ಮಂಗಳೂರು: ಪುತ್ತೂರಿನ ಬ್ರೈಟ್ ವಿದ್ಯಾ ಸಂಸ್ಥೆ ಗಳ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರಾಗಿದ್ದ ಕನ್ನಡ್ಕ ಗಣೀಶ ನಾಯಕ್ ಇಂದಾಜೆ (59)ನಗರದ ಖಾಸಗಿ ಆಸ್ಪತ್ರೆಯ ಲ್ಲಿಂದು ನಿಧನ ಹೊಂದಿದರು.
ದೆಹಲಿ ನ್ಯಾಶನಲ್ ಯೂತ್ ಪ್ರೋಜೆಕ್ಟ್ ನ ಜಿಲ್ಲಾ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿರುವ ಇವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಗಣೇಶೋ ತ್ಸವ ಸಮಿತಿಯ ಕಾರ್ಯ ದರ್ಶಿಯಾಗಿ, ಪುತ್ತೂರು ಗ್ರಾಹಕರ ವೇದಿಕೆ ಯ ಸದಸ್ಯ ರಾಗಿ ಸೇವೆ ಸಲ್ಲಿಸಿರುತ್ತಾರೆ.
ಅವರಿಗೆ ಪತ್ನಿ ವಂದನಾ ನಾಯಕ್, ಪುತ್ರಿ ಐಶ್ವರ್ಯ, ಪುತ್ರ ಅಭಿಷೇಕ್, ಸಹೋದರರಾದ ದಾಮೋದರ್ ನಾಯಕ್, ರಾಮಕೃಷ್ಣ ನಾಯಕ್, ಸುಬ್ರಾಯ ನಾಯಕ್, ವರದರಾಜ್ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಾಧವ ನಾಯಕ್, ವೆಂಕಟೇಶ್ ನಾಯಕ್ ಮತ್ತು ಐವರು ಸಹೋದರಿಯರು ಇದ್ದಾರೆ.
Discussion about this post