ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಲಶೇಖರ, ಬಿಕ್ಕರ್ನಕಟ್ಟೆ ಸಮೀಪದ ಕೈಕಂಬ ಮೇಲ್ಸೇತುವೆ ಸಮೀಪದ ರಸ್ತೆಯ ಸ್ಥಿತಿಯ ಕತೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸಾವಿರಾರು ಕಾರ್ಮಿಕರು ಈ ರಸ್ತೆಯಲ್ಲಿ ಸಾಗುತ್ತಾರೆ. ಮೂಗು ಮುಚ್ಚಿಕೊಂಡು ಸಂಚರಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ , ಕೋಳೆತ ಕಸ ತುಂಬಿ ದುರ್ನಾತ ಆವರಿಸಿ ದಾರಿಯಲ್ಲಿ ಸಾಗುವವರಿಗೆ ಉಚಿತ ಮತ್ತು ಖಚಿತವಾಗಿ ಬಿಟ್ಟಿದೆ.
ಇಲ್ಲಿನ ಮಹಾನಗರ ಪಾಲಿಕೆ ಸದಸ್ಯೆ ಕಾವ್ಯ ನಟರಾಜನ್ ಗಮನಕ್ಕೆ ಬಂದಿಲ್ಲವೆಂದು ಕಾಣುತ್ತದೆ. ಇಲ್ಲದಿದ್ದರೆ ಸ್ವಚ್ಛ ಮಾಡಿಸುತ್ತಿದ್ದರು ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಸ್ವಚ್ಛ ಮಂಗಳೂರಿನಲ್ಲಿ ಇದೊಂದು ರಸ್ತೆ ನಗರದ ಸ್ವಚ್ಛತೆಗೆ ಕಪ್ಪು ಚುಕ್ಕೆ. ಇದನ್ನು ಸರಿ ಪಡಿಸುವ ಜವಾಬ್ದಾರಿ ಪದುವ ಕುಲಶೇಖರ ವಾರ್ಡಿನ ಕಾವ್ಯ ನಟರಾಜನ್ ಅವರದ್ದು.
ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳುತ್ತಾರೆ ಎಂಬ ಗಾಢನಂಬಿಕೆ ಕೋಸ್ಟಲ್ ಟೈಮ್ಸ್ ದು. ಸಾರ್ವಜನಿಕರ ಹಿತಾಸಕ್ತಿ ಯೊಂದಿಗೆ….
Discussion about this post