• About us
  • Contact us
  • Disclaimer
Thursday, July 9, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕಿಯ ಶವ ಹೂತು ಹಾಕಿದ ನಾಲ್ವರು ಅರೆಸ್ಟ್​

Coastal Times by Coastal Times
July 9, 2026
in ಕ್ರೈಮ್ ನ್ಯೂಸ್
ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕಿಯ ಶವ ಹೂತು ಹಾಕಿದ ನಾಲ್ವರು ಅರೆಸ್ಟ್​
3
VIEWS
WhatsappTelegramShare on FacebookShare on Twitter

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡಿದ್ದ 16 ವರ್ಷದ ಬಾಲಕಿಯ ಶವವನ್ನು ಹೂತು ಹಾಕಿದ್ದ ಪ್ರಕರಣದಲ್ಲಿ ಶಿಕಾರಿಪುರ ಟೌನ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ, ಪಿಜಿ ನಡೆಸುತ್ತಿದ್ದ ಸೌಭಾಗ್ಯ, ಆಕೆಯ ಪತಿ ಗಂಗಾನಾಯ್ಕ್ , ರಂಜಿತಾ ಹಾಗೂ ಆಕೆಯ ಸ್ನೇಹಿತ ಪಿರ್ಯಾನಾಯ್ಕ್ ಎಂಬವರನ್ನು ಬಂಧಿಸಿದ್ದಾರೆ.

ಘಟನೆ : ಜುಲೈ 3 ರಂದು ಶಿಕಾರಿಪುರ ತಾಲೂಕು ತರಲಘಟ್ಟದ ನಿವಾಸಿ ಪರಮೇಶ್ ಎಂಬಾತ ತನ್ನ ಮಗಳು ಸಂಗೀತಾ 2025ರ ಜೂನ್ 18 ರಿಂದ ಕಾಣೆಯಾಗಿದ್ದಾಳೆ ಎಂದು ಶಿಕಾರಿಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಿಕಾರಿಪುರದಲ್ಲಿ ಸೌಭಾಗ್ಯ ಪಿಜಿ ಮತ್ತು ಅದೇ ಕಟ್ಟಡದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಸಂಗೀತಾ ಅದೇ ಪಿಜಿಯಲ್ಲಿದ್ದು, ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ‌ ಮಾಡಿಕೊಂಡಿದ್ದಳು. ಈ ಪಿಜಿಗೆ ಸಂಗೀತಾಳನ್ನು ರಂಜಿತಾ ಎಂಬ ಮಹಿಳೆ ಕರೆತಂದು ಸೇರಿಸಿದ್ದಳು.

ಮೃತ ಸಂಗೀತಾ, ರಂಜಿತಾ ಹಾಗೂ ಸೌಭಾಗ್ಯರ ನಡುವೆ ಚಾಡಿ ಹೇಳಿದ್ದಳು. ಇದರಿಂದ ಇಬ್ಬರ ನಡುವೆ ಜಗಳ ಆಗಿತ್ತು. ನಂತರ ಸೌಭಾಗ್ಯ, ಗಂಗಾ ನಾಯ್ಕ್, ರಂಜಿತಾ ಹಾಗೂ ಪಿರ್ಯಾನಾಯ್ಕ್ ಅವರು ಸಂಗೀತಾರನ್ನು ಕರೆದು ಹೀಗೆ ಮಾಡಬಾರದು ಎಂದು ಬೈಯ್ದಿದ್ದರು. ಇದರಿಂದ ಬೇಸರಗೊಂಡ ಸಂಗೀತಾ ತಾನು ಇದ್ದ ಪಿಜಿಯ ರೂಂನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಷಯ ತಿಳಿದ ನಾಲ್ವರು ಭಯಗೊಂಡು ಆಕೆಯ ಶವವನ್ನು ಸೂಟ್​ಕೇಸ್​​ನಲ್ಲಿ ತೆಗೆದುಕೊಂಡು ಶಿರಸಿಯ ಸಿದ್ದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ಹೂತು ಹಾಕಿದ್ದರು.

ಈ ವಿಷಯವನ್ನು ಈ ನಾಲ್ವರು ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಆದರೆ, ಇತ್ತಿಚೇಗೆ ರಂಜಿತಾ ಹಾಗೂ ಪಿರ್ಯಾನಾಯ್ಕ್​ ನಡುವೆ‌ ಜಗಳ ನಡೆದಿತ್ತು. ಇದರಿಂದ ರಂಜಿತಾ ಪಿರ್ಯನಾಯ್ಕ್​ನ ಮೇಲೆ‌ ಕೋಪಗೊಂಡು ಸಂಗೀತಾ ತಂದೆ ಪರಮೇಶ್ವರ ಬಳಿ ನಡೆದಿದ್ದ ವಿಷಯ ಹೇಳಿದ್ದಳು. ಇದರಿಂದ ಪರಮೇಶ್ವರ ನಾಯ್ಕ್ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಎಸ್​​ಪಿ ನಿಖಿಲ್ ಬಿ ಮಾತನಾಡಿ, ಶಿಕಾರಿಪುರ ನಗರ ಪೊಲೀಸ್ ಠಾಣೆಯಲ್ಲಿ 2026ರ ಜುಲೈ 3 ರಂದು ಸಂಗೀತಾ ಎಂಬ 16 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ ಎಂದು ಬಾಲಕಿಯ ತಂದೆ ದೂರು ನೀಡಿದ್ದರು. ಈಕೆ 2025ರ ಜೂನ್ 18 ರಿಂದ ಕಾಣೆಯಾಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾಲಕಿ 2025ರ ಜೂನ್ 18 ರಂದು ತಾನು ಇದ್ದ ಪಿಜಿಯಲ್ಲೇ ನೇಣಿಗೆ ಶರಣಾಗಿದ್ದಳು ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿದೆ. ಆದರೆ, ಈ ವಿಚಾರವನ್ನು ಯಾರಿಗೂ ತಿಳಿಸದೇ ಪಿಜಿ ಮಾಲಕಿ ಸೌಭಾಗ್ಯ ಆಕೆಯ ಪತಿ ಗಂಗಾನಾಯ್ಕ್, ರಂಜಿತಾ ಹಾಗೂ ಪಿರ್ಯಾನಾಯ್ಕ್ ಸೇರಿ ಬಾಲಕಿ ಶವವನ್ನು ಸೂಟ್​​ಕೇಸ್​​ನಲ್ಲಿ ತೆಗೆದುಕೊಂಡು ಹೋಗಿ ಸಿದ್ದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಾವಿನ ಗುಂಡಿಯಲ್ಲಿ ಹೂತು ಹಾಕಿದ್ದರು ಎಂದು ತಿಳಿಸಿದರು.

ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಅವರೇ ಮಾತನಾಡಿಕೊಂಡು ಒಂದು ವರ್ಷದ ತನಕ ಯಾರೂ ಬಾಯಿ ಬಿಟ್ಟಿರಲಿಲ್ಲ.‌ ತನಿಖೆ ಮುಂದುವರೆಸಿದಾಗ ಆಕೆ ಫೋನ್​​ನಲ್ಲಿ ಕಳೆದ 1 ವರ್ಷದಿಂದ ಮಾತನಾಡಿರುವುದಿಲ್ಲ. ಕೊನೆಯದಾಗಿ ರಂಜಿತಾ ಜೊತೆ ಮಾತನಾಡಿರುವುದು ಕಂಡುಬಂದಿದೆ. ನಂತರ ತನಿಖೆ ಮುಂದುವರೆದಂತೆ, ರಂಜಿತಾ, ಸೌಭಾಗ್ಯ, ಗಂಗನಾಯ್ಕ್ ಹಾಗೂ ಪಿರ್ಯನಾಯ್ಕ್ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಸಾವನ್ನಪ್ಪಿರುವ ಬಾಲಕಿಯು ಸೌಭಾಗ್ಯ ಹಾಗೂ ರಂಜಿತಾ ನಡುವೆ ಚಾಡಿ ಹೇಳಿದ್ದಳು. ಇದರಿಂದ ಬಾಲಕಿಯನ್ನು ಪಿಜಿ ಕೆಳಗೆ ಬ್ಯೂಟಿ ಪಾರ್ಲರ್​ಗೆ ಕರೆದು ಸೌಭಾಗ್ಯ, ರಂಜಿತಾ ಹಾಗೂ ಪಿರ್ಯಾನಾಯ್ಕ್​ ಮಾತನಾಡಿದಾಗ ಮಾತಿನ ಚಕಮಕಿ ನಡೆದಿದೆ. ಇದರಿಂದ ಆಕೆ ಬೇಸರಗೊಂಡು ನೇಣಿಗೆ ಶರಣಾಗಿದ್ದಾಳೆ. ಆಕೆ ಸಾವನ್ನಪ್ಪಿದ್ದರಿಂದ‌ ಆಕೆಯ ಶವವನ್ನು ನಾಲ್ವರು ಸೇರಿ ಸೂಟ್​ಕೇಸ್​​ನಲ್ಲಿ ಹಾಕಿ ಕಾರಿನಲ್ಲಿ ತೆಗೆದುಕೊಂಡು ಹೋಗಿ ಮಾವಿನ ಗುಂಡಿಯ ಅರಣ್ಯದಲ್ಲಿ ಹೂತು ಹಾಕಿದ್ದಾರೆ. ವಿಚಾರಣೆ ವೇಳೆ ಎಲ್ಲರೂ ಸತ್ಯ ಬಾಯ್ಬಿಟ್ಟಿದ್ದಾರೆ. ಶವ ಹೂತ ಜಾಗವನ್ನು ತೋರಿಸಿದ್ದು, ಶವವನ್ನು ಹೊರ ತೆಗೆದಾಗ ಆಕೆಯ ತಲೆ ಬುರುಡೆ ಹಾಗೂ ಮೂಳೆಗಳು ಸೂಟ್​​ಕೇಸ್​​ನಲ್ಲಿ ಪತ್ತೆಯಾಗಿದೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿ ಇರುವುದರಿಂದ ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲಾಗಲ್ಲ ಎಂದರು.

ಮೃತ ಬಾಲಕಿಯ ತಂದೆ ಪರಮೇಶ್ ಮಾತನಾಡಿ, ನಮ್ಮ‌ ಮನೆ ಬಿದ್ದಿದ್ದ ಕಾರಣಕ್ಕೆ ನಾನು ಹಾಗೂ ಮಗಳು ನಮ್ಮ ತಂಗಿ ಮನೆಯಲ್ಲಿದ್ದೆವು. ಆಗ ನಾಗರಾಜ್, ಉಮ್ಮಕ್ಕ, ಪರಮೇಶ್ ರವರು ನನ್ನ ಬಳಿ ಬಂದು ನಮ್ಮ ಅಕ್ಕನ ಪಿಜಿ ಶಿಕಾರಿಪುರದಲ್ಲಿದೆ‌. ಅಲ್ಲಿ ಇರ್ತಾಳೆ ಎಂದು ಕರೆದುಕೊಂಡು ಹೋದರು. ಅವರು ನನ್ನ ಆರೋಗ್ಯ, ಮನೆ ಖರ್ಚು ಎಲ್ಲವನ್ನು ನೋಡಿಕೊಳ್ಳುತ್ತೇವೆ ಎಂದು ಕರೆದುಕೊಂಡು ಹೋದರು. ನಂತರ ನನ್ನ ಮಗಳು ಎಲ್ಲಿ ಎಂದು ಪಿಜಿ ಬಳಿ ಹೋಗಿ ಕೇಳಿದಾಗ ಅವರು ನಿನ್ನ ಮಗಳು ಓಡಿ ಹೋಗಿದ್ದಾಳೆ ಎಂದರು. ಆಗ ನಾನು ಇದನ್ನು ನನಗೆ ಹೇಳಬಹುದಾಗಿತ್ತು. ನನಗೆ ಯಾಕೆ ತಿಳಿಸಲಿಲ್ಲ ಎಂದು ಕೇಳಿದೆ. ನಾನು ಅವರಿಗೆ ಪೋನ್ ಮಾಡಿದಾಗಲೆಲ್ಲಾ ಬೆಂಗಳೂರಿನಲ್ಲಿರುವುದಾಗಿ ಎಂದು ಹೇಳುತ್ತಿದ್ದರು. ನನ್ನ ಮಗಳ ಸಾವಿಗೆ ನ್ಯಾಯಬೇಕು ಎಂದು ಮನವಿ ಮಾಡಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related


Discover more from Coastal Times Kannada

Subscribe to get the latest posts sent to your email.

Previous Post

FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಗೆ ಸೋಲುಣಿಸಿ ಕ್ವಾರ್ಟರ್ ಫೈನಲ್‌ ಗೆ ಅರ್ಜೆಂಟೀನಾ ಲಗ್ಗೆ

Next Post

ಮಂಗಳೂರು: ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈಕ್ ಪಲ್ಟಿ ಸವಾರ ಯೋಧ ಮೃತ್ಯು

Related Posts

ಮಂಗಳೂರು: ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ ; 14 ಆರೋಪಿಗಳ ಫೋಟೊ ಬಿಡುಗಡೆ, ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ ಪೊಲೀಸರು
ಕ್ರೈಮ್ ನ್ಯೂಸ್

ಮಂಗಳೂರು: ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ ; 14 ಆರೋಪಿಗಳ ಫೋಟೊ ಬಿಡುಗಡೆ, ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ ಪೊಲೀಸರು

July 7, 2026
110
ಕಡಬ: ತೂಕ ಹೆಚ್ಚಿಸಿದ ನಕಲಿ ಚಿನ್ನದ ಆಭರಣಗಳನ್ನು  ಬ್ಯಾಂಕ್​ನಲ್ಲಿ ಅಡವಿಟ್ಟು ವಂಚಿಸಲು ಯತ್ನ: ಇಬ್ಬರ ಬಂಧನ
ಕ್ರೈಮ್ ನ್ಯೂಸ್

ಕಡಬ: ತೂಕ ಹೆಚ್ಚಿಸಿದ ನಕಲಿ ಚಿನ್ನದ ಆಭರಣಗಳನ್ನು ಬ್ಯಾಂಕ್​ನಲ್ಲಿ ಅಡವಿಟ್ಟು ವಂಚಿಸಲು ಯತ್ನ: ಇಬ್ಬರ ಬಂಧನ

July 6, 2026
42
Next Post
ಮಂಗಳೂರು: ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈಕ್ ಪಲ್ಟಿ ಸವಾರ ಯೋಧ ಮೃತ್ಯು

ಮಂಗಳೂರು: ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈಕ್ ಪಲ್ಟಿ ಸವಾರ ಯೋಧ ಮೃತ್ಯು

Discussion about this post

Recent News

ಮಂಗಳೂರು: ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈಕ್ ಪಲ್ಟಿ ಸವಾರ ಯೋಧ ಮೃತ್ಯು

ಮಂಗಳೂರು: ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈಕ್ ಪಲ್ಟಿ ಸವಾರ ಯೋಧ ಮೃತ್ಯು

July 9, 2026
35
ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕಿಯ ಶವ ಹೂತು ಹಾಕಿದ ನಾಲ್ವರು ಅರೆಸ್ಟ್​

ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕಿಯ ಶವ ಹೂತು ಹಾಕಿದ ನಾಲ್ವರು ಅರೆಸ್ಟ್​

July 9, 2026
3
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈಕ್ ಪಲ್ಟಿ ಸವಾರ ಯೋಧ ಮೃತ್ಯು

ಮಂಗಳೂರು: ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈಕ್ ಪಲ್ಟಿ ಸವಾರ ಯೋಧ ಮೃತ್ಯು

July 9, 2026
ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕಿಯ ಶವ ಹೂತು ಹಾಕಿದ ನಾಲ್ವರು ಅರೆಸ್ಟ್​

ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕಿಯ ಶವ ಹೂತು ಹಾಕಿದ ನಾಲ್ವರು ಅರೆಸ್ಟ್​

July 9, 2026
FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಗೆ ಸೋಲುಣಿಸಿ ಕ್ವಾರ್ಟರ್ ಫೈನಲ್‌ ಗೆ ಅರ್ಜೆಂಟೀನಾ ಲಗ್ಗೆ

FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಗೆ ಸೋಲುಣಿಸಿ ಕ್ವಾರ್ಟರ್ ಫೈನಲ್‌ ಗೆ ಅರ್ಜೆಂಟೀನಾ ಲಗ್ಗೆ

July 8, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d