• About us
  • Contact us
  • Disclaimer
Wednesday, July 9, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ದೇಶದಲ್ಲಿ ಓಮೈಕ್ರಾನ್‌ ಪ್ರಕರಣ 101ಕ್ಕೆ ಏರಿಕೆ : ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ

Coastal Times by Coastal Times
December 18, 2021
in ರಾಷ್ಟ್ರೀಯ ಸುದ್ದಿ
ದೇಶದಲ್ಲಿ ಓಮೈಕ್ರಾನ್‌ ಪ್ರಕರಣ 101ಕ್ಕೆ ಏರಿಕೆ : ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ
23
VIEWS
WhatsappTelegramShare on FacebookShare on Twitter

ನವದೆಹಲಿ: ‘ಯೂರೋಪ್‌ ಮತ್ತು ವಿಶ್ವದ ಬೇರೆಡೆ ಕೊರೊನಾ ವೈರಾಣುವಿನ ಓಮೈಕ್ರಾನ್‌ ರೂಪಾಂತರ ತಳಿಯು ತೀವ್ರವಾಗಿ ಹರಡುತ್ತಿದೆ. ಹೀಗಾಗಿ ದೇಶದ ಜನರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ಹೊಸ ವರ್ಷಾಚರಣೆ ಸಣ್ಣ ಪ್ರಮಾಣದಲ್ಲಿ ಇರಬೇಕು’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

ದೇಶದಲ್ಲಿ ಓಮೈಕ್ರಾನ್‌ ರೂಪಾಂತರ ತಳಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಶುಕ್ರವಾರ 101ಕ್ಕೆ ಏರಿಕೆಯಾಗಿದೆ. ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರವು ಹೇಳಿದೆ.

‘ಮಹಾರಾಷ್ಟ್ರದಲ್ಲಿ 32, ದೆಹಲಿಯಲ್ಲಿ 22, ರಾಜಸ್ಥಾನದಲ್ಲಿ 17, ತೆಲಂಗಾಣದಲ್ಲಿ 8, ಕರ್ನಾಟಕದಲ್ಲಿ 8, ಗುಜರಾತ್‌ನಲ್ಲಿ 5, ಕೇರಳದಲ್ಲಿ 5, ಆಂಧ್ರಪ್ರದೇಶ ಚಂಡೀಗಡ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರವು ಮಾಹಿತಿ ನೀಡಿದೆ.

‘ಮಹಾರಾಷ್ಟ್ರದಲ್ಲಿ ಶುಕ್ರವಾರ ಓಮೈಕ್ರಾನ್‌ನ 8 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ’ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7ಕ್ಕೆ ಏರಿದೆ ಎಂದು ಕೇರಳ ಸರ್ಕಾರ ಹೇಳಿದೆ. ಮಹಾರಾಷ್ಟ್ರ ಮತ್ತು ಕೇರಳ ಸರ್ಕಾರ ನೀಡಿರುವ ಸಂಖ್ಯೆಯನ್ನು ಪರಿಗಣಿಸಿದರೆ ದೇಶದಲ್ಲಿ ಪತ್ತೆಯಾದ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 119 ಆಗುತ್ತದೆ.

‘ಓಮೈಕ್ರಾನ್‌ ವ್ಯಾಪಕವಾಗಿರುವ ಮತ್ತು ಓಮೈಕ್ರಾನ್‌ ಇಲ್ಲದ ದೇಶಗಳಿಂದ ಚೆನ್ನೈಗೆ ಬಂದಿಳಿದಿರುವ 28 ಜನರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಅಷ್ಟೂ ಜನರ ಮೂಗು ಮತ್ತು ಗಂಟಲ ದ್ರವದ ಮಾದರಿಯಲ್ಲಿ ಕೋವಿಡ್‌ ದೃಢಪಡಿಸುವ ಎಸ್‌ ವಂಶವಾಹಿಯ ಸಂಖ್ಯೆ ತೀರಾ ಕಡಿಮೆ ಇದೆ. ಅವರಿಗೆ ಓಮೈಕ್ರಾನ್‌ ತಗುಲಿರುವ ಅಪಾಯವಿದೆ. ಮಾದರಿಗಳನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಕಳುಹಿಸಲಾಗಿದೆ’ ಎಂದು ತಮಿಳುನಾಡು ಆರೋಗ್ಯ ಇಲಾಖೆ ಶುಕ್ರವಾರ ಹೇಳಿದೆ.

ತುರ್ತು ಬಳಕೆ: ‘ಕೋವೊವ್ಯಾಕ್ಸ್‌’ಗೆ ಅನುಮತಿ :
ಭಾರತದಲ್ಲಿ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸುತ್ತಿರುವ ಕೋವಿಡ್‌ ಲಸಿಕೆ ‘ಕೋವೊವ್ಯಾಕ್ಸ್‌’ ಅನ್ನು ತುರ್ತು ಸಂದರ್ಭದಲ್ಲಿ ಬಳಸಲು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಅನುಮೋದನೆ ನೀಡಿದೆ. ಅಮೆರಿಕದ ಕಂಪನಿ ನೋವಾವ್ಯಾಕ್ಸ್‌ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಉಪ್ಪಿನಂಗಡಿ, ಲಾಠಿ ಚಾರ್ಜ್ ಖಂಡಿಸಿ ಪಿಎಫ್ ಐ ನಿಂದ ಎಸ್ಪಿ ಚಲೋ

Next Post

ಮಂಗಳೂರು: ‘ರೋಹನ್ ಎಸ್ಟೇಟ್’ ಆಧುನಿಕ ವಸತಿ ಬಡಾವಣೆ ಪಕ್ಷಿಕೆರೆಯಲ್ಲಿ ಲೋಕಾರ್ಪಣೆ

Related Posts

57 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಜೆಂಟೀನಾಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ
ರಾಜಕೀಯ

57 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಜೆಂಟೀನಾಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ

July 5, 2025
34
ಸಾವಿರ ವರ್ಷಗಳ ಇತಿಹಾಸ ಇರುವ ಕೇರಳದ ಕೊಟ್ಟಿಯೂರು ಶಿವ ದೇಗುಲ ವರ್ಷದಲ್ಲಿ 28 ದಿನ ಮಾತ್ರ ತೆರೆದಿರುತ್ತದೆ- ದೇವಾಲಯದ ವಿಶೇಷತೆ ಏನು?
ರಾಷ್ಟ್ರೀಯ ಸುದ್ದಿ

ಸಾವಿರ ವರ್ಷಗಳ ಇತಿಹಾಸ ಇರುವ ಕೇರಳದ ಕೊಟ್ಟಿಯೂರು ಶಿವ ದೇಗುಲ ವರ್ಷದಲ್ಲಿ 28 ದಿನ ಮಾತ್ರ ತೆರೆದಿರುತ್ತದೆ- ದೇವಾಲಯದ ವಿಶೇಷತೆ ಏನು?

June 22, 2025
118
Next Post
ಮಂಗಳೂರು: ‘ರೋಹನ್ ಎಸ್ಟೇಟ್’ ಆಧುನಿಕ ವಸತಿ ಬಡಾವಣೆ ಪಕ್ಷಿಕೆರೆಯಲ್ಲಿ ಲೋಕಾರ್ಪಣೆ

ಮಂಗಳೂರು: ‘ರೋಹನ್ ಎಸ್ಟೇಟ್’ ಆಧುನಿಕ ವಸತಿ ಬಡಾವಣೆ ಪಕ್ಷಿಕೆರೆಯಲ್ಲಿ ಲೋಕಾರ್ಪಣೆ

Discussion about this post

Recent News

ಯೆಮೆನ್ ಪ್ರಜೆಯ ಕೊಲೆ ಪ್ರಕರಣ: ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಯೆಮೆನ್ ನಲ್ಲಿ ಗಲ್ಲು ಶಿಕ್ಷೆ

ಯೆಮೆನ್ ಪ್ರಜೆಯ ಕೊಲೆ ಪ್ರಕರಣ: ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಯೆಮೆನ್ ನಲ್ಲಿ ಗಲ್ಲು ಶಿಕ್ಷೆ

July 9, 2025
138
ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

July 8, 2025
134
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಯೆಮೆನ್ ಪ್ರಜೆಯ ಕೊಲೆ ಪ್ರಕರಣ: ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಯೆಮೆನ್ ನಲ್ಲಿ ಗಲ್ಲು ಶಿಕ್ಷೆ

ಯೆಮೆನ್ ಪ್ರಜೆಯ ಕೊಲೆ ಪ್ರಕರಣ: ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಯೆಮೆನ್ ನಲ್ಲಿ ಗಲ್ಲು ಶಿಕ್ಷೆ

July 9, 2025
ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

July 8, 2025
ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

July 8, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d