ಉಡುಪಿ: ಮಲ್ಪೆಯ ವಡಬಾಂಡೇಶ್ವರದಲ್ಲಿರುವ ಮನೆಯ ಕಂಪೌಂಡ್ ಗೋಡೆಯ ಮೇಲೆ ಹಿಜಾಬ್ ಪರ ಬರಹ ಬರೆಯಲಾಗಿದೆ.
‘ಹಿಜಾಬ್ ಮೂವ್ಮೆಂಟ್, ಹಿಜಾಬ್ ಇಸ್ ರೈಟ್, ಹಿಜಾಬ್ ಇಸ್ ಡಿಗ್ನಿಟಿ’ ಎಂಬ ಸಾಲುಗಳನ್ನು ಬರೆಯಲಾಗಿದೆ. ಮನೆಯ ಮಾಲೀಕರು ಬೇರೆಡೆ ವಾಸವಾಗಿದ್ದು, ಮನೆಯಲ್ಲಿ ಯಾರೂ ಇಲ್ಲ. ತನಿಖೆ ನಡೆಯುತ್ತಿದೆ ಎಂದು ಮಲ್ಪೆ ಠಾಣೆ ಪಿಎಸ್ಐ ಶಕ್ತಿವೇಲು ಮಾಹಿತಿ ನೀಡಿದರು.
ಸುದ್ದಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹಿಜಾಬ್ ಪರ ಗೋಡೆ ಬರಹ ಬರೆದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post