ಮಂಗಳೂರು, ಜು. 4: ಇಬ್ಬರು ರೋಗಿಗಳ ಚಿಕಿತ್ಸೆ ಮುಗಿಸಿ ಶಿವಮೊಗ್ಗದಿಂದ ಮಂಗಳೂರಿಗೆ ಆಗಮಿಸುವಾಗ ನಡೆದ ಘಟನೆ. ರಭಸವಾಗಿ ಬರುವ ಬಸ್ಸಿನಿಂದ ಅಪಘಾತ ಸಂಭವಿಸುವ ಅರಿವಾಗಿ ತನ್ನ ಹತ್ತಿರದಲ್ಲಿ ಕುಳಿತಿರುವ ಸ್ನೇಹಿತನನ್ನು ಪಾರು ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಡ್ರೈವಿಂಗ್ ಸೀಟಿನಲ್ಲಿ ಇದ್ದ ಅವರ ಸ್ನೇಹಿತ ಹೇಳುತ್ತಾರೆ. ತೀರ್ಥಹಳ್ಳಿ ಹೆದ್ದಾರಿಯ ಸಕ್ರೆಬೈಲು ಸಮೀಪ ನಡೆದಿದೆ. ಮಂಗಳೂರಿನ ಕುಪ್ಪೆಪದವು ಕಲ್ಲಾಡಿ ನಿವಾಸಿ ಅಶ್ರಫ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಜಮಾಅತೆ ಇಸ್ಲಾಮೀ ಹಿಂದ್ ಕುಪ್ಪೆಪದವು ಸಮಾಜಸೇವಾ ಘಟಕದ ಸಂಚಾಲಕರಾಗಿರುವ ಇವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮಾತ್ರವಲ್ಲದೆ ಸಮಾಜ ಸೇವಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದ, ವೆಲ್ಫೇರ್ ಪಕ್ಷದ ಸ್ಥಳೀಯ ಯುವ ನಾಯಕ ಅಶ್ರಫ್ ಕಲ್ಲಾಡಿಯವರು ಅಕಾಲಿಕ ಮರಣ ಹೊಂದಿರುವುದು ನಮ್ಮ ಪಕ್ಷಕ್ಕೆ ಮಾತ್ರವಲ್ಲದೆ ಒಟ್ಟು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವೆಲ್ಫೇರ್ ಪಕ್ಷದ ದ.ಕ. ಜಿಲ್ಲಾ ಸಮಿತಿಯು ತನ್ನ ಸಂತಾಪ ವ್ಯಕ್ತಪಡಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post