• About us
  • Contact us
  • Disclaimer
Tuesday, July 8, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ, ಸೋಷಿಯಲ್​ ಮೀಡಿಯಾ ಇನ್​​ಫ್ಲುಯೆನ್ಸರ್​ ಕೀರ್ತಿ ಪಟೇಲ್​ ಬಂಧನ

Coastal Times by Coastal Times
June 19, 2025
in ರಾಷ್ಟ್ರೀಯ ಸುದ್ದಿ
ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ, ಸೋಷಿಯಲ್​ ಮೀಡಿಯಾ ಇನ್​​ಫ್ಲುಯೆನ್ಸರ್​ ಕೀರ್ತಿ ಪಟೇಲ್​ ಬಂಧನ
7
VIEWS
WhatsappTelegramShare on FacebookShare on Twitter

ಸೂರತ್, ಗುಜರಾತ್: ಟಿಕ್‌ಟಾಕ್ ತಾರೆ ಕೀರ್ತಿ ಪಟೇಲ್ ರನ್ನ ಕಪೋದರ ಪೊಲೀಸರು ಬಂಧಿಸಿದ್ದಾರೆ. ಆರೋಪಿತೆ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದರು. ಕೀರ್ತಿ ಪಟೇಲ್ ಅವರ ವಿರುದ್ಧ ಬಿಲ್ಡರ್‌ನಿಂದ 2 ಕೋಟಿ ರೂ.ಗಳ ಸುಲಿಗೆ ಬೇಡಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳಿವೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಕೀರ್ತಿ ಗುಜರಾತ್‌ನ ಹಲವು ಸ್ಥಳಗಳಿಗೆ ಓಡಾಡುತ್ತಲೇ ಇದ್ದರು. ಅವರು ತಮ್ಮ ಫೋನ್‌ನ ಐಪಿ ವಿಳಾಸವನ್ನು ಕೂಡಾ ಆಗಾಗ್ಗೆ ಬದಲಾಯಿಸುತ್ತಲೇ ಇದ್ದರು. ಅಷ್ಟೇ ಅಲ್ಲ ಫೋನ್ ಅನ್ನು ಪದೇ ಪದೇ ಆನ್ ಮತ್ತು ಆಫ್ ಮಾಡುತ್ತಿದ್ದರು. ಅವರ ವಿರುದ್ಧ ಹಲ್ಲೆ, ಸುಲಿಗೆ ಮತ್ತು ಭೂಕಬಳಿಕೆ ಪ್ರಕರಣಗಳು ದಾಖಲಾಗಿವೆ.

ಕೀರ್ತಿ ಪಟೇಲ್ ಅವರನ್ನು ಬಂಧಿಸಿರುವ ಪ್ರಕರಣವು ವಾಜು ಕತ್ರೋಡಿಯಾ ಮತ್ತು ವಿಜಯ್ ಸವಾನಿ ಎಂಬ ಬಿಲ್ಡರ್ ನಡುವಿನ ಆಸ್ತಿ ವಹಿವಾಟಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಪ್ರಕರಣದ ವಿಚಾರಣೆ 2024 ರಲ್ಲಿ ನಡೆಯಬೇಕಾಗಿತ್ತು. ವಿಜಯ್ ಸವಾನಿ ಮತ್ತು ಕೀರ್ತಿ ಪಟೇಲ್ ವಾಜು ಕತ್ರೋಡಿಯಾ ಅವರಿಂದ ಹಣ ಸುಲಿಗೆ ಮಾಡಲು ಇವರು ಸಂಚು ರೂಪಿಸಿದ್ದರು ಎಂಬ ಆರೋಪ ಇವರ ಮೇಲಿದೆ. ಕೀರ್ತಿ ಪಟೇಲ್ ಕತ್ರೋಡಿಯಾಳ ಫೋಟೋವನ್ನು ರೀಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಲೈವ್ ಆಗಿ ಬಂದು ದೂರುದಾರ ಮತ್ತು ಅವರ ಕುಟುಂಬದ ವಿರುದ್ಧ ನಿಂದನೆ ಮಾಡಿದ್ದಲೇ ಕೊಲೆ ಬೆದರಿಕೆ ಹಾಕಿದ್ದಳು ಎಂಬ ಆರೋಪ ಇದೆ.

ಬಂಧನದ ಬಗ್ಗೆ ಡಿಸಿಪಿ ಪ್ರತಿಕ್ರಿಯೆ ಹೀಗಿದೆ: ಬಂಧನದ ಸಮಯದಲ್ಲೂ ಕೀರ್ತಿಯ ನಡವಳಿಕೆ ಆಕ್ರಮಣಕಾರಿಯಾಗಿಯೇ ಇತ್ತು. ಪೊಲೀಸ್ ವಾಹನದಲ್ಲಿ ಕುಳಿತಿದ್ದಾಗಲೂ ಅವಳು ವಿಡಿಯೋ ಮಾಡಿ ಗುಜರಾತ್‌ನಾದ್ಯಂತ ವೈರಲ್ ಮಾಡುವ ಬಗ್ಗೆ ಮಾತನಾಡುತ್ತಿದ್ದಳು. ಜೂನ್ 2, 2024 ರಂದು, ಕೀರ್ತಿ ಪಟೇಲ್ ಸೇರಿದಂತೆ ಐದಕ್ಕೂ ಹೆಚ್ಚು ಜನರ ವಿರುದ್ಧ ಕಪೋದ್ರಾ ಪೊಲೀಸ್ ಠಾಣೆಯಲ್ಲಿ ಸುಲಿಗೆ ಸೇರಿದಂತೆ ಇತರ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಡಿಸಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿತೆ: ಕಳೆದ ಒಂದು ವರ್ಷದಿಂದ ಆರೋಪಿತ ಕೀರ್ತಿ ಪಡೆ ತಲೆ ಮರೆಸಿಕೊಂಡಿದ್ದಳು. ಪೊಲೀಸರಿಂದ ತಪ್ಪಿಸಿಕೊಳ್ಳಲು ಅವಳು ಫೋನ್‌ನ ಐಪಿ ವಿಳಾಸವನ್ನು ಬದಲಾಯಿಸುತ್ತಿದ್ದಳು ಮತ್ತು ಗುಜರಾತ್‌ನಲ್ಲಿ ವಿವಿಧ ಅಡಗುತಾಣಗಳನ್ನು ಬದಲಾಯಿಸುತ್ತಿದ್ದಳು. ಜೊತೆಗೆ, ಅವಳು ಫೋನ್ ಸಂಖ್ಯೆಯನ್ನು ಸಹ ಆಗಾಗ್ಗೆ ಚೇಂಜ್​ ಮಾಡುತ್ತಿರುತ್ತಿದ್ದಳು. ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಸಕ್ರಿಯಳಾಗಿದ್ದ ಕೀರ್ತಿ, ಫೋನ್ ಸಂಖ್ಯೆಯನ್ನು ಬದಲಾಯಿಸಿದರೂ ಒಂದೇ ಫೋನ್ ಬಳಕೆ ಮಾಡುತ್ತಿದ್ದಳು. ಅಷ್ಟೇ ಅಲ್ಲ ನಿರಂತರವಾಗಿ ಫೋನ್ ಆನ್ ಮತ್ತು ಆಫ್ ಮಾಡುತ್ತಲೇ ಇದ್ದಳು. ಈ ನಡುವೆ ಆರೋಪಿತೆಯ ವಿರುದ್ಧ ಪೊಲೀಸರು ನಿರಂತರ ನಿಗಾ ಇಟ್ಟಿದ್ದರು. ಅಷ್ಟೇ ಅಲ್ಲ ಆಕೆಯ ಬಂಧನಕ್ಕೆ ನ್ಯಾಯಾಲಯದಿಂದ ವಾರಂಟ್ ಕೂಡಾ ಹೊರಡಿಸಲಾಗಿತ್ತು. ಏತನ್ಮಧ್ಯೆ, ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಪೊಲೀಸರು ತನಿಖೆ ನಡೆಸಿದ್ದರು. ಪೊಲೀಸರು ಆಕೆಯ ಸ್ಥಳವನ್ನು ಅಹಮದಾಬಾದ್‌ನ ಸರ್ಖೇಜ್‌ನಲ್ಲಿ ಪತ್ತೆಹಚ್ಚಿದ್ದರು .

ಸೂರತ್ ವಲಯ ಒನ್ ಎಲ್‌ಸಿಬಿ ಕಪೋದ್ರಾ ಪೊಲೀಸರು ಮತ್ತು ಸರ್ಖೇಜ್ ಸ್ಥಳೀಯ ಪೊಲೀಸರ ಸಹಾಯದಿಂದ ಕೀರ್ತಿ ಪಟೇಲ್ ಅವರನ್ನು ಅಹಮದಾಬಾದ್‌ನ ಸರ್ಖೇಜ್‌ನಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಭಾರತ ವಿರೋಧಿ ಪಾಕ್​ ಸೇನಾ ಮುಖ್ಯಸ್ಥನಿಗೆ ಭೋಜನ ಕೂಟ ಆಯೋಜಿಸಿದ ಡೊನಾಲ್ಡ್​ ಟ್ರಂಪ್

Next Post

ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್ ಮಾಡಿಸಲು 43 ಸಾವಿರ ಲಂಚ ; ಸರ್ವೆಯರ್ ನಂದೀಶ್, ಬ್ರೋಕರ್ ದಿವಾಕರ್ ಬಂಧನ

Related Posts

57 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಜೆಂಟೀನಾಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ
ರಾಜಕೀಯ

57 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಜೆಂಟೀನಾಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ

July 5, 2025
31
ಸಾವಿರ ವರ್ಷಗಳ ಇತಿಹಾಸ ಇರುವ ಕೇರಳದ ಕೊಟ್ಟಿಯೂರು ಶಿವ ದೇಗುಲ ವರ್ಷದಲ್ಲಿ 28 ದಿನ ಮಾತ್ರ ತೆರೆದಿರುತ್ತದೆ- ದೇವಾಲಯದ ವಿಶೇಷತೆ ಏನು?
ರಾಷ್ಟ್ರೀಯ ಸುದ್ದಿ

ಸಾವಿರ ವರ್ಷಗಳ ಇತಿಹಾಸ ಇರುವ ಕೇರಳದ ಕೊಟ್ಟಿಯೂರು ಶಿವ ದೇಗುಲ ವರ್ಷದಲ್ಲಿ 28 ದಿನ ಮಾತ್ರ ತೆರೆದಿರುತ್ತದೆ- ದೇವಾಲಯದ ವಿಶೇಷತೆ ಏನು?

June 22, 2025
118
Next Post
ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್ ಮಾಡಿಸಲು 43 ಸಾವಿರ ಲಂಚ ; ಸರ್ವೆಯರ್ ನಂದೀಶ್, ಬ್ರೋಕರ್ ದಿವಾಕರ್ ಬಂಧನ

ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್ ಮಾಡಿಸಲು 43 ಸಾವಿರ ಲಂಚ ; ಸರ್ವೆಯರ್ ನಂದೀಶ್, ಬ್ರೋಕರ್ ದಿವಾಕರ್ ಬಂಧನ

Discussion about this post

Recent News

ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

July 8, 2025
1
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಟಾಸ್ಕ್ 4.59 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಟಾಸ್ಕ್ 4.59 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

July 8, 2025
0
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

July 8, 2025
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಟಾಸ್ಕ್ 4.59 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಟಾಸ್ಕ್ 4.59 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

July 8, 2025
ಮಂಗಳೂರು ಶೀಘ್ರದಲ್ಲೇ ಫುಟ್ಬಾಲ್‌ ಆಟಗಾರರಿಗೆ ಸಿಗಲಿದೆ ಸುಸಜ್ಜಿತ ಟರ್ಫ್‌ ಕ್ರೀಡಾಂಗಣ

ಮಂಗಳೂರು ಶೀಘ್ರದಲ್ಲೇ ಫುಟ್ಬಾಲ್‌ ಆಟಗಾರರಿಗೆ ಸಿಗಲಿದೆ ಸುಸಜ್ಜಿತ ಟರ್ಫ್‌ ಕ್ರೀಡಾಂಗಣ

July 7, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d