗಳೂರು: ಬೈಕಂಪಾಡಿಯಲ್ಲಿರುವ ಎಲೆಕ್ಟ್ರಿಕ್ ಆಟೋ ರಿಕ್ಷಾ ಸರ್ವೀಸ್ ಸಂಸ್ಥೆಯೊಂದರಿಂದ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಮಂಗಳೂರು ನಗರದ ಮಿನಿ ವಿಧಾನಸೌಧದ ಎದುರು ಇಂದು ಇವಿ (ಎಲೆಕ್ಟ್ರಿಕ್) ಆಟೋ ರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದರು.

ಸರಿಯಾದ ಸಮಯಕ್ಕೆ ದುರಸ್ತಿ ಮಾಡಿಕೊಡುತ್ತಿಲ್ಲ, ಬಿಡಿ ಭಾಗಗಳು ಸಿಗುತ್ತಿಲ್ಲ. ವಾರಂಟಿ ಷರತ್ತುಗಳನ್ನು ಪಾಲಿಸುತ್ತಿಲ್ಲ. ಸರಕಾರದ ಸಬ್ಸಿಡಿಯನ್ನು ನೀಡುತ್ತಿಲ್ಲ ಎಂದು ಚಾಲಕರು ದೂರಿದರು.

ಇವಿ ಟ್ರಿಯೋ ರಿಕ್ಷಾ ಕಮಿಟಿ ಅಧ್ಯಕ್ಷ ಅನಿಲ್ ಸಾಲ್ಡಾನ ಪಚ್ಚನಾಡಿ ಮಾತನಾಡಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶವನ್ನು ಹೆಚ್ಚಿಸುವ ಉದ್ದೇಶದಿಂದ ಬಳಕೆಗೆ ಬಂದ ಇ.ವಿ ರಿಕ್ಷಾಗಳು ಚಾಲಕರ ಮೇಲೆ ಸಾಲದ ಹೊರೆಯನ್ನು ಹೆಚ್ಚಿಸುತ್ತಿದೆ ಹೊರತು ಆದಾಯವನ್ನು ಗಳಿಸುವಲ್ಲಿ ಯಾವ ನೆರವು ಆಗುತ್ತಿಲ್ಲ. 3.5 ಲಕ್ಷ ರೂ. ವೆಚ್ಚದಲ್ಲಿ ರಿಕ್ಷಾ ಖರೀದಿಸಿದ ಸಂದರ್ಭದಲ್ಲಿ 3 ವರ್ಷದ  ಗ್ಯಾರಂಟಿಯನ್ನು ಕಂಪೆನಿ ನೀಡಿತ್ತು. ಆದರೆ ಒಂದ ವರ್ಷದೊಳಗೆಯೇ ಇ.ವಿ ರಿಕ್ಷಾಗಳು ಸಮಸ್ಯೆಗಳಿಗೆ ಗುರಿಯಾಗುತ್ತಿವೆ. ಬೈಕಂಪಾಡಿಯ ಸರ್ವಿಸ್ ಸ್ಟೇಷನ್ ಗೆ ರಿಪೇರಿಗೆ ಹೋಗುವ ಇ.ವಿ. ರಿಕ್ಷಾಗಳು ಸಮಸ್ಯೆಗಳಿಗೆ ಗುರಿಯಾಗುತ್ತಿವೆ. ಬೈಕಂಪಾಡಿಯ ಸರ್ವಿಸ್ ಸ್ಟೇಷನ್ ಗೆ ರಿಪೇರಿಗೆ ಹೋಗುವ ಇ.ವಿ. ರಿಕ್ಷಾಗಳು ಕೇವಲ ಹೆಸರಿಗೆ ಮಾತ್ರ ರಿಪೇರಿಯಾಗಿ ಹೊರ ಬರುತ್ತಿದ್ದು, ತೊಂದರೆಗಳು ಮರುಕಳಿಸುತ್ತಲೇ ಇವೆ. ಇದು ನಮ್ಮ ದಿನದ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸಾಲದ ಹೊರೆಯು ಹೆಚ್ಚಾಗುತ್ತಿದೆ ಎಂದು ದೂರಿದರು.

ಇ.ವಿ ರಿಕ್ಷಾಗಳಿಗೆ ಕೇಂದ್ರ ಸರಕಾರದಿಂದ ಸಿಗುವ ಸಬ್ಸಿಡಿ ಯಾವ ರಿಕ್ಷಾ ಚಾಲಕರಿಗೂ ಸಮರ್ಪಕವಾಗಿ ದೊರೆಯುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳ ಕುರಿತು 20 ದಿನಗಳ ಹಿಂದೆ ಸಂಬಂಧಿಸಿದವರಿಗೆ ಪತ್ರ ಬರೆದರೂ ಯಾವ ಪ್ರಯೋಜನವಾಗಿಲ್ಲ. ಅವರ ಬಳಿ ನಮ್ಮ ಸಮಸ್ಯೆಗಳನ್ನು ಕೇಳಲು ಸಮಯವಿಲ್ಲ ಎಂದು ರಿಕ್ಷಾ ಚಾಲಕ ಮೋಹನ್ ಕಡ್ಯದ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆಯ ವೇಳೆ ಗೌಪ್ಯವಾಗಿ ಆಟೋ ರಿಕ್ಷಾ ಚಾಲಕರ ವೀಡಿಯೋ ಮಾಡುತ್ತಿದ್ದ ಕಂಪೆನಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪೊಲೀಸರು ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡರು.

ಚಾಲಕರು ಮತ್ತು ಮಾಲಕರು ಇವಿ ಟ್ರಿಯೋ ರಿಕ್ಷಾ ಕಮಿಟಿ ಗೌರವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ರೋಹಿತ್ ಕೋಟ್ಯಾನ್ ಬಿಜೈ, ಗೌರವ ಸಲಹೆಗಾರ ಅವಿಲ್, ಪ್ರಧಾನ ಕಾರ್ಯದರ್ಶಿ ರಾಮನಾಥ ಪ್ರಭು, ಕಾರ್ಯದರ್ಶಿ ಸಂತೋಷ್ ಕುಮಾರ್, ಕೋಶಾಧಿಕಾರಿ ಶೈಲೇಂದ್ರ ಕೊಲ್ಯ, ಸಂಘದ ಮುಖಂಡರಾದ ಗೋವಿಂದ ಶೆಟ್ಟಿ, ಚಂದ್ರಹಾಸ್, ಅಶ್ವಿನ್ ಧೀರಜ್, ಮೋಹನ್ ಕೃಷ್ಣ, ಸುಖೇಶ್ ನಂತೂರು, ಹರೀಶ್ ಶಿವಪ್ರಸಾದ್, ಗುರುರಾಜ್ ಅಡ್ಯಾರ್, ರಶೀದ್, ಶರತ್ ಪದಂಗಡಿ ಸಂತೋಷ್, ಪ್ರಕಾಶ್ ವಿ.ಎನ್. ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

 

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಬಂಟ್ವಾಳ: ಸರಕಾರಿ ಬಸ್ ಸ್ಕೂಟರ್ ಗೆ ಢಿಕ್ಕಿ ವಿದ್ಯಾರ್ಥಿನಿಗೆ ಗಾಯ

Next Post

ಹಾವೇರಿ: ಅನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ತಿರುವು, ಮುಸ್ಲಿಂ ಮಹಿಳೆ ಅಪಹರಿಸಿ ಏಳು ಮಂದಿಯಿಂದ ಗ್ಯಾಂಗ್ ರೇಪ್

Related Posts

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್
ಕರಾವಳಿ

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್

October 31, 2025
35
ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ
ಕರಾವಳಿ

ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ

October 31, 2025
76
Next Post
ಹಾವೇರಿ: ಅನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ತಿರುವು, ಮುಸ್ಲಿಂ ಮಹಿಳೆ ಅಪಹರಿಸಿ ಏಳು ಮಂದಿಯಿಂದ ಗ್ಯಾಂಗ್ ರೇಪ್

ಹಾವೇರಿ: ಅನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ತಿರುವು, ಮುಸ್ಲಿಂ ಮಹಿಳೆ ಅಪಹರಿಸಿ ಏಳು ಮಂದಿಯಿಂದ ಗ್ಯಾಂಗ್ ರೇಪ್

Discussion about this post

Recent News

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್

October 31, 2025
35
ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ

ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ

October 31, 2025
76
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್

ನಾಯಕರೊಬ್ಬರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ವಿಕಾಸ್ ಪುತ್ತೂರು ವಿರುದ್ಧ ಎಫ್ಐಆರ್

October 31, 2025
ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ

ಬಂಟ್ವಾಳ ಗಾಯಾಳುವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸಿಗೆ ಸೈಡ್ ಕೊಡದೆ ಸತಾಯಿಸಿದ ಬೈಕ್ ಸವಾರ ಬಂಧನ

October 31, 2025
15 ದಿನದ ಒಳಗೆ ಏರ್‌ಪೋರ್ಟ್ ರಸ್ತೆ ದುರಸ್ತಿಯಾಗದಿದ್ದರೆ ತೀವ್ರ ಪ್ರತಿಭಟನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ

15 ದಿನದ ಒಳಗೆ ಏರ್‌ಪೋರ್ಟ್ ರಸ್ತೆ ದುರಸ್ತಿಯಾಗದಿದ್ದರೆ ತೀವ್ರ ಪ್ರತಿಭಟನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ

October 30, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d