• About us
  • Contact us
  • Disclaimer
Tuesday, July 8, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕ್ರೆಡಿಟ್ ಕಾರ್ಡ್ ಸರೆಂಡರ್ ಮಾಡಿದ್ರೂ ಹಣ ಎಗರಿಸಿದ ಖದೀಮರು : ಟಿಬೆಟಿಯನ್ ಪ್ರಜೆಗಳಿಬ್ಬರ ಬಂಧನ

Coastal Times by Coastal Times
November 11, 2021
in ಕ್ರೈಮ್ ನ್ಯೂಸ್
ಕ್ರೆಡಿಟ್ ಕಾರ್ಡ್ ಸರೆಂಡರ್ ಮಾಡಿದ್ರೂ ಹಣ ಎಗರಿಸಿದ ಖದೀಮರು : ಟಿಬೆಟಿಯನ್ ಪ್ರಜೆಗಳಿಬ್ಬರ ಬಂಧನ
29
VIEWS
WhatsappTelegramShare on FacebookShare on Twitter

ಮಂಗಳೂರು, ನ.11: ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ವಂಚನೆ ಎಸೆಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಇಬ್ಬರು ಟಿಬೆಟಿಯನ್ ಪ್ರಜೆಗಳನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಮತ್ತೆ ಮೂರು ಮಂದಿ ನೇರವಾಗಿ ಭಾಗಿಯಾಗಿರುವವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಅತ್ತಾವರ ನಿವಾಸಿ ಸಿ.ಡಿ. ಅಲೆಗ್ಸಾಂಡರ್ ಎಂಬವರು ಕಳೆದ ಸೆ.9 ರಂದು ತನ್ನ ಎಸ್ ಬಿಐ ಕ್ರೆಡಿಟ್ ಕಾರ್ಡನ್ನು ಬ್ಯಾಂಕಿಗೆ ಸರೆಂಡರ್‌ ಮಾಡಿದ್ದರೂ ಅದರಿಂದ 1.12 ಲಕ್ಷ ರೂ. ಡ್ರಾ ಆಗಿದ್ದ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದರು. 2021ರ ಮಾರ್ಚ್‌ 23 ರಂದು ಎಸ್ ಬಿಐ ಬ್ಯಾಂಕ್ ಶಾಖೆಗೆ ತೆರಳಿ ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಹೆಚ್ಚಾಗಿದ್ದರಿಂದ ಅದನ್ನು ಮರಳಿ ಬ್ಯಾಂಕಿಗೆ ಕೊಟ್ಟಿದ್ದರು. ಆದರೆ ಮಾರ್ಚ್ 27 ರಂದು ಕ್ರೆಡಿಟ್ ಕಾರ್ಡ್ ಮೂಲಕ 1.12 ಲಕ್ಷ ರೂ. ಡ್ರಾ ಆಗಿತ್ತು. ಬ್ಯಾಂಕ್ ಸಿಬಂದಿ ಬಳಿ ಕೇಳಿದಾಗ, ಕ್ರೆಡಿಟ್ ಕಾರ್ಡ್ ಮೂಲಕ ಡ್ರಾ ಆಗಿದ್ದ ಬಗ್ಗೆ ಮಾಹಿತಿ ನೀಡಿದ್ದರು.

ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ, ಮೊಬಿವಿಕ್ ವ್ಯಾಲೆಟ್ ಏಪ್ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿತ್ತು.‌ ಅಲ್ಲದೆ, ಈ ಹಣವು ಉತ್ತರ ಕನ್ನಡ ಜಿಲ್ಲೆಯ ತಟ್ಟಿಹಳ್ಳಿಯ ಕೆನರಾ ಡಿಸಿಸಿ ಬ್ಯಾಂಕ್ ಶಾಖೆಯ ಮುಂಡಗೋಡ ನಿವಾಸಿ ಲೋಬ್ ಸ್ಯಾಂಗ್ ಸ್ಯಾಂಗಿಸ್ ಖಾತೆಗೆ ವರ್ಗಾವಣೆ ಆಗಿರುವುದು ತಿಳಿದುಬಂದಿತ್ತು.

ಬಂಧಿತರನ್ನು ಉತ್ತರ ಕನ್ನಡದ ಮುಂಡುಗೋಡು ಟಿಬೆಟಿಯನ್ ಕಾಲನಿಯ ಶರಗಡನ್ ಮೊನಸ್ಟ್ರಿಯ ಲೋಬಸಂಗ್ ಸಂಗೈ (24) ಹಾಗೂ ದಕಪ ಪುಂದೇ (40) ಎಂದು ಗುರುತಿಸಲಾಗಿದೆ.

ಹಣ ವಂಚನೆಗೆ ನಿಷೇಧಿತ ಚೀನಾ ಆ್ಯಪ್ ಬಳಕೆ:

ಈ ಬಗ್ಗೆ ತನಿಖೆ ನಡೆಸಿದ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಚೀನಾದ ಆ್ಯಪ್‌ಗಳಾದ ವಿಚಾಟ್ ಹಾಗೂ ರೆಡ್‌ಪ್ಯಾಕ್‌ನ ಮೂಲಕ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ. ಮೊಬಿಕ್ವಿಕ್ ವಾಲೆಟ್ ಆ್ಯಪ್ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿದ್ದ ಎರಡು ಖಾತೆಗಳಿಗೆ ಈ ಕ್ರೆಡಿಟ್ ಕಾರ್ಡ್ ಹಣ ವರ್ಗಾಯಿಸಲಾಗಿತ್ತು. ಮಾತ್ರವಲ್ಲದೆ ಉತ್ತರ ಕನ್ನಡ ತಟ್ಟಿ ಹಳ್ಳಿಯಲ್ಲಿರುವ ಕೆನರಾ ಡಿಸಿಸಿ ಬ್ಯಾಂಕ್‌ನ ಖಾತೆದಾರನಾದ ಲೋಬ್ ಸ್ಯಾಂಗ್ ಸ್ಯಾಂಗಿಸ್ ಎಂಬಾತನ ಖಾತೆಗೆ ವರ್ಗಾವಣೆಯಾಗಿರುವುದು ತನಿಖೆಯ ವೇಳೆ ಕಂಡು ಬಂದಿದೆ.

”ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇಂತಹ ವಂಚನೆ ಪ್ರಕರಣಗಳು ಇನ್ನಷ್ಟು ನಡೆದಿರುವ ಸಾಧ್ಯತೆಯ ಕುರಿತಂತೆಯೂ ತನಿಖೆ ನಡೆಯುತ್ತಿದೆ. ದೂರುದಾರರು ತಮ್ಮ ಕ್ರೆಡಿಟ್ ಕಾರ್ಡ್ ಬ್ಯಾಂಕ್‌ಗೆ ಸರೆಂಡರ್ ಮಾಡಿದ್ದ ವೇಳೆ ಈ ಪ್ರಕರಣ ನಡೆದಿರುವುದರಿಂದ ಬ್ಯಾಂಕ್‌ನ ಪಾಲುದಾರಿಕೆಯ ಕುರಿತಂತೆಯೂ ತನಿಖೆ ನಡೆಸಲಾಗುತ್ತಿದೆ”.

– ಎನ್. ಶಶಿಕುಮಾರ್, ಪೊಲೀಸ್ ಕಮಿನರ್, ಮಂಗಳೂರು

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಮಡಿಕೇರಿ: ಟಿಪ್ಪು ಜಯಂತಿ, ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ನಡೆಸಲು ಮುಂದಾದ ಸಂಘಪರಿವಾರದ ಮುಖಂಡರ ಬಂಧನ

Next Post

ಜನಧನ್ ಖಾತೆಗಳಿಂದ ತಲಾ 2 ರೂ.ನಂತೆ 6,000 ಕೋಟಿ ರೂ ಕದ್ದವನಿಗೆ, ಜಾಮೀನು ಖಾತರಿ ಕೊಟ್ಟವರು ಯಾರು?

Related Posts

ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು
ಕ್ರೈಮ್ ನ್ಯೂಸ್

ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

July 8, 2025
22
ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ
ಕ್ರೈಮ್ ನ್ಯೂಸ್

ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

July 8, 2025
1
Next Post
ಜನಧನ್ ಖಾತೆಗಳಿಂದ ತಲಾ 2 ರೂ.ನಂತೆ 6,000 ಕೋಟಿ ರೂ ಕದ್ದವನಿಗೆ, ಜಾಮೀನು ಖಾತರಿ ಕೊಟ್ಟವರು ಯಾರು?

ಜನಧನ್ ಖಾತೆಗಳಿಂದ ತಲಾ 2 ರೂ.ನಂತೆ 6,000 ಕೋಟಿ ರೂ ಕದ್ದವನಿಗೆ, ಜಾಮೀನು ಖಾತರಿ ಕೊಟ್ಟವರು ಯಾರು?

Discussion about this post

Recent News

ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

July 8, 2025
22
ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

July 8, 2025
1
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

July 8, 2025
ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

July 8, 2025
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಟಾಸ್ಕ್ 4.59 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಟಾಸ್ಕ್ 4.59 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

July 8, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d