ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪಂಜಾಬ್ನಲ್ಲಿ ನಡೆದ ಆತಂಕಕಾರಿ ಘಟನೆ ಬಳಿಕ, ಅವರ ಹಿತಕ್ಕಾಗಿ ಹಾರೈಸಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗ ನೆರವೇರಿಸಿದ್ದು ಬಹುತೇಕ ಎಲ್ಲರಿಗೂ ಗೊತ್ತಿರುವಂಥ ವಿಷಯವೇ. ಇದೀಗ ಆ ಯಾಗದ ಪ್ರಸಾದ ನೇರವಾಗಿ ಪ್ರಧಾನಿಯವರನ್ನೇ ತಲುಪಿದೆ.
ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಖುದ್ದಾಗಿ ಈ ಪ್ರಸಾದವನ್ನು ಕೊಂಡೊಯ್ದು ಪ್ರಧಾನಿ ಮೋದಿಯವರಿಗೆ ಹಸ್ತಾಂತರಿಸಿದ್ದಾರೆ. ಅಷ್ಟೇ ಅಲ್ಲ ಯಾಗದಲ್ಲಿ ಮುಖ್ಯವಾಗಿ ಪಾಲ್ಗೊಂಡಿದ್ದ ಪುರೋಹಿತವೃಂದ ಕೂಡ ಶಾಸಕರೊಂದಿಗೆ ತೆರಳಿ ಮೋದಿಯವರಿಗೆ ಆಶೀರ್ವದಿಸಿದೆ.

ಅಷ್ಟೇ ಅಲ್ಲದೆ ಸ್ವರ್ಣಖಚಿತ ಸ್ಫಟಿಕ ರುದ್ರಾಕ್ಷಿ ಹಾರವನ್ನು ಆಚಾರ್ಯರ ಮುಖೇನ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರಿಗೆ ಸಮರ್ಪಿಸುವ ಸೌಭಾಗ್ಯ ನನ್ನದಾಯಿತು ಎಂಬುದನ್ನೂ ಶಾಸಕರು ಹೇಳಿಕೊಂಡಿದ್ದಾರೆ. ಮಹಾ ಮೃತ್ಯುಂಜಯ ಯಾಗದ ಮಹಾಪ್ರಸಾದವನ್ನು ಪ್ರಧಾನಿ ಮೋದಿ ಮಾತ್ರವಲ್ಲದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೂ ಶಾಸಕ ಹರೀಶ್ ಪೂಂಜಾ ತಲುಪಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post