• About us
  • Contact us
  • Disclaimer
Tuesday, July 8, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ನಾಲ್ಕು ವರ್ಷದ ಪುಟ್ಟ ಮಗುವನ್ನ ಕೊಂದು ಸೂಟ್​​ಕೇಸ್​ನಲ್ಲಿ ತುಂಬಿ ಸಾಗಿಸುತ್ತಿದ್ದ ಸ್ಟಾರ್ಟ್ ಅಪ್ ಸಿಇಓ ಸುಚೇತಾ – ತನಿಖೆಯಲ್ಲಿ ಕೊಲೆಯ ರಹಸ್ಯ ಬಯಲು

Coastal Times by Coastal Times
January 9, 2024
in ರಾಜ್ಯ
ನಾಲ್ಕು ವರ್ಷದ ಪುಟ್ಟ ಮಗುವನ್ನ ಕೊಂದು ಸೂಟ್​​ಕೇಸ್​ನಲ್ಲಿ ತುಂಬಿ ಸಾಗಿಸುತ್ತಿದ್ದ ಸ್ಟಾರ್ಟ್ ಅಪ್ ಸಿಇಓ ಸುಚೇತಾ – ತನಿಖೆಯಲ್ಲಿ ಕೊಲೆಯ ರಹಸ್ಯ ಬಯಲು
152
VIEWS
WhatsappTelegramShare on FacebookShare on Twitter

ಬೆಂಗಳೂರು: ಹೆತ್ತ ಮಗುವನ್ನೇ ಕೊಂದು ಶವ ಸಾಗಿಸುವಾಗ ತಾಯಿ ಸಿಕ್ಕಿಬಿದ್ದಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ, ಕಾರಿನಲ್ಲಿ 4 ವರ್ಷದ ಮಗುವಿನ ಶವ ಪತ್ತೆಯಾಗಿದೆ. ಪಶ್ಚಿಮ ಬಂಗಾಳ ಮೂಲದ 39 ವರ್ಷದ ಸುಚನಾ ಸೇಠ್ ಎಂಬಾಕೆ, ತನ್ನ ಮಗನನ್ನ ಗೋವಾದಲ್ಲಿ ಕೊಂದು, ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು, ಕಾರಿನಲ್ಲಿ ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದಳು. ಇನ್ನೇನು ಮೂರ್ನಾಲ್ಕು ತಾಸಿನಲ್ಲಿ ಸುಚನಾ, ಮಗನ ಶವದೊಂದಿಗೆ ಬೆಂಗಳೂರು ತಲುಪಿಬಿಟ್ಟಿರೋಳು. ಅಷ್ಟರಲ್ಲಿ ಐಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಪತಿಯೊಂದಿಗೆ ದೂರವಾಗಲು ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದ ಸುಚನಾ, ಜನವರಿ 6ರಂದು ನಾಲ್ಕು ವರ್ಷದ ಮಗನ ಜೊತೆ ಗೋವಾಗೆ ತೆರಳಿದ್ದಳು. ಗೋವಾದ ಹೋಟೆಲ್​ ನಲ್ಲಿ ಉಳಿದುಕೊಂಡಿದ್ದ ಸುಚನಾ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಕೈ ಕುಯ್ದುಕೊಂಡು ಆತ್ಮಹತ್ಯೆಗೂ ಸುಚನಾ ಪ್ರಯತ್ನಿಸಿದ್ದಳು. ಇನ್ನು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸುಚನಾ ಮಾನಸಿಕ ಒತ್ತಡದಲ್ಲಿದ್ದರು. ಈ ನಡುವೆ ನ್ಯಾಯಾಲಯ ಪ್ರತಿ ಭಾನುವಾರ ಮಗುವನ್ನ ನೋಡಲು ತಂದೆಗೆ ಅನುಮತಿ ನೀಡಿತ್ತು. ಹೀಗಾಗಿ ಫಿಲಿಪೈನ್ಸ್​ನಲ್ಲಿರುವ ​ವೆಂಕಟರಮಣ ಪ್ರತಿ ಭಾನುವಾರ ವಿಡಿಯೋ ಕಾಲ್ ಮುಖಾಂತರ ಮಗುವನ್ನು ನೋಡುತ್ತಿದ್ದನು. ಆದರೆ ಸುಚನಾಗೆ ಇದು ಇಷ್ಟವಿರಲಿಲ್ಲ.

ಸುಚನಾ ಮಗನನ್ನು ಕರೆದುಕೊಂಡು ಜನವರಿ 6 ರಂದು ಗೋವಾಕ್ಕೆ ಪ್ರವಾಸ ತೆರಳಿದ್ದಾರೆ. ಜನವರಿ 7 ರವಿವಾರ ರಾತ್ರಿ ಉತ್ತರ ಗೋವಾ ತಲುಪಿದ್ದಾರೆ. ಅಲ್ಲಿ ಕೊಲ್​ ಬನಿಯಾನ್​ ಹೋಟೆಲ್​ನಲ್ಲಿ ತಾಯಿ-ಮಗು ಉಳಿದುಕೊಂಡಿದ್ದಾರೆ. ಸುಚನಾ ಜನವರಿ 7ರ ಮಧ್ಯರಾತ್ರಿ ರಾತ್ರಿಯೇ ಹೋಟೆಲ್​​​​​​ನಿಂದ ಚೆಕ್​ಔಟ್ ಆಗಿದ್ದಾರೆ. ಬಳಿಕ ಹೊಟೆಲ್ ಸಿಬ್ಬಂದಿಗೆ “ಬೆಂಗಳೂರಿಗೆ ಹೋಗಲು ಕ್ಯಾಬ್ ಮಾಡಿಕೊಡುವಂತೆ” ಕೇಳಿದ್ದಾರೆ. ಆಗ ಹೊಟೇಲ್​ ಸಿಬ್ಬಂದಿ ಗೋವಾದಿಂದ ಬೆಂಗಳೂರು ಹೋಗಲು ಕ್ಯಾಬ್ ದುಬಾರಿ ಆಗುತ್ತೆ ಅಂತ ಹೇಳಿದ್ದಾರೆ. ವಿಮಾನದ ಮೂಲಕ ಹೋದರೇ ಕಡಿಮೆ ದರದಲ್ಲಿ ತಲುಪಬಹುದು ಎಂದು ಹೊಟೆಲ್ ಸಿಬ್ಬಂದಿ ತಿಳಿಸಿದ್ದಾರೆ.

ಆದರೆ ಇದಕ್ಕೆ ಒಪ್ಪದ ಸುಚನಾ “ಬೇಡ ಬೇಡ ನನಗೆ ಟ್ಯಾಕ್ಸಿನೇ ಬೇಕು” ಅಂತ ಪಟ್ಟು ಹಿಡಿದಿದ್ದಾರೆ. ರಾತ್ರಿಯೇ ಗೋವಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇದಾದ ಬಳಿಕ ಇಂದು (ಜ.09) ಬೆಳಗ್ಗೆ ಹೋಟೆಲ್​ ಸಿಬ್ಬಂದಿ ರೂಮ್ ಕ್ಲೀನ್ ಮಾಡಲು ಹೋಗಿದ್ದಾರೆ. ಈ ವೇಳೆ ರೂಮ್ ನಲ್ಲಿ ರಕ್ತದ ಕಲೆಗಳು ಬಿದ್ದಿದ್ದನ್ನು ಗಮನಿಸಿದ್ದಾರೆ. ಕೂಡಲೇ ಹೋಟೆಲ್​ ಕಲ್ಲಂಗುಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮಹಿಳೆಗೆ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ನಂತರ ಪೊಲೀಸರು ಅದು ಹೇಗೋ ಟ್ಯಾಕ್ಸಿ ಚಾಲಕನ ಮೊಬೈಲ್​ ನಂಬರ್ ಪಡೆದು ಆತನೊಂದಿಗೆ ಮಾತಾಡಿ, ಬಳಿಕ ಸುಚನಾ ಜತೆಗೂ ಮಾತಾಡಿದ್ದಾರೆ. ಈ ವೇಳೆ ನಿಮ್ಮ ಮಗ ಎಲ್ಲಿದೆ ಅಂತಾ ಪೊಲೀಸರು ಕೇಳಿದ್ದಾರೆ. ಆಗ ಸುಚನಾ ತನ್ನ ಸ್ನೇಹಿತನ ಮನೆಯಲ್ಲಿ ಬಿಟ್ಟು ಬಂದಿದ್ದಾಗಿ ಹೇಳಿದ್ದಾರೆ.

ಸುಚನಾ ನೀಡಿದ ವಿಳಾಸ ಪರಿಶೀಲನೆ ನಡೆಸಿದಾಗ ವಿಳಾಸ ತಪ್ಪಾಗಿದೆ. ಮಹಿಳೆ ನೀಡಿದ ವಿಳಾಸ ತಪ್ಪಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸರು ಮತ್ತೆ ಟ್ಯಾಕ್ಸಿ ಚಾಲಕನ ಜೊತೆಗೆ ಮಾತಾಡಿದ್ದಾರೆ. ಮಹಿಳೆಗೆ ಗೊತ್ತಾಗದಂತೆ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಆಗ ಟ್ಯಾಕ್ಸಿ ಚಾಲಕ ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಬಳಿಕ ಗೋವಾ ಪೊಲೀಸರು ಐಮಂಗಲ ಪೊಲೀಸರನ್ನು ಸಂಪರ್ಕಿಸಿ “ನಾವು ಚಿತ್ರದುರ್ಗ ಎಸ್​ಪಿ ಅವರ ಜೊತೆಗೆ ನಾನು ಮಾತಾಡಿದ್ದೇವೆ, ಕಾರು ತಪಾಸಣೆ ಮಾಡಿ” ಎಂದು ಹೇಳಿದ್ದಾರೆ. ಈ ವೇಳೆ ಬ್ಯಾಗ್​ನಲ್ಲಿ ಮಗುವಿನ‌ ಶವ ಸಿಕ್ಕಿದೆ. ಕೂಡಲೇ ಐಮಂಗಲ ಪೊಲೀಸರು ಸುಚನಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಗ್​​ನಲ್ಲಿ ಶವ ಇದೆ ಎಂಬುವ ಮಾಹಿತಿ ತಿಳಿಯುತ್ತಿದ್ದಂತೆ ಅತ್ತ ಹೊಟೆಲ್ ಮ್ಯಾನೇಜರ್ ಕಡೆಯಿಂದ ಕಲ್ಲಂಗುಡ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ನಾರ್ಥ್ ಗೋವಾ ಎಸ್‌ಪಿ ನಿಧೀನ್ ವಾಲ್ಸಾನ್ ಮಾತನಾಡಿ, ಎಸ್​ಐ ಪರೇಶ್ ನೇತೃತ್ವದ ತಂಡ ಕೂಡಲೇ ಐಮಂಗಲಕ್ಕೆ ತೆರಳಿ ಮಹಿಳೆಯನ್ನು ವಶಕ್ಕೆ ಪಡೆದಿದೆ. ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದೇವೆ‌. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕೊಲೆ ಯಾವಾಗ ಮತ್ತು ಹೇಗೆ ಆಗಿದೆ ಅನ್ನೋ ಮಾಹಿತಿ ಗೊತ್ತಾಗಲಿದೆ. ಸದ್ಯ ಮಗುವಿನ ಮೃತದೇಹವನ್ನು ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಸುಚನಾಳ ಪತಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಗೋವಾ ಪೊಲೀಸರು ಸುಚನಾಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮಗುವಿನ ಮೃತದೇಹವನ್ನು ಕುಟುಂಬಸ್ಥರಿಗೆ ವರ್ಗಾಯಿಸಲಾಗುತ್ತದೆ,

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಜರ್ಮನಿಯ ಐಎಫ್ ಡಬ್ಲ್ಯೂ ಸಂಸ್ಥೆಯ ನಿರ್ದೇಶಕರಾಗಿ ಪ್ರೊ.ಅಂಜನಾದೇವಿ ಆಯ್ಕೆ

Next Post

“ಮಿಸ್ಟರ್ ಮದಿಮಯೆ” ಜ.12ರಂದು ಕರಾವಳಿಯಾದ್ಯಂತ ತೆರೆಗೆ

Related Posts

ಆರ್​​ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಪ್ರಕರಣ: ಆರ್​​ಸಿಬಿ, ಡಿಎನ್​​ಎಯ ಬಂಧಿತ ನಾಲ್ವರಿಗೆ ಜೂ.19ರವರೆಗೆ ನ್ಯಾಯಾಂಗ ಬಂಧನ
ರಾಜ್ಯ

ಆರ್​​ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಪ್ರಕರಣ: ಆರ್​​ಸಿಬಿ, ಡಿಎನ್​​ಎಯ ಬಂಧಿತ ನಾಲ್ವರಿಗೆ ಜೂ.19ರವರೆಗೆ ನ್ಯಾಯಾಂಗ ಬಂಧನ

June 6, 2025
29
ಕರಾವಳಿ ಕೋಮುಗಲಭೆ ವಿರುದ್ಧ ಮುಲಾಜಿಲ್ಲದೇ ಕ್ರಮ : ಗೃಹ ಸಚಿವ ಪರಮೇಶ್ವರ್​
ರಾಜ್ಯ

ಕರಾವಳಿ ಕೋಮುಗಲಭೆ ವಿರುದ್ಧ ಮುಲಾಜಿಲ್ಲದೇ ಕ್ರಮ : ಗೃಹ ಸಚಿವ ಪರಮೇಶ್ವರ್​

May 29, 2025
40
Next Post
“ಮಿಸ್ಟರ್ ಮದಿಮಯೆ” ಜ.12ರಂದು ಕರಾವಳಿಯಾದ್ಯಂತ ತೆರೆಗೆ

"ಮಿಸ್ಟರ್ ಮದಿಮಯೆ" ಜ.12ರಂದು ಕರಾವಳಿಯಾದ್ಯಂತ ತೆರೆಗೆ

Discussion about this post

Recent News

ಮಂಗಳೂರು ಶೀಘ್ರದಲ್ಲೇ ಫುಟ್ಬಾಲ್‌ ಆಟಗಾರರಿಗೆ ಸಿಗಲಿದೆ ಸುಸಜ್ಜಿತ ಟರ್ಫ್‌ ಕ್ರೀಡಾಂಗಣ

ಮಂಗಳೂರು ಶೀಘ್ರದಲ್ಲೇ ಫುಟ್ಬಾಲ್‌ ಆಟಗಾರರಿಗೆ ಸಿಗಲಿದೆ ಸುಸಜ್ಜಿತ ಟರ್ಫ್‌ ಕ್ರೀಡಾಂಗಣ

July 7, 2025
35
ಮಂಗಳೂರು: ವಿದೇಶದಲ್ಲಿ ಉದ್ಯೋಗದ ವೀಸಾ ಆಮಿಷವೊಡ್ಡಿ 289 ಜನರಿಗೆ 4.50 ಕೋಟಿ ರೂ.ವಂಚನೆ; ಮುಂಬಯಿ ಮೂಲದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ವಿದೇಶದಲ್ಲಿ ಉದ್ಯೋಗದ ವೀಸಾ ಆಮಿಷವೊಡ್ಡಿ 289 ಜನರಿಗೆ 4.50 ಕೋಟಿ ರೂ.ವಂಚನೆ; ಮುಂಬಯಿ ಮೂಲದ ಇಬ್ಬರು ಆರೋಪಿಗಳ ಬಂಧನ

July 6, 2025
34
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ಶೀಘ್ರದಲ್ಲೇ ಫುಟ್ಬಾಲ್‌ ಆಟಗಾರರಿಗೆ ಸಿಗಲಿದೆ ಸುಸಜ್ಜಿತ ಟರ್ಫ್‌ ಕ್ರೀಡಾಂಗಣ

ಮಂಗಳೂರು ಶೀಘ್ರದಲ್ಲೇ ಫುಟ್ಬಾಲ್‌ ಆಟಗಾರರಿಗೆ ಸಿಗಲಿದೆ ಸುಸಜ್ಜಿತ ಟರ್ಫ್‌ ಕ್ರೀಡಾಂಗಣ

July 7, 2025
ಮಂಗಳೂರು: ವಿದೇಶದಲ್ಲಿ ಉದ್ಯೋಗದ ವೀಸಾ ಆಮಿಷವೊಡ್ಡಿ 289 ಜನರಿಗೆ 4.50 ಕೋಟಿ ರೂ.ವಂಚನೆ; ಮುಂಬಯಿ ಮೂಲದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ವಿದೇಶದಲ್ಲಿ ಉದ್ಯೋಗದ ವೀಸಾ ಆಮಿಷವೊಡ್ಡಿ 289 ಜನರಿಗೆ 4.50 ಕೋಟಿ ರೂ.ವಂಚನೆ; ಮುಂಬಯಿ ಮೂಲದ ಇಬ್ಬರು ಆರೋಪಿಗಳ ಬಂಧನ

July 6, 2025
ಎನ್‌ಸಿ‌ ಕ್ಲಾಸಿಕ್’ ಜಾವೆಲಿನ್ ಸ್ಪರ್ಧೆಯಲ್ಲಿ ‘ನೀರಜ್ ಚೋಪ್ರಾ ಚಾಂಪಿಯನ್

ಎನ್‌ಸಿ‌ ಕ್ಲಾಸಿಕ್’ ಜಾವೆಲಿನ್ ಸ್ಪರ್ಧೆಯಲ್ಲಿ ‘ನೀರಜ್ ಚೋಪ್ರಾ ಚಾಂಪಿಯನ್

July 6, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d