• About us
  • Contact us
  • Disclaimer
Thursday, October 30, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಳ್ಳಾಲ ಚೆಂಬುಗುಡ್ಡೆ : ಇನ್ಫೊಸಿಸ್‌ ಫೌಂಡೇಶನ ವತಿಯಿಂದ ವಿದ್ಯುತ್ ಚಿತಾಗಾರದ ನಿರ್ಮಾಣ ಪೂರ್ಣ

Coastal Times by Coastal Times
January 18, 2022
in ಕರಾವಳಿ
ಉಳ್ಳಾಲ ಚೆಂಬುಗುಡ್ಡೆ : ಇನ್ಫೊಸಿಸ್‌  ಫೌಂಡೇಶನ ವತಿಯಿಂದ  ವಿದ್ಯುತ್ ಚಿತಾಗಾರದ ನಿರ್ಮಾಣ ಪೂರ್ಣ
33
VIEWS
WhatsappTelegramShare on FacebookShare on Twitter

ಉಳ್ಳಾಲ: ಚೆಂಬುಗುಡ್ಡೆ ಹಿಂದೂ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇಸ್ಫೊಸಿಸ್ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ಚಿತಾಗಾರವನ್ನು ಶೀಘ್ರವೇ ಉಳ್ಳಾಲ ನಗರಸಭೆಗೆ ಹಸ್ತಾಂತರಿಸಲು ಸಿದ್ಧತೆ ನಡೆದಿದೆ.

ಸುಮಾರು ₹ 1.80 ಕೋಟಿ ವೆಚ್ಚದಲ್ಲಿ 3,000 ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಾಣವಾದ ಕಟ್ಟಡದೊಳಗೆ ಕ್ರಿಮೆಟೋರಿಯಂ ಬಹುಭಾಗವನ್ನು ಹೊಂದಿದ್ದು, ಉಳಿದ ಸ್ಥಳದಲ್ಲಿ ಎಲೆಕ್ಟ್ರಿಕಲ್ ಕೊಠಡಿ, ಕಚೇರಿ, ಶೌಚಾಲಯವನ್ನು ನಿರ್ಮಿಸಲಾಗಿದೆ. 2021ರ ಜು.12 ರಂದು ವಿದ್ಯುತ್ ಚಿತಾಗಾರದ ಶಿಲಾನ್ಯಾಸವನ್ನು ಜಿಲ್ಲಾಡಳಿತ ನೆರವೇರಿಸಿತ್ತು.

ನ.30ರಂದೇ ಚಿತಾಗಾರದ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ವಿದ್ಯುತ್ ಸಂಪರ್ಕದ ವ್ಯವಸ್ಥೆಯಾಗದೆ ಹಿನ್ನೆಡೆಯಾಗಿತ್ತು. ಇದೀಗ ವಿದ್ಯುತ್ ಸಂಪರ್ಕವೂ ಚಿತಾಗಾರಕ್ಕೆ ದೊರೆತಿದೆ. ಇಸ್ಫೊಸಿಸ್ ಸಂಸ್ಥೆಯ ಕಾಮಗಾರಿ ಕೈಗೊಳ್ಳುವ ಐಆರ್ ಡಬ್ಲ್ಯು ಕನ್‌ಸ್ಟ್ರಕ್ಷನ್ಸ್ ಕಂಪನಿ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದೆ.

ವಿದ್ಯುತ್ ಚಿತಾಗಾರದ ಅಳವಡಿಕೆಯನ್ನು ಬೆಂಗಳೂರಿನ ಪ್ರಭಾಕರ್ ಮಾಡಿದ್ದಾರೆ. ಮಂಗಳೂರಿನ ಬೋಳೂರಿನಲ್ಲಿಯೂ ಪ್ರಭಾಕರ್ ಅವರ ನಿರ್ದೇಶನದಂತೆ ವಿದ್ಯುತ್ ಚಿತಾಗಾರವನ್ನು ಅಳವಡಿಸಲಾಗಿದೆ. 42 ಕಿಲೋ ವ್ಯಾಟ್ ವಿದ್ಯುತ್ ಸಾಮರ್ಥ್ಯವನ್ನು ಚಿತಾಗಾರಕ್ಕೆ ಅಳವಡಿಸಲಾಗಿದ್ದು, ಒಂದು ಹೆಣ ಸುಡಲು ₹ 400 ವಿದ್ಯುತ್ ಖರ್ಚಾಗಲಿದೆ. ಮುಂದಿನ ದಿನಗಳಲ್ಲಿ ಉಳ್ಳಾಲ ನಗರಸಭೆಗೆ ವಿದ್ಯುತ್ ಚಿತಾಗಾರವನ್ನು ಹಸ್ತಾಂತರಿಸಿದ ಬಳಿಕ ಸ್ಮಶಾನದಲ್ಲಿ ಒಬ್ಬ ಆಪರೇಟರ್ ಅನ್ನು ನಗರಸಭೆ ನೀಡಬೇಕಾಗಿದ್ದು, ಸಂಪೂರ್ಣ ಚಿತಾಗಾರದ ನಿರ್ವಹಣೆಯನ್ನು ನೋಡಬೇಕಾಗಿದೆ.

ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿರುವ ಚೆಂಬುಗುಡ್ಡೆ ಹಿಂದೂ ಸ್ಮಶಾನ ಐವತ್ತು ವರ್ಷಕ್ಕಿಂತಲೂ ಹಳೆಯದಾಗಿದೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿರುವ ಈ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರದ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಜಿಲ್ಲಾಡಳಿತ ಒಪ್ಪಿಗೆ ನೀಡಿದ ಎಂಟು ತಿಂಗಳುಗಳಲ್ಲಿ ವಿದ್ಯುತ್ ಚಿತಾಗಾರ ಚೆಂಬುಗುಡ್ಡೆಯಲ್ಲಿ ನಿರ್ಮಾಣವಾಗಿದೆ.

ಈ ನಡುವೆ 10 ವರ್ಷಗಳಿಂದ ಈಚೆಗೆ ಈ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಸ್ಮಶಾನದ ಸುತ್ತಮುತ್ತ ಮನೆಗಳ ಶಾಲಾ ಕಾಲೇಜುಗಳು ತಲೆ ಎತ್ತಿದ್ದು, ವಾಯುಮಾಲಿನ್ಯವೂ ಇಲ್ಲಿನ ಜನರಿಗೆ ಸಮಸ್ಯೆಯಾಗುತ್ತಿದೆ. ಇನ್ನೊಂದೆಡೆ ಈ ಸ್ಮಶಾನದಲ್ಲಿ ಸಾವಿರಗಟ್ಟಲೆ ಕ್ವಿಂಟಲ್ ಲೆಕ್ಕದಲ್ಲಿ ಕಟ್ಟಿಗೆಯೂ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ವಿದ್ಯುತ್ ಚಿತಾಗಾರದ ಬೇಡಿಕೆ ಇಡಲಾಗಿತ್ತು.

ಸ್ಮಶಾನ ನಿರ್ವಹಣಾ ಸಮಿತಿಯ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಪದಾಧಿಕಾರಿಗಳಾದ ಈಶ್ವರ್ ಉಳ್ಳಾಲ್, ಸುರೇಶ್ ಭಟ್ ನಗರ, ವಿಠಲ ಶ್ರೀಯಾನ್, ರಾಜೀವ ಮೆಂಡನ್, ರಮೇಶ್ ಮೆಂಡನ್, ಭಾಸ್ಕರ ಶೆಟ್ಟಿ, ಸುಂದರ ಅಮೀನ್, ಶೇಖರ್ ಚೊಂಬುಗುಡ್ಡೆ, ಸ್ಥಳೀಯ ನಗರಸಭೆ ಸದಸ್ಯರಾದ ಶಶಿಕಲಾ ಹಾಗೂ ಬಾಝಿಲ್ ಡಿಸೋಜ ಏಳು ತಿಂಗಳ ಹಿಂದೆ ಕ್ಷೇತ್ರದ ಶಾಸಕ ಯು.ಟಿ.ಖಾದರ್ ರವರಿಗೆ ಮನವಿಯನ್ನು ಸಲ್ಲಿಸಿದ್ದರು. ಸಮಿತಿಯ ಮನವಿಯನ್ನು ಶಾಸಕರು ಜಿಲ್ಲಾಧಿಕಾರಿಗೆ ನೀಡಿದ್ದು, ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸಂಬಂಧಿಸಿದ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಬೈಂದೂರು : ‘ ಸಹಕಾರ ಭಾರತಿ ‘ ಸ್ಥಾಪನ ದಿನಾಚರಣೆ – 2022

Next Post

ಮಂಗಳೂರು : ಗಿಫ್ಟ್ ಕಳುಹಿಸಿಕೊಡುವುದಾಗಿ ಹೇಳಿ 2.92 ಲ.ರೂ. ಪಡೆದು ವಂಚನೆ

Related Posts

ಸ್ಪೀಕರ್ ಕೊಠಡಿ ಶಾಸಕರ ಭವನ ನವೀಕರಣ ನೆಪದಲ್ಲಿ ಕೋಟ್ಯಂತರ ದುಂದುವೆಚ್ಚ, ನ್ಯಾಯಾಂಗ ತನಿಖೆಗೆ ಶಾಸಕ ಭರತ್ ಶೆಟ್ಟಿ ಒತ್ತಾಯ
ಕರಾವಳಿ

ಸ್ಪೀಕರ್ ಕೊಠಡಿ ಶಾಸಕರ ಭವನ ನವೀಕರಣ ನೆಪದಲ್ಲಿ ಕೋಟ್ಯಂತರ ದುಂದುವೆಚ್ಚ, ನ್ಯಾಯಾಂಗ ತನಿಖೆಗೆ ಶಾಸಕ ಭರತ್ ಶೆಟ್ಟಿ ಒತ್ತಾಯ

October 29, 2025
20
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ ; ಚಿಕಿತ್ಸೆ ಫಲಿಸದೆ ಪಡುಬಿದ್ರಿ ಎಎಸ್‌ಐ ಪುತ್ರಿ ಸಾವು
ಕರಾವಳಿ

ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ ; ಚಿಕಿತ್ಸೆ ಫಲಿಸದೆ ಪಡುಬಿದ್ರಿ ಎಎಸ್‌ಐ ಪುತ್ರಿ ಸಾವು

October 28, 2025
80
Next Post
ಮಂಗಳೂರು : ಗಿಫ್ಟ್ ಕಳುಹಿಸಿಕೊಡುವುದಾಗಿ ಹೇಳಿ 2.92 ಲ.ರೂ. ಪಡೆದು ವಂಚನೆ

ಮಂಗಳೂರು : ಗಿಫ್ಟ್ ಕಳುಹಿಸಿಕೊಡುವುದಾಗಿ ಹೇಳಿ 2.92 ಲ.ರೂ. ಪಡೆದು ವಂಚನೆ

Discussion about this post

Recent News

ಪುತ್ತೂರು: ವಿಷನ್ ಇಂಡಿಯಾ ಹೆಸರಲ್ಲಿ ದುಬಾರಿ ಗಿಫ್ಟ್ ನಕಲಿ ಲಕ್ಕಿ ಸ್ಕೀಮ್ ಮಂಗಳೂರಿನ ಇಬ್ಬರ ವಿರುದ್ಧ ಕೇಸು ದಾಖಲು

ಪುತ್ತೂರು: ವಿಷನ್ ಇಂಡಿಯಾ ಹೆಸರಲ್ಲಿ ದುಬಾರಿ ಗಿಫ್ಟ್ ನಕಲಿ ಲಕ್ಕಿ ಸ್ಕೀಮ್ ಮಂಗಳೂರಿನ ಇಬ್ಬರ ವಿರುದ್ಧ ಕೇಸು ದಾಖಲು

October 29, 2025
42
ರಾಜ್ಯ ಪೊಲೀಸರಿಗೆ ಬ್ಲೂ ಕ್ಯಾಪ್ ವಿತರಣೆ, ಇತಿಹಾಸದ ಪುಟ ಸೇರಿದೆ ಸ್ಲೋಚ್ ಕ್ಯಾಪ್

ರಾಜ್ಯ ಪೊಲೀಸರಿಗೆ ಬ್ಲೂ ಕ್ಯಾಪ್ ವಿತರಣೆ, ಇತಿಹಾಸದ ಪುಟ ಸೇರಿದೆ ಸ್ಲೋಚ್ ಕ್ಯಾಪ್

October 29, 2025
23
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಪುತ್ತೂರು: ವಿಷನ್ ಇಂಡಿಯಾ ಹೆಸರಲ್ಲಿ ದುಬಾರಿ ಗಿಫ್ಟ್ ನಕಲಿ ಲಕ್ಕಿ ಸ್ಕೀಮ್ ಮಂಗಳೂರಿನ ಇಬ್ಬರ ವಿರುದ್ಧ ಕೇಸು ದಾಖಲು

ಪುತ್ತೂರು: ವಿಷನ್ ಇಂಡಿಯಾ ಹೆಸರಲ್ಲಿ ದುಬಾರಿ ಗಿಫ್ಟ್ ನಕಲಿ ಲಕ್ಕಿ ಸ್ಕೀಮ್ ಮಂಗಳೂರಿನ ಇಬ್ಬರ ವಿರುದ್ಧ ಕೇಸು ದಾಖಲು

October 29, 2025
ರಾಜ್ಯ ಪೊಲೀಸರಿಗೆ ಬ್ಲೂ ಕ್ಯಾಪ್ ವಿತರಣೆ, ಇತಿಹಾಸದ ಪುಟ ಸೇರಿದೆ ಸ್ಲೋಚ್ ಕ್ಯಾಪ್

ರಾಜ್ಯ ಪೊಲೀಸರಿಗೆ ಬ್ಲೂ ಕ್ಯಾಪ್ ವಿತರಣೆ, ಇತಿಹಾಸದ ಪುಟ ಸೇರಿದೆ ಸ್ಲೋಚ್ ಕ್ಯಾಪ್

October 29, 2025
ಸ್ಪೀಕರ್ ಕೊಠಡಿ ಶಾಸಕರ ಭವನ ನವೀಕರಣ ನೆಪದಲ್ಲಿ ಕೋಟ್ಯಂತರ ದುಂದುವೆಚ್ಚ, ನ್ಯಾಯಾಂಗ ತನಿಖೆಗೆ ಶಾಸಕ ಭರತ್ ಶೆಟ್ಟಿ ಒತ್ತಾಯ

ಸ್ಪೀಕರ್ ಕೊಠಡಿ ಶಾಸಕರ ಭವನ ನವೀಕರಣ ನೆಪದಲ್ಲಿ ಕೋಟ್ಯಂತರ ದುಂದುವೆಚ್ಚ, ನ್ಯಾಯಾಂಗ ತನಿಖೆಗೆ ಶಾಸಕ ಭರತ್ ಶೆಟ್ಟಿ ಒತ್ತಾಯ

October 29, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d