ಮಂಗಳೂರು, ಡಿ 14 : ನೀರುಮಾರ್ಗ ಸಮೀಪದ ಪಡು ಪೋಸ್ಟ್ ಆಫೀಸ್ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಮಹಮ್ಮದ್ ರಿಯಾಜ್ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬಂಡಂತಿಲ ಕಾಪೆಟ್ಟು ಸೈಟ್ ನ ಗಣೇಶ್(23), ಬಂಟಕಟ್ಟಾ ಪಡು ನಿವಾಸಿ ಚೇತನ್ ಕುಮಾರ್(21), ಕಟ್ಟಿಂಜ ಸೈಟ್ ನ ಕೀರ್ತಿ ರಾಜ್(23), ನೀರು ಮಾರ್ಗ ರಂಗಪಾದೆಯ ಸುವೀತ್(19), ಬೊಂಡಂತಿಲದ ಪರೀಕ್ಷಿತ್(20) ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.ಡಿಸೆಂಬರ್ 10ರ ಶುಕ್ರವಾರ ಪಡು ಎಂಬಲ್ಲಿ ಕಾರಿನಲ್ಲಿದ್ದ ಸ್ಥಳೀಯ ನಿವಾಸಿಗೆ ಅಬ್ದುಲ್ ರಜಾಕ್ ಗೆ ಕಾರಿನಲ್ಲಿ ಬಂದ ತಂಡ ಚೂರಿ ಇರಿದು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಪೊಲೀಸ್ ಪರಿಶೀಲನೆ ವೇಳೆ ಅಬ್ದುಲ್ ರಜಾಕ್ ಸಂಬಂಧಿಸಿದ ರಿಟ್ಜ್ ಕಾರಿನಲ್ಲಿ ಮಹಿಳೆ ಧರಿಸುವ ಒಂದು ಜತೆ ಚಪ್ಪಲಿ ಹಾಗೂ ಮಹಿಳೆಗೆ ಸಂಬಂಧಿಸಿದ ಇತರ ವಸ್ತುಗಳು ಪತ್ತೆಯಾಗಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post