• About us
  • Contact us
  • Disclaimer
Monday, September 15, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಉಗ್ರರ ದಾಳಿ; ಖಚಿತ ಮಾಹಿತಿ ಇದೆ: ಇಂಗ್ಲೆಂಡ್ ಸಚಿವ

Coastal Times by Coastal Times
August 27, 2021
in ವಿದೇಶಿ ಸುದ್ದಿ
ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಉಗ್ರರ ದಾಳಿ; ಖಚಿತ ಮಾಹಿತಿ ಇದೆ: ಇಂಗ್ಲೆಂಡ್ ಸಚಿವ
26
VIEWS
WhatsappTelegramShare on FacebookShare on Twitter

ಲಂಡನ್: ಅಫ್ಗಾನಿಸ್ತಾನದಿಂದ ಪಲಾಯನ ಮಾಡಲು ಕಾಬೂಲ್‌ ವಿಮಾನ ನಿಲ್ದಾಣದತ್ತ ಬರುತ್ತಿರುವವರನ್ನು ಗುರಿಯಾಗಿರಿಸಿ ಉಗ್ರರು ದಾಳಿ ನಡೆಸಲು ಯೋಜಿಸುತ್ತಿರುವುದಾಗಿ ಬ್ರಿಟನ್‌ ರಕ್ಷಣಾ ಸಚಿವ ಜೇಮ್ಸ್ ಹೆಪ್ಪಿ ಆತಂಕ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್‌ ವಿದೇಶಾಂಗ ಇಲಾಖೆಯು, ʼಅಫ್ಗಾನಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿಯು ಅತಂತ್ರವಾಗಿದೆ. ಭಯೋತ್ಪಾದಕರ ದಾಳಿ ಬೆದರಿಕೆ ಇರುವುದರಿಂದ ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳದಿರಿ. ಒಂದು ವೇಳೆ ನೀವು ವಿಮಾನ ನಿಲ್ದಾಣದ ಪ್ರದೇಶದಲ್ಲಿದ್ದರೆ, ಸುರಕ್ಷಿತ ಪ್ರದೇಶಗಳತ್ತ ತೆರಳಿ. ಮುಂದಿನ ಸೂಚನೆಗಳು ಬರುವವರೆಗೆ ಅಲ್ಲಿಯೇ ಇರಿʼ ಎಂದು ಬುಧವಾರ ತಡರಾತ್ರಿ ಸೂಚನೆ ನೀಡಿತ್ತು.

ಈ ಸಂಬಂಧ ಬಿಬಿಸಿ ರೆಡಿಯೊಗೆ ಮಾತನಾಡಿರುವ ಸಚಿವ, ʼಅತ್ಯಂತ ವಿಶ್ವಾಸಾರ್ಹʼ ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಐಎಸ್‌ ಸಂಘಟನೆ ಉಗ್ರರು ಆತ್ಮಾಹುತಿ ಬಾಂಬ್‌ ದಾಳಿ ನಡೆಸಲಿದ್ದಾರೆ ಎಂಬುದು ಖಚಿತವಾಗಲಿದೆʼ ಎಂದಿದ್ದಾರೆ.

ʼಬೆದರಿಕೆ ತೀವ್ರವಾಗಿದೆ ಎಂದು ಮಾತ್ರವೇ ನಾವು ಹೇಳಬಲ್ಲೆವು. ಅಲ್ಲಿರುವವರನ್ನು ರಕ್ಷಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮುಂದೆ ನಮಗೆ ಬರುವ ವರದಿಗಳನ್ನು ಆಧರಿಸಿ ಸಲಹೆಗಳೂ ಬದಲಾಗಬಹುದು. ಆದರೆ, ಅದಕ್ಕೆ ಯಾವುದೇ ಖಾತರಿ ಇಲ್ಲʼ ಎಂದು ಹೆಪ್ಪಿ ಎಚ್ಚರಿಸಿದ್ದಾರೆ.

ಅಫ್ಗಾನಿಸ್ತಾನದಲ್ಲಿರುವ ತನ್ನ ಸೈನ್ಯವನ್ನು ಹಿಂಪಡೆಯಲು ನಿಗದಿಯಾಗಿರುವ ಆಗಸ್ಟ್‌ 31ರ ಗಡುವನ್ನು ಪಾಲಿಸಲಾಗುವುದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಅಫ್ಗಾನಿಸ್ತಾನದ ಬೆಳವಣಿಗೆಗಳ ಕುರಿತು ಚರ್ಚಿಸಲು ಜಿ-7 ರಾಷ್ಟ್ರಗಳ ನಾಯಕರು ಬುಧವಾರ ಸಭೆ ನಡೆಸಿದ್ದರು. ಈ ವೇಳೆ ಸೈನ್ಯವನ್ನು ಹಿಂಪಡೆಯಲು ನಿಗದಿಯಾಗಿರುವ ಗಡುವನ್ನು ವಿಸ್ತರಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ನಿಗದಿತ ಗಡುವಿಗೆ ಬದ್ಧವಾಗಿರುವುದಾಗಿ ಬೈಡನ್‌ ಹೇಳಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಅಮೆರಿಕ ತನ್ನ ವಸ್ತುಗಳನ್ನು ನಾಶ ಮಾಡಲೆಂದೇ ಸ್ವಯಂ ದಾಳಿ ನಡೆಸಿದೆ: ತಾಲಿಬಾನ್

Next Post

ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸರ ದಾಳಿ : ಓರ್ವನ ಬಂಧನ,ಇಬ್ಬರು ಪರಾರಿ

Related Posts

ವಿಯೆಟ್ನಾಂನಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಂಗಳೂರಿನ‌ ಬಾಲಪ್ರತಿಭೆ ರುಶಭ್ ರಾವ್
ರಾಷ್ಟ್ರೀಯ ಸುದ್ದಿ

ವಿಯೆಟ್ನಾಂನಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಂಗಳೂರಿನ‌ ಬಾಲಪ್ರತಿಭೆ ರುಶಭ್ ರಾವ್

August 27, 2025
53
ಖ್ಯಾತ ನೀಲಿ ತಾರೆ ಕೈಲಿ ಪೇಜ್ ಅನುಮಾನಾಸ್ಪದವಾಗಿ ತನ್ನ ಮನೆಯಲ್ಲಿ ಹೆಣವಾಗಿ ಪತ್ತೆ, ಶವ ಸಂಸ್ಕಾರಕ್ಕೆ ಹಣ ಕೇಳಿದ ಕುಟುಂಬ
ವಿದೇಶಿ ಸುದ್ದಿ

ಖ್ಯಾತ ನೀಲಿ ತಾರೆ ಕೈಲಿ ಪೇಜ್ ಅನುಮಾನಾಸ್ಪದವಾಗಿ ತನ್ನ ಮನೆಯಲ್ಲಿ ಹೆಣವಾಗಿ ಪತ್ತೆ, ಶವ ಸಂಸ್ಕಾರಕ್ಕೆ ಹಣ ಕೇಳಿದ ಕುಟುಂಬ

July 2, 2025
85
Next Post
ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸರ ದಾಳಿ : ಓರ್ವನ ಬಂಧನ,ಇಬ್ಬರು ಪರಾರಿ

ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸರ ದಾಳಿ : ಓರ್ವನ ಬಂಧನ,ಇಬ್ಬರು ಪರಾರಿ

Discussion about this post

Recent News

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

September 15, 2025
26
ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ

ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ

September 15, 2025
44
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

September 15, 2025
ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ

ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ

September 15, 2025
ಸ್ಯಾಮ್‌ಸಂಗ್ ತನ್ನ ಹೊಸ ‘Samsung Galaxy F17 5G’ ಸ್ಮಾರ್ಟ್​ಫೋನ್ ಅನ್ನು​ ಮಾರುಕಟ್ಟೆಗೆ ಪರಿಚಯಿಸಿದೆ

ಸ್ಯಾಮ್‌ಸಂಗ್ ತನ್ನ ಹೊಸ ‘Samsung Galaxy F17 5G’ ಸ್ಮಾರ್ಟ್​ಫೋನ್ ಅನ್ನು​ ಮಾರುಕಟ್ಟೆಗೆ ಪರಿಚಯಿಸಿದೆ

September 15, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d