• About us
  • Contact us
  • Disclaimer
Sunday, June 1, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಾದ್ ಸೈಮಾಚೊ : ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗ

Coastal Times by Coastal Times
August 12, 2023
in ಕರಾವಳಿ
ಸಾದ್ ಸೈಮಾಚೊ : ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗ
27
VIEWS
WhatsappTelegramShare on FacebookShare on Twitter

ಕವಿತಾ ಟ್ರಸ್ಟ್ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ `ಸಾದ್ ಸೈಮಾಚೊ’ (ಪ್ರಕೃತಿಯ ನಾದಗಳು) ಎಂಬ ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗವನ್ನು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಸಹಕಾರದಲ್ಲಿ ಆಗಸ್ಟ್ 06 ರಂದು ನಡೆಸಿತು. ಗೋವಾದ ಢಾಯಿ ಆಖಾರ್ (ಎರಡುವರೆ ಅಕ್ಷರ) ತಂಡವು ಪ್ರಕೃತಿಯ ದನಿಗಳಿಗೆ ಸಂಬಂಧಪಟ್ಟ ಹಿಂದಿ ಮತ್ತು ಕೊಂಕಣಿಯ ಸಾಹಿತ್ಯವನ್ನು ಸಾದರಪಡಿಸಿದರು.

ಕೇದಾರ್‌ನಾಥ್ ಸಿಂಗ್‌ ಇವರ ‘ಬಾಫ್, ಸಲೀಲ್ ಚತುರ್ವೇದಿಯ ‘ಕಹಾಂ ಗಯೀ ಓ ನದೀ ಕೀ ಧಾರ್’ ಮತ್ತು

ಜಾರ್ಕಂಡಿನ ಜಾಸಿಂತಾ ಕೆರ್ಕಟ್ಟಾ ಇವರ ನದೀ, ಪಹಾಡ್ ಔರ್ ಬಜಾರ್’ – ಹಿಂದಿ ಕವಿತೆಗಳನ್ನು ಹಾಗೂ ಮಮತಾ ವೆರ್ಲೇಕರ್ ಇವರ ‘ಗುಪೀತ್‌’, ‘ಫೊಂಡ್ಕುಲಾಂ’ ಮತ್ತು ಪ್ರಕಾಶ್ ಪರಿಯೆಂಕಾರ್ ಇವರ ‘ಪಾಣಿ ಆತಾಂ ದೆಂವಾ’ ಹಾಗೂ ‘ಹಿ ರಾನ್‌ಕಾಣಿ’ ಕವಿತೆಗಳನ್ನು ಪ್ರಸ್ತುತಪಡಿಸಿದರು.

ಜ್ಞಾನಪೀಠ ಪುರಸ್ಕಾರ ವಿಜೇತ ಸಾಹಿತಿ ದಾಮೋದರ ಮಾವೊ ಇವರ ಕತೆ ‘ಭುರ್ಗಿಂ ಮುಗಲಿಂ ತಿಂ’ ವಿಷಯ ಮತ್ತು ಪ್ರಸ್ತುತಿಯ ಕಾರಣಕ್ಕಾಗಿ ನರದ ಕೇಳುಗರ ಕಣ್ಣಲ್ಲಿ ನೀರೂರಿಸಿತು. ಡಾ. ರಮಿತಾ ಗುರವ್, ಡಾ. ಮನೀಷಾ ಬೊರಾಟೆ ಮತ್ತು ಮಮತಾ ವರ್ಲೆಕಾ‌ ಸುಂದರವಾಗಿ ಇವನ್ನು ವಾಚಿಸಿದರು. ಆರ್ತಿ ದಾಸ್ ಮತ್ತು ನಿಯತಿ ಪತ್ರ ಸಾಹಿತ್ಯ ಮತ್ತು ಸಾಹಿತಿಗಳ ಹಿನ್ನಲೆ ವಿವರಿಸಿದರು.

ಪ್ರತಿಷ್ಟಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರು ಬಾಳಿಗಾ ಢಾಯಿ ಅಖಾರ್ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕವಿತಾ ಟ್ರಸ್ಟ್ ಟ್ರಸ್ಟಿಗಳಾದ ವಿಲಿಯಮ್ ಪಾಯ್ಸ್ ಸ್ವಾಗತಿಸಿ, ವಿಕ್ಟರ್ ಮತಾಯಸ್ ವಂದಿಸಿದರು.

ನಂತರ ಸಾಹಿತ್ಯ ಅಕಾಡೆಮಿ ನವದೆಹಲಿ, ಕವಿತಾ ಟ್ರಸ್ಟ್ ಸಹಕಾರದಲ್ಲಿ ಆಯೋಜಿಸಿದ `ಲೋಕ: ವಿವಿಧ ಸ್ವರಗಳು’ ಎಂಬ ಜಾನಪದ ಕಾರ್ಯಕ್ರಮ ನಡೆಯಿತು. ನವ ಸಿದ್ಧಿ ಕಲಾ ತಂಡ ಮೈನಳ್ಳಿ ಇವರಿಂದ ಡಮಾಮ್, ಫುಗ್ಗಿ, ಜಾಕಯ್ ಮತ್ತು ಶಿಗೊ ಆಟಗಳ ಪ್ರಸ್ತುತಿ ನಡೆಯಿತು. ಕಲಾವಿದ ಸುನೀಲ್ ಸಿದ್ದಿ ಈ ಪ್ರಕಾರಗಳ ವಿವರಣೆ ನೀಡಿದರು. ಅಕಾಡೆಮಿಯ ಕೊಂಕಣಿ ಸಲಹಾ ಸಮಿತಿಯ ಅಧ್ಯಕ್ಷ ಮೆಲ್ವಿನ್ ರೊಡ್ರಿಗಸ್ ಕಲಾವಿದರನ್ನು ಗೌರವಿಸಿದರು. ಸದಸ್ಯಾ ಎಚ್ಚೆಮ್ ಪೆರ್ನಾಳ್ ಸ್ವಾಗತಿಸಿದರು. ಇನ್ನೋರ್ವ ಸದಸ್ಯ ಸ್ಟ್ಯಾನಿ ಬೇಳ ಧನ್ಯವಾದವನ್ನಿತ್ತರು

 

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ‌ ಅರೆಸ್ಟ್

Next Post

ದಕ್ಷಿಣ ಕನ್ನಡದಲ್ಲಿ ಪ್ಯಾನ್ಲ್ಯು ಕೋಪೆನಿಯಾ ವೈರಸ್ ಹಾವಳಿಗೆ ಸಾಯುತ್ತಿರುವ ಬೆಕ್ಕುಗಳು!

Related Posts

ಮಂಗಳೂರು: ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಖಡಕ್​ ವಾರ್ನಿಂಗ್
ಕರಾವಳಿ

ಮಂಗಳೂರು: ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಖಡಕ್​ ವಾರ್ನಿಂಗ್

June 1, 2025
43
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ  ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ
ಕರಾವಳಿ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

May 30, 2025
141
Next Post
ದಕ್ಷಿಣ ಕನ್ನಡದಲ್ಲಿ ಪ್ಯಾನ್ಲ್ಯು ಕೋಪೆನಿಯಾ ವೈರಸ್ ಹಾವಳಿಗೆ ಸಾಯುತ್ತಿರುವ ಬೆಕ್ಕುಗಳು!

ದಕ್ಷಿಣ ಕನ್ನಡದಲ್ಲಿ ಪ್ಯಾನ್ಲ್ಯು ಕೋಪೆನಿಯಾ ವೈರಸ್ ಹಾವಳಿಗೆ ಸಾಯುತ್ತಿರುವ ಬೆಕ್ಕುಗಳು!

Discussion about this post

Recent News

ಮಂಗಳೂರು: ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಖಡಕ್​ ವಾರ್ನಿಂಗ್

ಮಂಗಳೂರು: ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಖಡಕ್​ ವಾರ್ನಿಂಗ್

June 1, 2025
43
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ  ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

May 30, 2025
141
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಖಡಕ್​ ವಾರ್ನಿಂಗ್

ಮಂಗಳೂರು: ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಖಡಕ್​ ವಾರ್ನಿಂಗ್

June 1, 2025
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ  ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

May 30, 2025
ಉಳ್ಳಾಲದ ಮಂಜನಾಡಿ ಗ್ರಾಮದ ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ‌-ಇಬ್ಬರು ಮೊಮ್ಮಕ್ಕಳು ಸಾವು, ನಾಲ್ವರ ರಕ್ಷಣೆ

ಉಳ್ಳಾಲದ ಮಂಜನಾಡಿ ಗ್ರಾಮದ ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ‌-ಇಬ್ಬರು ಮೊಮ್ಮಕ್ಕಳು ಸಾವು, ನಾಲ್ವರ ರಕ್ಷಣೆ

May 30, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d