• About us
  • Contact us
  • Disclaimer
Saturday, July 12, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಒಂದು ಕೆಜಿಗೂ ಮಿಕ್ಕಿ ಚಿನ್ನ ಕದ್ದು ಗೋವಾಕ್ಕೆ ಪರಾರಿ: ಸಿನಿಮಾ ನಟಿ ಸೌಮ್ಯ ಶೆಟ್ಟಿ ಬಂಧನ

Coastal Times by Coastal Times
March 5, 2024
in ಕ್ರೈಮ್ ನ್ಯೂಸ್
ಒಂದು ಕೆಜಿಗೂ ಮಿಕ್ಕಿ ಚಿನ್ನ ಕದ್ದು ಗೋವಾಕ್ಕೆ ಪರಾರಿ: ಸಿನಿಮಾ ನಟಿ ಸೌಮ್ಯ ಶೆಟ್ಟಿ ಬಂಧನ
219
VIEWS
WhatsappTelegramShare on FacebookShare on Twitter

ಆಂಧ್ರಪ್ರದೇಶ ಮಾ.5: ಚಿನ್ನ ಕದ್ದ ಆರೋಪದಲ್ಲಿ ಸಿನಿಮಾ ನಟಿಯೊಬ್ಬಾಕೆಯನ್ನು ಆಂಧ್ರ ಪ್ರದೇಶದ ವೈಜಾಗ್ ಪೊಲೀಸರು ಬಂಧಿಸಿದ್ದಾರೆ. ನಟಿ ಸೌಮ್ಯ ಶೆಟ್ಟಿ ಬಂಧಿತ ಆರೋಪಿ. ಭಾರತೀಯ ಅಂಚೆ ಇಲಾಖೆ ನೌಕರ ಪ್ರಸಾದ್ ಬಾಬು ಎಂಬುವರ ಮನೆಯಲ್ಲಿ ನಟಿ ಸೌಮ್ಯ ಶೆಟ್ಟಿ ಚಿನ್ನ ಕದ್ದಿದ್ದಾರೆಂದು ಪೊಲೀಸರು ಆರೋಪಿಸಿದ್ದು, ನಟಿಯಿಂದ ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ನಟಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

ಸೌಮ್ಯ ಶೆಟ್ಟಿ, ಪ್ರಸಾದ್ ಬಾಬು ಅವರ ಮಗಳು ಮೌನಿಕಾರ ಗೆಳತಿಯಾಗಿದ್ದು, ಮೌನಿಕಾಳ ಭೇಟಿಗೆ ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದರು. ಪ್ರಸಾದ್ ಬಾಬು ಕುಟುಂಬದ ಜೀವನ ಶೈಲಿ, ಆದಾಯ ಇನ್ನಿತರೆ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದ ಸ್ನೇಹಾ ಶೆಟ್ಟಿ, ಪ್ರಸಾದ್ ಬಾಬು ಅವರು ಹಣ, ಒಡವೆಗಳನ್ನೆಲ್ಲ ಎಲ್ಲಿಟ್ಟಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಸಹ ತಿಳಿದುಕೊಂಡಿದ್ದರು. ಪ್ರಸಾದ್ ಬಾಬು ಕುಟುಂಬದೊಟ್ಟಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದ ಸೌಮ್ಯ ಶೆಟ್ಟಿ ಮೇಲೆ ಕುಟುಂಬವವೂ ವಿಶ್ವಾಸವಿಟ್ಟಿದ್ದರು. ಇದೇ ವಿಶ್ವಾಸ ಬಳಸಿ ಸೌಮ್ಯ ಶೆಟ್ಟಿ ಆಗಾಗ್ಗೆ ಅವರ ಮನೆಯಿಂದ ಚಿನ್ನ ಕದಿಯುತ್ತಿದ್ದರು. ಇತ್ತೀಚೆಗಷ್ಟೆ ಪ್ರಸಾದ್ ಬಾಬು ಹಾಗೂ ಅವರ ಕುಟುಂಬ ಮದುವೆಗೆಂದು ಹೊರಗೆ ಹೋಗಿದ್ದಾಗ ಸೌಮ್ಯ ಶೆಟ್ಟಿ, ಪ್ರಸಾದ್ ಅವರ ಮನೆಯಿಂದ ಸುಮಾರು ಒಂದು ಕೆಜಿಗೂ ಹೆಚ್ಚು ಚಿನ್ನ ಕದ್ದಿದ್ದರು.

ಮದುವೆಯಿಂದ ಮರಳಿ ಬಂದ ಪ್ರಸಾದ್ ಬಾಬು ಕುಟುಂಬಕ್ಕೆ ಚಿನ್ನ ಕಳ್ಳತನವಾಗಿರುವ ವಿಷಯ ತಿಳಿದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ, ಬೆರಳಚ್ಚುತಜ್ಞರ ಸಹಾಯಗಳನ್ನು ಪಡೆದು ಸುಮಾರು 11 ಜನರನ್ನು ಆರೋಪಿಗಳನ್ನಾಗಿ ಗುರುತಿಸಿ ವಿಚಾರಣೆ ನಡೆಸಿದ್ದರು. ಆರೋಪಿಗಳ ಪಟ್ಟಿಯಲ್ಲಿ ಸೌಮ್ಯ ಶೆಟ್ಟಿ ಸಹ ಇದ್ದರು. ಸೌಮ್ಯ ಶೆಟ್ಟಿಯ ವಿಚಾರಣೆ ನಡೆಸಿದಾಗ ತಾವು ಚಿನ್ನ ಕದ್ದಿರುವ ಸತ್ಯವನ್ನು ಸೌಮ್ಯ ಶೆಟ್ಟಿ ಒಪ್ಪಿಕೊಂಡಿದ್ದಾರೆ.

ಚಿನ್ನ ಕದ್ದ ಬಳಿಕ ಸೌಮ್ಯ ಶೆಟ್ಟಿ ಗೋವಾಕ್ಕೆ ಪರಾರಿಯಾಗಿದ್ದರು. ನಟಿಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ 74 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಚಿನ್ನವನ್ನು ತಮಗೆ ನೀಡಲಾಗದೆಂದು, ಬಾಕಿ ಚಿನ್ನವನ್ನು ಕೊಡುವಂತೆ ಒತ್ತಾಯ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರ ಮುಂದೆಯೇ ನಟಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ತನಿಖೆ ಇನ್ನೂ ಚಾಲ್ತಿಯಲ್ಲಿದೆ. ಸೌಮ್ಯ ಶೆಟ್ಟಿ ತೆಲುಗಿನ ‘ಯುವರ್ಸ್ ಲವಿಂಗ್ಲಿ’, ‘ದಿ ಟ್ರಿಪ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಕೆಲವು ಕಿರು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿಯೂ ಸಕ್ರಿಯರಾಗಿದ್ದ ಸೌಮ್ಯ ಶೆಟ್ಟಿ ಸಾಕಷ್ಟು ಫಾಲೋವರ್​ಗಳನ್ನು ಹೊಂದಿದ್ದಾರೆ.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಆ್ಯಸಿಡ್ ದಾಳಿ ಸಂತ್ರಸ್ತ ಬಾಲಕಿಯರಿಗೆ ತಲಾ 4 ಲಕ್ಷ ರೂ ಪರಿಹಾರ: ಇಬ್ಬರಿಗೆ ಪ್ಲಾಸ್ಟಿಕ್ ಸರ್ಜರಿ ಅಗತ್ಯವಿದೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ

Next Post

ಮಂಗಳೂರಿನಲ್ಲಿ, ಹೆಸರಾಂತ ಸಂಗೀತಗಾರ ಗೋಪಿ ಕಾಮತ್ ಅವರಿಂದ ರೆಟ್ರೋ ಬಾಲಿವುಡ್ ಸಂಗೀತ

Related Posts

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ
ಕ್ರೈಮ್ ನ್ಯೂಸ್

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

July 12, 2025
34
58 ಮಂದಿ ಬಲಿ ಪಡೆದಿದ್ದ ಕೊಯಮತ್ತೂರು ಬಾಂಬ್ ಸ್ಫೋಟದ ರೂವಾರಿ ‘ಟೈಲರ್ ರಾಜಾ’ 27 ವರ್ಷಗಳ ಬಳಿಕ ಕರ್ನಾಟಕದಲ್ಲಿ ಅರೆಸ್ಟ್!
ಕ್ರೈಮ್ ನ್ಯೂಸ್

58 ಮಂದಿ ಬಲಿ ಪಡೆದಿದ್ದ ಕೊಯಮತ್ತೂರು ಬಾಂಬ್ ಸ್ಫೋಟದ ರೂವಾರಿ ‘ಟೈಲರ್ ರಾಜಾ’ 27 ವರ್ಷಗಳ ಬಳಿಕ ಕರ್ನಾಟಕದಲ್ಲಿ ಅರೆಸ್ಟ್!

July 11, 2025
114
Next Post
ಮಂಗಳೂರಿನಲ್ಲಿ, ಹೆಸರಾಂತ ಸಂಗೀತಗಾರ ಗೋಪಿ ಕಾಮತ್ ಅವರಿಂದ ರೆಟ್ರೋ ಬಾಲಿವುಡ್ ಸಂಗೀತ

ಮಂಗಳೂರಿನಲ್ಲಿ, ಹೆಸರಾಂತ ಸಂಗೀತಗಾರ ಗೋಪಿ ಕಾಮತ್ ಅವರಿಂದ ರೆಟ್ರೋ ಬಾಲಿವುಡ್ ಸಂಗೀತ

Discussion about this post

Recent News

ಎಂಆರ್ ಪಿಎಲ್ ಪೆಟ್ರೋಲಿಯಂ ಶುದ್ಧೀಕರಣ ಘಟಕದಲ್ಲಿ ಅನಿಲ ಸೋರಿಕೆ ಇಬ್ಬರು ಕಾರ್ಮಿಕರು ಸಾವು, ಓರ್ವ ಅಸ್ವಸ್ಥ

ಎಂಆರ್ ಪಿಎಲ್ ಪೆಟ್ರೋಲಿಯಂ ಶುದ್ಧೀಕರಣ ಘಟಕದಲ್ಲಿ ಅನಿಲ ಸೋರಿಕೆ ಇಬ್ಬರು ಕಾರ್ಮಿಕರು ಸಾವು, ಓರ್ವ ಅಸ್ವಸ್ಥ

July 12, 2025
50
ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

July 12, 2025
34
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಎಂಆರ್ ಪಿಎಲ್ ಪೆಟ್ರೋಲಿಯಂ ಶುದ್ಧೀಕರಣ ಘಟಕದಲ್ಲಿ ಅನಿಲ ಸೋರಿಕೆ ಇಬ್ಬರು ಕಾರ್ಮಿಕರು ಸಾವು, ಓರ್ವ ಅಸ್ವಸ್ಥ

ಎಂಆರ್ ಪಿಎಲ್ ಪೆಟ್ರೋಲಿಯಂ ಶುದ್ಧೀಕರಣ ಘಟಕದಲ್ಲಿ ಅನಿಲ ಸೋರಿಕೆ ಇಬ್ಬರು ಕಾರ್ಮಿಕರು ಸಾವು, ಓರ್ವ ಅಸ್ವಸ್ಥ

July 12, 2025
ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

July 12, 2025
ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು

ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು

July 12, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d