ಮಂಗಳೂರು: ನಗರದ ಕದ್ರಿ ಕಂಬ್ಲ ಬಳಿಯಲ್ಲಿ ಕೊಡಕ್ಕೆನ ಹೆಸರಿನ ಹೊಟೇಲ್ ನಡೆಸುತ್ತಿದ್ದ ನಿತಿನ್ ಪೂಜಾರಿ (41) ಹಣಕಾಸು ಮುಗ್ಗಟ್ಟಿನಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ತಡರಾತ್ರಿ ಮಣಗುಡ್ಡದ ಫ್ಲ್ಯಾಟ್ನಲ್ಲಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕದ್ರಿಯಲ್ಲಿ ಕೊಡಕ್ಕೆನ ಹೆಸರಿನ ಹೊಟೇಲ್ನ್ನು ಕೆಲವು ತಿಂಗಳ ಹಿಂದೆ ಆರಂಭಿಸಿದ್ದರು. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಅವರು ಮೂಲತಃ ಮರೋಳಿಯವರಾಗಿದ್ದು ಅವಿವಾಹಿತರಾಗಿದ್ದರು. ಬರ್ಕೆ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಹೊಟೇಲ್ ಮತ್ತು ಹೈಫೈ ಲೈಫ್ ನಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿತ್ತು ಎಂದು ಅವರ ಆಪ್ತರು ಹೇಳುತ್ತಾರೆ. ನಿನ್ನೆ ರಾತ್ರಿ ಮಣ್ಣಗುಡ್ಡದ ಗುಂಡೂರಾವ್ ಲೇನಲ್ಲಿರುವ ಫ್ಲಾಟ್ ನಲ್ಲಿ ವಿಷ ಸೇವಿಸಿದ್ದು ತಡರಾತ್ರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಸುಕಿನಲ್ಲಿ ಮೃತಪಟ್ಟಿದ್ದಾರೆ. ಗೆಳೆಯರು ನಿತಿನ್ ಫೋಟೊವನ್ನು ಸ್ಟೇಟಸ್ ಹಾಕಿ ಕಂಬನಿ ಗರೆದಿದ್ದಾರೆ. ನಿತಿನ್ ಅವಿವಾಹಿತರಾಗಿದ್ದು ಗೆಳೆಯರ ಒಡನಾಟ ಹೆಚ್ಚಿತ್ತು. ಮೂಲತಃ ಮರೋಳಿಯವರಾಗಿದ್ದು ಇತ್ತೀಚೆಗಷ್ಟೇ ಮಣ್ಣಗುಡ್ಡದಲ್ಲಿ ಫ್ಲಾಟ್ ಖರೀದಿಸಿ ತಾಯಿ ಜೊತೆಗೆ ನೆಲೆಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post