• About us
  • Contact us
  • Disclaimer
Saturday, October 11, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಭಾರತ vs ಇಂಗ್ಲೆಂಡ್​ ನಡುವಿನ 3 ಏಕದಿನ, 5 ಟಿ20 ಸರಣಿಗೆ ದಿನಾಂಕ ಪ್ರಕಟ

Coastal Times by Coastal Times
July 24, 2025
in ಕ್ರೀಡಾ ಸುದ್ದಿ
ಭಾರತ vs ಇಂಗ್ಲೆಂಡ್​ ನಡುವಿನ 3 ಏಕದಿನ, 5 ಟಿ20 ಸರಣಿಗೆ ದಿನಾಂಕ ಪ್ರಕಟ
27
VIEWS
WhatsappTelegramShare on FacebookShare on Twitter

ಭಾರತ vs ಇಂಗ್ಲೆಂಡ್​ ಟಿ20 ಸರಣಿ ದಿನಾಂಕ : ಆಂಡ್ರಸನ್​ ತೆಂಡೂಲ್ಕರ್​ ಟ್ರೋಫಿಯ ಭಾಗವಾಗಿ ಇಂಗ್ಲೆಂಡ್​ ಪ್ರವಾಸದಲ್ಲಿರುವ ಭಾರತ ಐದು ಪಂದ್ಯಗಳ ಟೆಸ್ಟ್​ ಸರಣಿ ಆಡುತ್ತಿರುವುದು ಗೊತ್ತೆ ಇದೆ. ಸದ್ಯ ಸರಣಿಯಲ್ಲಿ 2-1 ರಿಂದ ಹಿನ್ನಡೆ ಸಾಧಿಸಿದ್ದು ಮ್ಯಾಂಚೆಸ್ಟರ್​ನಲ್ಲಿ ನಾಲ್ಕನೇ ಪಂದ್ಯವನ್ನು ಆಡುತ್ತಿದೆ. ಇದರಲ್ಲಿ ಭಾರತ ಗೆದ್ದರೇ ಮಾತ್ರ ಸರಣಿ ಸಮಬಲಗೊಳ್ಳಲಿದೆ. ಸೋಲನ್ನು ಕಂಡರೇ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕಳೆದುಕೊಳ್ಳಲಿದೆ. ಜು. 31 ರಂದು ಉಭಯ ತಂಡಗಳು ಅಂತಿಮ ಟೆಸ್ಟ್​ ಆಡಲಿವೆ.

ಇದರ ನಡುವೆಯೇ ಕ್ರಿಕೆಟ್​ ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಭಾರತ ಮತ್ತು ಇಂಗ್ಲೆಂಡ್​ ತಂಡಗಳು ನಡುವಿನ 3 ಪಂದ್ಯಗಳ ಏಕದಿನ ಸರಣಿ ಮತ್ತು 5 ಪಂದ್ಯಗಳ ಟಿ20 ಸರಣಿಯ ದಿನಾಂಕವನ್ನು ಬಿಸಿಸಿಐ ಪ್ರಕಟಿಸಿದೆ. ಇದರೊಂದಿಗೆ ರೋಹಿತ್​ ಮತ್ತು ಕೊಹ್ಲಿ ಆಟವನ್ನು ಅಭಿಮಾನಿಗಳು ಕಣ್ತುಂಬ್ಬಿ ಕೊಳ್ಳಬಹುದಾಗಿದೆ.

ರೋಹಿತ್​ ಮತ್ತು ವಿರಾಟ್​ ಟಿ20 ಮತ್ತು ಟೆಸ್ಟ್​ ಸ್ವರೂಪಕ್ಕೆ ನಿವೃತ್ತಿ ಪಡೆದಿದ್ದರಿಂದ ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಈ ಇಬ್ಬರು ಮುಂದುವರೆದಿದ್ದಾರೆ. ಇದರಿಂದಾಗಿ ಫ್ಯಾನ್ಸ್​ಗಳು ಏಕದಿನ ಪಂದ್ಯಗಳು ಯಾವಾಗ ನಡೆಯುತ್ತವೆ ಎಂದು ಎದುರು ನೋಡುತ್ತಿದ್ದಾರೆ. ಅಲ್ಲದೇ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿ ಬಳಿಕ ಏಕದಿನ ಮತ್ತು ಟಿ20 ಸರಣಿಯನ್ನು ಆಯೋಜಿಸಿದ್ದರೇ ಒಳ್ಳೆದಿತ್ತು ಎಂದು ಫ್ಯಾನ್ಸ್​ಗಳು ಅಂದು ಕೊಳ್ಳುತ್ತಿದ್ದರು. ಇದೀಗ ಬಿಸಿಸಿಐ ಭಾರತ ಮತ್ತು ಇಂಗ್ಲೆಂಡ್​ ನಡುವಿನ 3 ಪಂದ್ಯಗಳ ಏಕದಿನ ಮತ್ತು 5 ಪಂದ್ಯಗಳ ಟಿ20 ಸರಣಿಯ ದಿನಾಂಕವನ್ನು ಪ್ರಕಟಿಸಿದೆ.

ಇಂದು ಬಿಸಿಸಿಐ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ದಿನಾಂಕ ಪ್ರಕಟಿಸಿದೆ. ಈ ಪ್ರವಾಸದಲ್ಲಿ ಭಾರತ ಮೊದಲಿಗೆ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ನಂತರ 3 ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತದೆ. ಆದರೆ ಈ ಸರಣಿ ಈವರ್ಷ ನಡೆಯುವುದಿಲ್ಲ ಬದಲಿಗೆ ಮುಂದಿನ ವರ್ಷ ಜುಲೈ ತಿಂಗಳಲ್ಲಿ ನಡೆಯಲಿದೆ. ಹೌದು, ಜುಲೈ 1 ರಿಂದ ಜು.11 ರವರೆಗೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ನಂತರ ಜು. 14 ರಿಂದ ಜು. 19ರ ವರೆಗೆ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ರಷ್ಯಾ: 49 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದ ಪತನ

Next Post

Asia Cup 2025: ಏಷ್ಯಾ ಕಪ್ ಪಂದ್ಯಾವಳಿಯು ಸೆಪ್ಟೆಂಬರ್ 8 ರಿಂದ ಪ್ರಾರಂಭವಾಗಲಿದೆ, ಯುಎಇಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಿದೆ ಬಿಸಿಸಿಐ

Related Posts

ಉಳ್ಳಾಲ ಸೆ:14 ರಂದು ತಾಲೂಕು ಮಟ್ಟದ ದಸರಾ ಕಬಡ್ಡಿ -2025
ಕರಾವಳಿ

ಉಳ್ಳಾಲ ಸೆ:14 ರಂದು ತಾಲೂಕು ಮಟ್ಟದ ದಸರಾ ಕಬಡ್ಡಿ -2025

September 10, 2025
79
Asia Cup 2025 Schedule: ಏಷ್ಯಾಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಕ್ರೀಡಾ ಸುದ್ದಿ

Asia Cup 2025 Schedule: ಏಷ್ಯಾಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

September 8, 2025
36
Next Post
Asia Cup 2025: ಏಷ್ಯಾ ಕಪ್ ಪಂದ್ಯಾವಳಿಯು ಸೆಪ್ಟೆಂಬರ್ 8 ರಿಂದ ಪ್ರಾರಂಭವಾಗಲಿದೆ, ಯುಎಇಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಿದೆ ಬಿಸಿಸಿಐ

Asia Cup 2025: ಏಷ್ಯಾ ಕಪ್ ಪಂದ್ಯಾವಳಿಯು ಸೆಪ್ಟೆಂಬರ್ 8 ರಿಂದ ಪ್ರಾರಂಭವಾಗಲಿದೆ, ಯುಎಇಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಿದೆ ಬಿಸಿಸಿಐ

Discussion about this post

Recent News

ಎರಡೂ ಕಾಲು ಕಳೆದುಕೊಂಡ ಅಶ್ವಿ‌ನಿಗೆ ನೋಟಿಸ್‌ ನೀಡಿ ಅಧಿಕಾರಿಯೇ ಗೈರು ಸ್ಥಳೀಯರ ತೀವ್ರ ಆಕ್ರೋಶ

ಎರಡೂ ಕಾಲು ಕಳೆದುಕೊಂಡ ಅಶ್ವಿ‌ನಿಗೆ ನೋಟಿಸ್‌ ನೀಡಿ ಅಧಿಕಾರಿಯೇ ಗೈರು ಸ್ಥಳೀಯರ ತೀವ್ರ ಆಕ್ರೋಶ

October 10, 2025
14
ಮೈಸೂರು ದಸರಾದಲ್ಲಿ ಬಲೂನು ಮಾರಾಟಕ್ಕೆ ಬಂದ 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಕೀಚಕನಿಗೆ ಪೊಲೀಸ್ ಗುಂಡೇಟು

ಮೈಸೂರು ದಸರಾದಲ್ಲಿ ಬಲೂನು ಮಾರಾಟಕ್ಕೆ ಬಂದ 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಕೀಚಕನಿಗೆ ಪೊಲೀಸ್ ಗುಂಡೇಟು

October 10, 2025
122
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಎರಡೂ ಕಾಲು ಕಳೆದುಕೊಂಡ ಅಶ್ವಿ‌ನಿಗೆ ನೋಟಿಸ್‌ ನೀಡಿ ಅಧಿಕಾರಿಯೇ ಗೈರು ಸ್ಥಳೀಯರ ತೀವ್ರ ಆಕ್ರೋಶ

ಎರಡೂ ಕಾಲು ಕಳೆದುಕೊಂಡ ಅಶ್ವಿ‌ನಿಗೆ ನೋಟಿಸ್‌ ನೀಡಿ ಅಧಿಕಾರಿಯೇ ಗೈರು ಸ್ಥಳೀಯರ ತೀವ್ರ ಆಕ್ರೋಶ

October 10, 2025
ಮೈಸೂರು ದಸರಾದಲ್ಲಿ ಬಲೂನು ಮಾರಾಟಕ್ಕೆ ಬಂದ 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಕೀಚಕನಿಗೆ ಪೊಲೀಸ್ ಗುಂಡೇಟು

ಮೈಸೂರು ದಸರಾದಲ್ಲಿ ಬಲೂನು ಮಾರಾಟಕ್ಕೆ ಬಂದ 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಕೀಚಕನಿಗೆ ಪೊಲೀಸ್ ಗುಂಡೇಟು

October 10, 2025
ಮಂಗಳೂರಿನ ಸರ್ಕಾರಿ ವೆನ್ಲಾಕ್​​ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭ; ಬಡವರಿಗೆ ಕಡಿಮೆ ದರದಲ್ಲಿ ಹಾರ್ಟ್ ಟ್ರೀಟ್​ಮೆಂಟ್​

ಮಂಗಳೂರಿನ ಸರ್ಕಾರಿ ವೆನ್ಲಾಕ್​​ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭ; ಬಡವರಿಗೆ ಕಡಿಮೆ ದರದಲ್ಲಿ ಹಾರ್ಟ್ ಟ್ರೀಟ್​ಮೆಂಟ್​

October 9, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d