ಬಂಟ್ವಾಳ: ಇಲ್ಲಿನ ಸೋರ್ಣಾಡು -ಕುಪ್ಪೆಪದವು ಮುಖ್ಯರಸ್ತೆ ನಡುವಿನ ಅರಳ ಗ್ರಾಮದ ಅರ್ಬಿ ಬಳಿ ಹಾದು ಹೋಗಿರುವ ಒಎನ್ಜಿಸಿ, ಎಚ್ಪಿಸಿಎಲ್ ಸ್ವಾಮ್ಯದ ಪೆಟ್ರೋನೆಟ್ ಸಂಸ್ಥೆ ಮಂಗಳೂರ– ಬೆಂಗಳೂರು ನಡುವೆ ಅಳವಡಿಸಿರುವ ಪೆಟ್ರೋಲ್ ಮತ್ತು ಡೀಸೆಲ್ ಪೂರೈಸುವ ಪೈಪ್ಲೈನ್ಗೆ ಕನ್ನ ಕೊರೆದು ಲಕ್ಷಾಂತರ ಮೌಲ್ಯಸಂತಾನ್ ಪಿಂಟೋ ಅವರ ಪುತ್ರ ಐವನ್ ಪಿಂಟೋ ಅವರ ಜಮೀನಿನಲ್ಲಿ ಪೈಪ್ಲೈನ್ ಹಾದು ಹೋಗಿದೆ. ಪೈಪ್ಲೈನ್ ಮೂಲಕ ಪೂರೈಕೆಯಾದ ಡೀಸೆಲ್ ಅಳತೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದ ಹಿನ್ನೆಲೆಯಲ್ಲಿ ಕಂಪನಿ ಅಧಿಕಾರಿಗಳು ಮಂಗಳೂರು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದರು. ಅಲ್ಲದೆ ಕಂಪನಿಯ ತಾಂತ್ರಿಕ ತಜ್ಞರ ಪರಿಶೀಲನೆ ವೇಳೆ ಇಲ್ಲಿ ಸೋರಿಕೆ ಇರುವುದು ತಿಳಿದು ಬಂದಿದೆ. ಅದರಂತೆ ಐವನ್ ಜಮೀನಿನಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರ ಸಮಕ್ಷಮ ಜೆಸಿಬಿ ಮೂಲಕ ಹೊಂಡ ತೋಡಿದಾಗ ಪೈಪ್ಲೈನ್ಗೆ ಕನ್ನ ಕೊರೆದು ಡೀಸೆಲ್ ಕದಿಯುತ್ತಿದ್ದುದು ಬೆಳಕಿಗೆ ಬಂದಿದೆ.
ಪೈಪ್ಲೈನ್ ಮೂಲಕ ಪೂರೈಕೆಯಾದ ಡೀಸೆಲ್ ಅಳತೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದ ಹಿನ್ನೆಲೆಯಲ್ಲಿ ಕಂಪನಿ ಅಧಿಕಾರಿಗಳು ಮಂಗಳೂರು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದರು. ಅಲ್ಲದೆ ಕಂಪನಿಯ ತಾಂತ್ರಿಕ ತಜ್ಞರ ಪರಿಶೀಲನೆ ವೇಳೆ ಇಲ್ಲಿ ಸೋರಿಕೆ ಇರುವುದು ತಿಳಿದು ಬಂದಿದೆ. ಅದರಂತೆ ಐವನ್ ಜಮೀನಿನಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರ ಸಮಕ್ಷಮ ಜೆಸಿಬಿ ಮೂಲಕ ಹೊಂಡ ತೋಡಿದಾಗ ಪೈಪ್ಲೈನ್ಗೆ ಕನ್ನ ಕೊರೆದು ಡೀಸೆಲ್ ಕದಿಯುತ್ತಿದ್ದುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸಂಶಯಗೊಂಡ ಅಧಿಕಾರಿಗಳು ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು, ಶುಕ್ರವಾರ ಸಂಜೆ ಹಿಟಾಚಿ ಮೂಲಕ ಮಣ್ಣು ಅಗೆದು ನೋಡಿದಾಗ ಸುಮಾರು 1 ಅಡಿ ಆಳದಲ್ಲಿ ಅಕ್ರಮ ಪೈಪ್ ಮತ್ತು ಗೇಟ್ ವಾಲ್ ಅಳವಡಿಸಿರುವುದು ಪತ್ತೆಯಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಪೆಟ್ರೋನೆಟ್ ಸಂಸ್ಥೆ ವ್ಯವಸ್ಥಾಪಕ ರಾಜಣ್ಣ ತಿಳಿಸಿದ್ದಾರೆ. ಸಂಸ್ಥೆ ಮೇಲ್ವಿಚಾರಕ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯ ಡೊಂಬಯ್ಯ ಬಿ.ಅರಳ, ಉಮೇಶ ಬಿ.ಎಂ., ಗ್ರಾಮಕರಣಿಕ ಅಮೃತಾಂಶು, ಸಹಾಯಕ ಸಂದೀಪ್ ಕುರ್ಯಾಳ, ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಎಂ. ಇದ್ದರು.ದ ಡೀಸೆಲ್ ಕಳವು ಮಾಡಿರುವುದು ಶುಕ್ರವಾರ ಸಂಜೆ ಪತ್ತೆಯಾಗಿದೆ.
Discussion about this post