• About us
  • Contact us
  • Disclaimer
Thursday, January 15, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮೀರಾಬಾಯಿ ಗೆದ್ದ ಒಲಿಂಪಿಕ್ಸ್ ಬೆಳ್ಳಿ ಪದಕ ಚಿನ್ನವಾಗುವುದು ನಿಜವೇ? ಇಲ್ಲಿದೆ ಕ್ಲೈಮಾಕ್ಸ್​ ಸ್ಟೋರಿ

Coastal Times by Coastal Times
July 30, 2021
in ಕ್ರೀಡಾ ಸುದ್ದಿ
ಮೀರಾಬಾಯಿ  ಗೆದ್ದ ಒಲಿಂಪಿಕ್ಸ್ ಬೆಳ್ಳಿ ಪದಕ ಚಿನ್ನವಾಗುವುದು ನಿಜವೇ? ಇಲ್ಲಿದೆ ಕ್ಲೈಮಾಕ್ಸ್​ ಸ್ಟೋರಿ
1
VIEWS
WhatsappTelegramShare on FacebookShare on Twitter

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಮೊದಲ ದಿನವೇ ರಜತ ಪದಕ ಗೆದ್ದು ಬೀಗಿದ್ದರು. ಇದರ ಬೆನ್ನಲ್ಲೇ ಭಾರತದ ಕ್ರೀಡಾಪ್ರೇಮಿಗಳು ಭಾರಿ ಸಂಭ್ರಮದಲ್ಲಿ ಮುಳುಗಿದ್ದರು. ಇದಾಗಿ 2 ದಿನಗಳ ಬಳಿಕ ಮೀರಾಬಾಯಿ ಗೆದ್ದಿರುವ ಬೆಳ್ಳಿ ಪದಕ ಚಿನ್ನವಾಗಿ ಬದಲಾಗಲಿದೆ ಎಂಬ ಸುದ್ದಿ ಹರಡಿತ್ತು. ಇದು ಭಾರತೀಯರ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತ್ತು. ಆದರೆ ಅದು ಫೇಕ್ ನ್ಯೂಸ್ ಎಂಬುದು ಇದೀಗ ಖಚಿತಪಟ್ಟಿದೆ.

ಮಹಿಳೆಯರ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಅವರನ್ನು ಮೀರಿಸಿ ಚಿನ್ನ ಗೆದ್ದಿದ್ದ ಚೀನಾದ ವೇಟ್‌ಲ್ಟಿರ್ ಝಿಹುಯಿ ಹೌ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬೀಳುವ ಸಾಧ್ಯತೆಗಳಿವೆ. ಅವರನ್ನು ಸಂಘಟಕರು 2 ದಿನಗಳ ಬಳಿಕ ಮತ್ತೆ ಉದ್ದೀಪನ ಪರೀಕ್ಷೆಗೆ ಕರೆದಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ ಎಂದು ವರದಿಯಾಗಿತ್ತು. ಆದರೆ ಝಿಹುಯಿ ಅವರನ್ನು ಡೋಪಿಂಗ್ ಪರೀಕ್ಷೆಗೆ ಕರೆದಿರಲಿಲ್ಲ ಎಂದು ಚೀನಾದ ಅಧಿಕಾರಿಗಳಿಂದ ಸ್ಪಷ್ಟನೆ ಲಭಿಸಿದೆ. ಸುದ್ದಿಸಂಸ್ಥೆ ಎಎನ್‌ಐ ಕೂಡ ತನ್ನ ಹಿಂದಿನ ವರದಿ ಸರಿಯಾಗಿರಲಿಲ್ಲ, ಝಿಹುಯಿ ಚಿನ್ನ ಮತ್ತು ಮೀರಾಬಾಯಿ ಅವರು ಬೆಳ್ಳಿ ಪದಕವನ್ನೇ ಉಳಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.

ಈ ಸುದ್ದಿ ಭಾರತ ಮಾತ್ರವಲ್ಲದೆ ಏಷ್ಯಾದೆಲ್ಲೆಡೆ ವರದಿಯಾಗಿತ್ತು. ಹೀಗಾಗಿ ಏಷ್ಯಾದ ಪ್ರಮುಖ ಸುದ್ದಿ ಸಂಸ್ಥೆ ‘ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್’ ಕೂಡ ಈ ಬಗ್ಗೆ ಸ್ಪಷ್ಟನೆಯ ವರದಿಯನ್ನು ಪ್ರಕಟಿಸಿದೆ. ಝಿಹುಯಿ ಅವರನ್ನು 2ನೇ ಬಾರಿ ಡೋಪಿಂಗ್ ಪರೀಕ್ಷೆಗೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ವಿಶ್ವ ಉದ್ದೀಪನ ನಿಗ್ರಹ ಘಟಕದ (ವಾಡಾ) ಬಳಿಯೇ ಯಾವುದೇ ಮಾಹಿತಿ ಇಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉದ್ದೀಪನ ಪರೀಕ್ಷೆಗಳನ್ನು ನಡೆಸುತ್ತಿರುವ ಅಂತಾರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿಗೂ (ಐಟಿಎ) ಈ ಬಗ್ಗೆ ಏನೂ ಮಾಹಿತಿ ಇಲ್ಲ. ಇಂಥ ವರದಿಗಳು ಎಲ್ಲಿಂದ ಬಂದವು ಗೊತ್ತಿಲ್ಲ. ನಾವು ಎಲ್ಲ ಪರೀಕ್ಷೆಯಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ. ಯಾವುದನ್ನೂ ಗೌಪ್ಯವಾಗಿಡುವುದಿಲ್ಲ ಎಂದು ಐಟಿಎ ಅಧಿಕಾರಿ ತಿಳಿಸಿದ್ದಾರೆ. ಹಾದಿ ತಪ್ಪಿಸುವ ಸಲುವಾಗಿ ಈ ಸುದ್ದಿಯನ್ನು ಸೃಷ್ಟಿಸಲಾಗಿದೆ ಎಂದು ಚೀನಾದ ವೇಟ್‌ಲಿಫ್ಟಿಂಗ್ ಸಂಸ್ಥೆ ಆರೋಪಿಸಿದೆ.

ಭಾರತ ಮಾತ್ರವಲ್ಲದೆ ಚೀನಾ ತೈಪೆಯ ವೇಟ್‌ಲಿಫ್ಟರ್​ 4ನೇ ಸ್ಥಾನ ಮತ್ತು ಇಂಡೋನೇಷ್ಯಾದ ಸ್ಪರ್ಧಿ 3ನೇ ಸ್ಥಾನ ಪಡೆದಿದ್ದ ಕಾರಣ ಅವರ ಪದಕಗಳು ಬೆಳ್ಳಿ ಮತ್ತು ಕಂಚಿಗೆ ಬಡ್ತಿ ಪಡೆಯಲಿವೆ ಎಂದು ಆ ದೇಶಗಳಲ್ಲೂ ಈ ಸುದ್ದಿ ವೈರಲ್ ಆಗಿತ್ತು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಬಂಟ್ವಾಳ: ಯುವಕನ ಮೃತ ದೇಹ ಛಿದ್ರಗೊಂಡ ಸ್ಥಿತಿಯಲ್ಲಿ ರೈಲ್ವೆ ಹಳಿ ಮೇಲೆ ಪತ್ತೆ

Next Post

ಕೇರಳದಲ್ಲಿ ಸತತ 4ನೇ ದಿನ ಪಾಸಿಟಿವಿಟಿ 20 ಸಾವಿರಕ್ಕೂ ಅಧಿಕ ಪ್ರಕರಣ

Related Posts

ಮಂಗಳೂರು: ಡಿಸೆಂಬರ್ 19ರಿಂದ 22ರವರೆಗೆ ಯೆಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ, 5ನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ – 2025
ಕರಾವಳಿ

ಮಂಗಳೂರು: ಡಿಸೆಂಬರ್ 19ರಿಂದ 22ರವರೆಗೆ ಯೆಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ, 5ನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ – 2025

December 18, 2025
31
ವಿಶ್ವಕಪ್​ ಗೆದ್ದ ಪ್ರತಿಯೊಬ್ಬ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಗೆ ಸಿಕ್ತು ಟಾಟಾ ಸಿಯೆರಾ ಎಸ್‌ಯುವಿ ಗಿಫ್ಟ್!
ಕ್ರೀಡಾ ಸುದ್ದಿ

ವಿಶ್ವಕಪ್​ ಗೆದ್ದ ಪ್ರತಿಯೊಬ್ಬ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಗೆ ಸಿಕ್ತು ಟಾಟಾ ಸಿಯೆರಾ ಎಸ್‌ಯುವಿ ಗಿಫ್ಟ್!

December 18, 2025
33
Next Post
ಕೇರಳದಲ್ಲಿ ಸತತ 4ನೇ ದಿನ ಪಾಸಿಟಿವಿಟಿ 20 ಸಾವಿರಕ್ಕೂ ಅಧಿಕ ಪ್ರಕರಣ

ಕೇರಳದಲ್ಲಿ ಸತತ 4ನೇ ದಿನ ಪಾಸಿಟಿವಿಟಿ 20 ಸಾವಿರಕ್ಕೂ ಅಧಿಕ ಪ್ರಕರಣ

Discussion about this post

Recent News

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

January 15, 2026
19
ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

January 15, 2026
52
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

January 15, 2026
ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

January 15, 2026
ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಹಬ್ಬಕ್ಕೆ ಹರಿದು ಬಂದ ಭಕ್ತಸಾಗರ

ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಹಬ್ಬಕ್ಕೆ ಹರಿದು ಬಂದ ಭಕ್ತಸಾಗರ

January 14, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d