• About us
  • Contact us
  • Disclaimer
Wednesday, June 25, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

240 ವರ್ಷಗಳ ಹಿಂದೆ ಟಿಪ್ಪುವಿನ ದಾಳಿಯಿಂದ ರಕ್ಷಿಸಿದ ಬಂಟರಿಗೆ ಇಂದಿಗೂ ಕ್ರೈಸ್ತರಿಂದ ಗೌರವ: ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ

Coastal Times by Coastal Times
December 1, 2023
in ಕರಾವಳಿ
240 ವರ್ಷಗಳ ಹಿಂದೆ ಟಿಪ್ಪುವಿನ ದಾಳಿಯಿಂದ ರಕ್ಷಿಸಿದ ಬಂಟರಿಗೆ ಇಂದಿಗೂ ಕ್ರೈಸ್ತರಿಂದ ಗೌರವ: ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ
217
VIEWS
WhatsappTelegramShare on FacebookShare on Twitter

ಮಂಗಳೂರು, ನ 30: ಅದು 240 ವರ್ಷಗಳ ಹಿಂದಿನ ಘಟನೆ. ಟಿಪ್ಪು ಕರಾವಳಿ ಕ್ರೈಸ್ತರ ಮೇಲೆ ಮಾಡಿದ ಕ್ರೌರ್ಯ ಆ ಸಮುದಾಯವನ್ನು ಪತರುಗುಟ್ಟುವಂತೆ ಮಾಡಿತ್ತು. ಆದರೆ ಆ ಸಂಧರ್ಭದಲ್ಲಿ ಕ್ರೈಸ್ತರ ಜೊತೆ ನಿಂತಿದ್ದು ಆ ಮೂರು ಬಂಟ ಗುತ್ತು ಮನೆತನಗಳು. ಅಂದು ಪ್ರಾಣ ಉಳಿಸಿದ ಬಂಟರನ್ನು ಕ್ರೈಸ್ತ ಸಮುದಾಯ ಇಂದಿಗೂ ಗೌರವಿಸುತ್ತಾ ಬಂದಿದೆ.

ಮಂಗಳೂರಿನ ಕಿನ್ನಿಗೋಳಿ ಸಮೀಪ ದಾಮಸ್ ಕಟ್ಟೆಯ ಚರ್ಚ್‌ನಲ್ಲಿ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಮೂರು ಬಂಟ ಮನೆತನಗಳನ್ನು ಈ ಬಾರಿಯೂ ಗೌರವಿಸಲಾಗಿದೆ. ಕರಾವಳಿ ಕ್ರೈಸ್ತರ ಮೇಲೆ ಆಕ್ರಮಣ ಮಾಡುತ್ತಾ ಟಿಪ್ಪು ಸುಲ್ತಾನ್ 1784ರ ಫೆಬ್ರವರಿ 24 ರಂದು ಕಿನ್ನಿಗೋಳಿಯ ಕಿರೆಂ ಚರ್ಚ್ ಅನ್ನು ನಾಶ ಪಡಿಸಲು ಮುಂದಾದಾಗ ಬಂಟ ಸಮುದಾಯದ ಮೂರು ಮನೆತನಗಳಾದ ಐಕಳ ಬಾವ, ತಾಳಿಪಾಡಿಗುತ್ತಯ ಹಾಗೂ ಏಳಿಂಜೆ ಅಂಗಡಿಗುತ್ತು ಕುಟುಂಬಗಳ ಸದಸ್ಯರು ಎದೆಗುಂದರೆ ಟಿಪ್ಪು ಸೈನ್ಯ ವನ್ನು ಎದುರಿಸಿ ಚರ್ಚ್ ರಕ್ಷಣೆ ಮಾಡಿದ್ದರು.

ಚರ್ಚ್ ವ್ಯಾಪ್ತಿಗೆ ಬರುವ ನೂರಾರು ಕುಟುಂಬಗಳನ್ನು ಬಂಟರು ರಕ್ಷಣೆ ಮಾಡಿದ್ದರು. ಅನೇಕ ಕ್ರೈಸ್ತರನ್ನು ತಮ್ಮ ಮನೆಯಲ್ಲೇ ಉಳಿಸಿ ಕ್ರೈಸ್ತರನ್ನು ತಮ್ಮ ಮನೆಯ ಸದಸ್ಯರೆಂದು ಹೇಳಿ ಟಿಪ್ಪು ಸೈನಿಕರ ದಾರಿ ತಪ್ಪಿಸಿದರು. ಬಂಟ ಮಹಿಳೆಯರ ರೀತಿ ಕ್ರೈಸ್ತ ಮಹಿಳೆಯರಿಗೆ ಚಿನ್ನ ತೊಡಿಸಿ ತಮ್ಮ ಮನೆಯವರಂತೆ ನೋಡಿಕೊಂಡರು.ಮಂಗಳೂರಿನಿಂದ ಶ್ರೀರಂಗಪಟ್ಟಣದ ತನಕ ಕ್ರೈಸ್ತರನ್ನು ನಡೆಸಿಕೊಂಡೇ ಹೋಗಿ ಟಿಪ್ಪು ಮೈಸೂರಿನಲ್ಲಿ ಬಂಧನದಲ್ಲಿರಿಸಿಕೊಂಡಿದ್ದ..ಟಿಪ್ಪು ಮರಣದ ಬಳಿಕ ಮರಳಿ ಊರಿಗೆ ಬಂದ ಕ್ರೈಸ್ತರನ್ನು ಆದರದಿಂದ ಸ್ವಾಗತಿಸಿದ ಕ್ರೈಸ್ತರಿಗೆ ಸಹಾಯ ನೀಡಿ ಚರ್ಚ್ ನ್ನು ಹಸ್ತಾಂತರಿಸಿದರು. ಅಂದು ಬಂಟ ಮನೆತನ ಮಾಡಿದ ಸಹಾಯಕ್ಕೆ ದಾಮಸ್ ಕಟ್ಟೆಯ ಕ್ರೈಸ್ತರು ಇಂದಿಗೂ ಆ ಮೂರು ಬಂಟ‌ ಮನೆತನಗಳಿಗೆ ಪ್ರತಿ ವರ್ಷ ಚರ್ಚ್‌ನ ವರ್ಷಾವಧಿಯ ಸಂದರ್ಭದಲ್ಲಿ ಚರ್ಚ್ ಪ್ರಮುಖರು ವೀಳ್ಯದೆಲೆ ಅಡಿಕೆ, ಬಾಳೆಗೊನೆ ನೀಡಿ ಧನ್ಯವಾದ ಸಮರ್ಪಣೆ ಮಾಡುತ್ತಿದ್ದಾರೆ.

ಈ ಬಾರಿಯೂ ಬಂಟ ಮನೆತನಗಳನ್ನು ಚರ್ಚ್‌ಗೆ ಕರೆಯಿಸಿ ಗೌರವ ನೀಡಲಾಗಿದೆ. ಮೂರು ಗುತ್ತಿನ ಎಂಟನೇ ತಲೆಮಾರಿನ ಪ್ರತಿನಿಧಿಗಳು ಚರ್ಚ್ ಬಂದು ಗೌರವ ಸ್ವೀಕರಿಸಿದ್ದಾರೆ. ಈ ಗೌರವಕ್ಕೆ ಪ್ರತಿಯಾಗಿ ಮೂರು ಗುತ್ತುಗಳಲ್ಲಿ ನಡೆಯುವ ದೈವಾರಾಧನೆಗೆ ಚರ್ಚ್ ಧರ್ಮಗುರುಗಳಿಗೆ ಆಮಂತ್ರಣ ನೀಡಲಾಗುತ್ತದೆ. ಪ್ರತೀ ಶುಭ ಕಾರ್ಯದ ಸಂಧರ್ಭದಲ್ಲಿ ಬಂಟ ಮನೆತನಗಳು‌ ಮೊದಲು ಚರ್ಚ್‌ಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಮೂಲಕ ಚರ್ಚ್ ಸೌಹಾರ್ದತೆಯ ಕೊಂಡಿಯಾಗಿ ಇಂದಿಗೂ ಸರ್ವ ಧರ್ಮದ ಜನರ ಪ್ರೀತಿಗೆ ಒಳಗಾಗಿದೆ.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸನಬ್ಬ ಚಾರ್ಮಾಡಿ ಅವರಿಂದ ಶೀಘ್ರ ಉಚಿತ ಆಂಬುಲೆನ್ಸ್ ಸೇವೆ

Next Post

ಫೋರಂ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (ಫೋಕಸ್ ) ಸಂಘಟನೆಯ ವತಿಯಿಂದ ಬಡ ಕುಟುಂಬಕ್ಕೆ ಆರ್ಥಿಕ ನೆರವು

Related Posts

ಅಂತಾರಾಷ್ಟ್ರೀಯ ಯೋಗ ದಿನದಂದು ಮಂಗಳೂರಿನಲ್ಲಿ ‘ಜಲಯೋಗ’
ಕರಾವಳಿ

ಅಂತಾರಾಷ್ಟ್ರೀಯ ಯೋಗ ದಿನದಂದು ಮಂಗಳೂರಿನಲ್ಲಿ ‘ಜಲಯೋಗ’

June 21, 2025
26
ಯಡಕುಮೇರಿ ಬಳಿ ಹಳಿಗೆ ಉರುಳಿದ ಬಂಡೆಗಳು: ಮಂಗಳೂರು- ಬೆಂಗಳೂರು ರೈಲು ಸಂಚಾರ ಸ್ಥಗಿತ
ಕರಾವಳಿ

ಯಡಕುಮೇರಿ ಬಳಿ ಹಳಿಗೆ ಉರುಳಿದ ಬಂಡೆಗಳು: ಮಂಗಳೂರು- ಬೆಂಗಳೂರು ರೈಲು ಸಂಚಾರ ಸ್ಥಗಿತ

June 21, 2025
44
Next Post
ಫೋರಂ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (ಫೋಕಸ್ ) ಸಂಘಟನೆಯ ವತಿಯಿಂದ ಬಡ ಕುಟುಂಬಕ್ಕೆ ಆರ್ಥಿಕ ನೆರವು

ಫೋರಂ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (ಫೋಕಸ್ ) ಸಂಘಟನೆಯ ವತಿಯಿಂದ ಬಡ ಕುಟುಂಬಕ್ಕೆ ಆರ್ಥಿಕ ನೆರವು

Discussion about this post

Recent News

ಮಂಗಳೂರು ಬಿಜೈ: ಬ್ಯೂಟಿ ಸಲೂನ್ ಅಕ್ರಮ ಚಟುವಟಿಕೆ ಆರೋಪ: ಪೊಲೀಸರ ದಾಳಿ, ವ್ಯಾಪಾರ ಪರವಾನಗಿ ರದ್ದು

ಮಂಗಳೂರು ಬಿಜೈ: ಬ್ಯೂಟಿ ಸಲೂನ್ ಅಕ್ರಮ ಚಟುವಟಿಕೆ ಆರೋಪ: ಪೊಲೀಸರ ದಾಳಿ, ವ್ಯಾಪಾರ ಪರವಾನಗಿ ರದ್ದು

June 24, 2025
91
ಉಡುಪಿ: ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದಾಕೆ ಕೊನೆಗೂ ಅಹಮದಾಬಾದ್‌ನಲ್ಲಿ ಪೊಲೀಸ್ ಬಲೆಗೆ

ಉಡುಪಿ: ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದಾಕೆ ಕೊನೆಗೂ ಅಹಮದಾಬಾದ್‌ನಲ್ಲಿ ಪೊಲೀಸ್ ಬಲೆಗೆ

June 24, 2025
40
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ಬಿಜೈ: ಬ್ಯೂಟಿ ಸಲೂನ್ ಅಕ್ರಮ ಚಟುವಟಿಕೆ ಆರೋಪ: ಪೊಲೀಸರ ದಾಳಿ, ವ್ಯಾಪಾರ ಪರವಾನಗಿ ರದ್ದು

ಮಂಗಳೂರು ಬಿಜೈ: ಬ್ಯೂಟಿ ಸಲೂನ್ ಅಕ್ರಮ ಚಟುವಟಿಕೆ ಆರೋಪ: ಪೊಲೀಸರ ದಾಳಿ, ವ್ಯಾಪಾರ ಪರವಾನಗಿ ರದ್ದು

June 24, 2025
ಉಡುಪಿ: ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದಾಕೆ ಕೊನೆಗೂ ಅಹಮದಾಬಾದ್‌ನಲ್ಲಿ ಪೊಲೀಸ್ ಬಲೆಗೆ

ಉಡುಪಿ: ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದಾಕೆ ಕೊನೆಗೂ ಅಹಮದಾಬಾದ್‌ನಲ್ಲಿ ಪೊಲೀಸ್ ಬಲೆಗೆ

June 24, 2025
ಇರಾನ್ ಕತಾರ್​​ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ: ಟ್ರಂಪ್ ವಿರುದ್ಧ ಇರಾನ್ ಪ್ರತೀಕಾರ

ಇರಾನ್ ಕತಾರ್​​ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ: ಟ್ರಂಪ್ ವಿರುದ್ಧ ಇರಾನ್ ಪ್ರತೀಕಾರ

June 24, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d