ಮಡಿಕೇರಿ: ಟಿಪ್ಪು ಜಯಂತಿಯ ಕರಾಳ ನೆನಪು ಹಿನ್ನೆಲೆ ಕೊಡಗು ಜಿಲ್ಲೆಯಾದ್ಯಂತ ಇಂದು ನಿಷೇಧಾಜ್ಞೆ ಜಾರಿಯಲ್ಲಿದೆ. ನವೆಂಬರ್ 10ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ವರೆಗೂ 144 ಸೆಕ್ಷನ್ ಜಿಲ್ಲಾಧಿಕಾರಿ ಜಾರಿ ಮಾಡಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ನಡೆಸಲು ಮುಂದಾದ ಹಿಂದುತ್ವ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ ಟಿಪ್ಪು ಜಯಂತಿಯಂದು ಮೃತಪಟ್ಟ ಕುಟ್ಟಪ್ಪ ಸ್ಮರಣಾರ್ಥ ಹಿಂದೂ ಪರ ಸಂಘಟನೆಗಳಿಂದ ಚೌಡೇಶ್ವರಿ ದೇವಸ್ಥಾನದಲ್ಲಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಆದೇಶ ಉಲಂಘಿಸಿ ನಡೆಯುತ್ತಿರುವ ಸಭೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಭೆಯಲ್ಲಿ ಭಾಗಿಯಾಗಿದ್ದರು. ದೇವಸ್ಥಾನ ನ ಹೊರಗಡೆ ಪೋಲೀಸ್ ಬಂದೋಬಸ್ತ್ ಇದ್ದರೆ ಒಳಗಡೆ ಸಭೆ ನಡೆಯುತ್ತಿತ್ತು.
ಓಂಕಾರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಹಲವಾರು ಹಿಂದೂ ಪರ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದರು. ನಂತರ ಚೌಡೇಶ್ವರಿ ದೇವಾಲಯಲ್ಲಿ ಸಭೆ ಸೇರಿ ಹೊರ ಬರುವಾಗ ಇಲ್ಲಿನ ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಿದರು.
Discussion about this post