• About us
  • Contact us
  • Disclaimer
Saturday, July 12, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ವೃಕ್ಷ ಬಿಸಿನೆಸ್ ಸೊಲ್ಯೂಷನ್ ಮತ್ತು ಕೆನರಾ ಫಿಶ್ ಫಾರ್ಮರ್ಸ್ ಕಂಪೆನಿ ವಂಚನೆ ಪ್ರಕರಣ ಸಿಬಿಐಗೆ ಒಪ್ಪಿಸಲು ತುಳುನಾಡ ರಕ್ಷಣಾ ವೇದಿಕೆ ಒತ್ತಾಯ

Coastal Times by Coastal Times
June 11, 2024
in ಕರಾವಳಿ
ವೃಕ್ಷ ಬಿಸಿನೆಸ್ ಸೊಲ್ಯೂಷನ್ ಮತ್ತು ಕೆನರಾ ಫಿಶ್ ಫಾರ್ಮರ್ಸ್ ಕಂಪೆನಿ ವಂಚನೆ ಪ್ರಕರಣ ಸಿಬಿಐಗೆ ಒಪ್ಪಿಸಲು ತುಳುನಾಡ ರಕ್ಷಣಾ ವೇದಿಕೆ ಒತ್ತಾಯ
148
VIEWS
WhatsappTelegramShare on FacebookShare on Twitter

ಮಂಗಳೂರು: ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ವೃಕ್ಷ ಬಿಸಿನೆಸ್ ಸೊಲ್ಯೂಷನ್ ಮತ್ತು ಕೆನರಾ ಫಿಶ್ ಫಾರ್ಮರ್ಸ್ ಕಂಪೆನಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ವಂಚನೆ ಎಸಗಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

“ವೃಕ್ಷ ಬಿಸಿನೆಸ್ ಸೊಲ್ಯೂಶನ್ ಎಂಬ ಸಂಸ್ಥೆಯು ಮಂಗಳೂರಿನಲ್ಲಿ ಸ್ಥಾಪನೆಯಾಗಿ ಗ್ರಾಹಕರ ಹಣಕ್ಕೆ ಹೆಚ್ಚಿನ ಬಡ್ಡಿ ದರ ನೀಡುವುದಾಗಿ ನಂಬಿಸಿ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ದೇಶದಾದ್ಯಂತ ಹಣ ಸ್ವೀಕೃತಿ ಕೇಂದ್ರಗಳನ್ನು ಪ್ರಾರಂಭಿಸಿ ಕರ್ನಾಟಕ ಮತ್ತು ಕೇರಳದ ಹಲವಾರು ಏಜೆಂಟರನ್ನು ನೇಮಿಸಿ ಗ್ರಾಹಕರಿಂದ ಕೋಟ್ಯಾಂತರ ರೂಪಾಯಿ ಠೇವಣಿ ಸಂಗ್ರಹಿಸಿ 2014ರಲ್ಲಿ ಗ್ರಾಹಕರ ಹಣ ಮರುಪಾವತಿಸದೆ ಮುಚ್ಚಿರುತ್ತದೆ. ಇದನ್ನು ತಿಳಿದು ತುಳುನಾಡ ರಕ್ಷಣಾ ವೇದಿಕೆ ತನ್ನ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಘಟಕದ ವತಿಯಿಂದ ಗ್ರಾಹಕರಿಗೆ ಹಣ ಮರು ಪಾವತಿಸುವಂತೆ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ಕಮಿಷನರ್ ರವರಿಗೆ ಮನವಿ ಸಲ್ಲಿಸಿತ್ತು. ಸರಕಾರ ವೃಕ್ಷ ಸಂಸ್ಥೆಯ ಆರೋಪಿಗಳನ್ನು ಬಂಧಿಸಿತ್ತು. ಆದರೂ ಗ್ರಾಹಕರಿಗೆ ಯಾವುದೇ ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆಯು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಪರಿಣಾಮ ಸರಕಾರವು ವೃಕ್ಷ ಸಂಸ್ಥೆಯ ಕೇಸನ್ನು ಸಿಒಡಿ ತನಿಖೆಗೆ ಒಪ್ಪಿಸಿತು. ಆದರೆ ಸಿಒಡಿ ಅಧಿಕಾರಿಗಳು ಗ್ರಾಹಕರ ಸಂಬಂಧಪಟ್ಟ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋದರೆ ಹೊರತು ಈ ಸಂಬಂಧ ಗ್ರಾಹಕರಿಗಾಗಲೀ, ದೂರುದಾರ ಸಂಘಟನೆಗಾಗಲೀ ಕಳೆದ 8 ವರ್ಷಗಳಿಂದ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ.ಆರೋಪಿಗಳು ಜಾಮೀನಿನ ಮೂಲಕ ಹೊರಗಿದ್ದು ಕೋರ್ಟಿಗೆ ಹಾಜರಾಗುತ್ತಿದ್ದರೂ ಇದುವರೆಗೂ ಗ್ರಾಹಕರಿಗೆ ತನ್ನ ಹೇಳಿಕೆ ಹಾಗೂ ಸಾಕ್ಷ್ಯ ನುಡಿಯಲು ಕೋರ್ಟ್ ಹಾಗೂ ಸರಕಾರದಿಂದ ಅವಕಾಶ ನೀಡಿಲ್ಲ. ವೃಕ್ಷ ಸಂಸ್ಥೆಯು ಈವರೆಗೂ ಏಜೆಂಟರು ಹಾಗೂ ಗ್ರಾಹಕರ ಹಣ ಮರುಪಾವತಿಸಿಲ್ಲ” ಎಂದು ಆರೋಪಿಸಿದರು.

“ಆರ್ ಬಾಲಚಂದರ್ (62) ಎಂಬವರು ಹಿರಿಯ ನಾಗರಿಕ ಹಾಗೂ ಒಂದು ಕಣ್ಣನ್ನು ಕಳೆದುಕೊಂಡ ಅಂಗವಿಕಲರಾಗಿದ್ದು ಕೆಲವು ತಿಂಗಳುಗಳ ಹಿಂದೆ ಮಂಗಳೂರಿನ ಬಲ್ಮಠದ ಲಕ್ಷ್ಮಿ ಟವ‌ನಲ್ಲಿರುವ ಕೆನರಾ ಫಿಶ್ ಆಂಡ್ ಫಾರ್ಮರ್ ಸಂಸ್ಥೆಯ ಮುಖ್ಯಸ್ಥರಾದ ರಾಹುಲ್ ಚಕ್ರಪಾಣಿ, ಆಡಳಿತ ನಿರ್ದೇಶಕರಾಗಿರುವಂತಹ 1) ಸಿಂಧು ಚಕ್ರಪಾಣಿ, 2) ಸಿಮಿ ಪಾರುತಿವಲಪ್ಪಿ ಆಲ್‌ಡೂಸ್, 3) ಸಂಗೀತ ಗೋಪಿ, 4) ಅನಿಲ್‌ ಚಕ್ರಪಾಣಿ, 5) ಮನೋಜ್ ಪಿ, 6) ವೆಂಗಣ ಪತೋಡಿ ಹೇಮಂತ್ ಪ್ರದೀಪ್, 7) ಪತಿಯ ವಲಪ್ಪಿಲ್ ಶಾಜಿ, 8) ವಲಿಯಾಲ್ ಚೆರಿಯತ್ ನಿಕಿಲ್, 9) ಅನಿಲ್ ಮೋಹನ್ ರವರುಗಳು ಆಡಳಿತ ನಡೆಸುತ್ತಿದ್ದು ಕಂಪೆನಿಯ ರೀಜಿನಲ್ ಮ್ಯಾನೇಜರ್ ಆಗಿರುವ ಸಂತೋಷ್ ಕುಮಾರ್ ಹಾಗೂ ಬ್ರಾಂಚ್ ಮ್ಯಾನೇಜರ್ ರವಿಚಂದ್ರ ಬಾಳೆಮೂಲೆ ಯವರು ಬಾಲಚಂದರ್‌ರವರನ್ನು ಸಂಪರ್ಕಿಸಿ ಹಣ ಹೂಡಿಕೆ ಮಾಡುವಂತೆ ಹೇಳಿದ್ದು ಅದರಂತೆ ಒಟ್ಟು 4 ಲಕ್ಷ ರೂಪಾಯಿಗಳ ಚೆಕ್‌ ಅನ್ನು ಬಾಲಚಂದರ್ ತೆಗೆದುಕೊಂಡಿದ್ದು, ನಮ್ಮ ಸಂಸ್ಥೆಯು ಕೇರಳ, ಕರ್ನಾಟಕ ಸೇರಿದಂತೆ ಶಾಖೆಗಳನ್ನು ಹೊಂದಿದ್ದು, ಉತ್ತಮ ವ್ಯವಹಾರ ಹೊಂದಿರುವುದರಿಂದ ನೀವು ಹೂಡಿದ ಹಣಕ್ಕೆ ಮೋಸವಾಗುವುದಿಲ್ಲ. ನೀವು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಆಕಸ್ಮಾತ್‌ ಸಂಸ್ಥೆಯು ಮುಳುಗಿದರೆ ನೀವು ಹೂಡಿರುವ 4 ಲಕ್ಷ ರೂಪಾಯಿಗೆ 50,000/- ರೂಪಾಯಿ ಲಾಭಂಶ ಸೇರಿಸಿ ರೂ. 4,50,000/- ರೂಗಳನ್ನು ಕಂಪೆನಿಯಿಂದ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಹಾಗೂ ಇಷ್ಟು ಲಾಭಾಂಶವನ್ನು ಮಂಗಳೂರಿನಲ್ಲಿ ಯಾವುದೇ ಸಂಸ್ಥೆಯು ನೀಡುವುದಿಲ್ಲ ಎಂದು ಭರವಸೆ ನೀಡಿರುತ್ತಾರೆ. ಬಾಂಡ್ ಕಳೆದ ತಿಂಗಳ 20ನೇ ತಾರೀಖಿಗೆ ಬಾಲಚಂದರ್‌ ರವರು ಹೂಡಿಕೆ ಮಾಡಿದ ಹಣದ ಅವಧಿ ಮುಕ್ತಾಯವಾಗಿದ್ದು, ಅವರು ಹೂಡಿದ ಹಣ ಹಿಂಪಡೆಯಲು ಮಂಗಳೂರಿನ ಬಲ್ಕರದಲ್ಲಿರುವ ಕಛೇರಿಗೆ ತೆರಳಿದಾಗ ಸಂಸ್ಥೆಯು ಬಾಗಿಲು ಮುಚ್ಚಿದ್ದು ಇದರಿಂದ ಅವರಿಗೆ ತೀವ್ರ ಆಘಾತವಾಗಿದೆ. ಅವರು ತಕ್ಷಣ ರವಿಚಂದ್ರನ್ ರವರ ಮೊಬೈಲ್‌ಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ತಕ್ಷಣ ಅವರು ರೀಜಿನಲ್ ಮ್ಯಾನೇಜರ್ ಸಂತೋಷ್‌ರನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಿರುವುದಿಲ್ಲ. ಇಂಥ ಬ್ಲೇಡ್ ಕಂಪೆನಿಗಳು ಕೂಡಲೇ ಗ್ರಾಹಕರ ಹಣ ಹಿಂದಿರುಗಿಸದೆ ಇದ್ದರೆ ಉಗ್ರ ಹೋರಾಟ ನಡೆಸಬೇಕಾದೀತು” ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರಶಾಂತ್ ಕಡಬ, ಸಂತ್ರಸ್ತರು ಉಪಸ್ಥಿತರಿದ್ದರು.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ನಟ ದರ್ಶನ್ ಅರೆಸ್ಟ್ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ಕೊಲೆ?

Next Post

ಮಂಗಳೂರು ಅಬುಧಾಬಿ ಮಧ್ಯೆ ಪ್ರತಿ ದಿನ ಸಂಚರಿಸಲಿದೆ ಏರ್ ಇಂಡಿಯಾ ಎಕ್ಸ್​ಪ್ರೆಸ್

Related Posts

ಸುಳ್ಯ: ಜ್ವರದ ಚಿಕಿತ್ಸೆಗೆಂದು ಬಂದ ಬಾಲಕಿಗೆ ಗರ್ಭಿಣಿ ಎಂದು ವರದಿ ಆರೋಪ!: ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರ ದೂರು
ಕರಾವಳಿ

ಸುಳ್ಯ: ಜ್ವರದ ಚಿಕಿತ್ಸೆಗೆಂದು ಬಂದ ಬಾಲಕಿಗೆ ಗರ್ಭಿಣಿ ಎಂದು ವರದಿ ಆರೋಪ!: ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರ ದೂರು

July 12, 2025
47
ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದ ವ್ಯಕ್ತಿ ಕೋರ್ಟ್ ಗೆ ಹಾಜರು
ಕರಾವಳಿ

ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದ ವ್ಯಕ್ತಿ ಕೋರ್ಟ್ ಗೆ ಹಾಜರು

July 11, 2025
145
Next Post
ಮಂಗಳೂರು ಅಬುಧಾಬಿ ಮಧ್ಯೆ ಪ್ರತಿ ದಿನ ಸಂಚರಿಸಲಿದೆ ಏರ್ ಇಂಡಿಯಾ ಎಕ್ಸ್​ಪ್ರೆಸ್

ಮಂಗಳೂರು ಅಬುಧಾಬಿ ಮಧ್ಯೆ ಪ್ರತಿ ದಿನ ಸಂಚರಿಸಲಿದೆ ಏರ್ ಇಂಡಿಯಾ ಎಕ್ಸ್​ಪ್ರೆಸ್

Discussion about this post

Recent News

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

July 12, 2025
25
ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು

ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು

July 12, 2025
32
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

July 12, 2025
ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು

ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು

July 12, 2025
ಸುಳ್ಯ: ಜ್ವರದ ಚಿಕಿತ್ಸೆಗೆಂದು ಬಂದ ಬಾಲಕಿಗೆ ಗರ್ಭಿಣಿ ಎಂದು ವರದಿ ಆರೋಪ!: ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರ ದೂರು

ಸುಳ್ಯ: ಜ್ವರದ ಚಿಕಿತ್ಸೆಗೆಂದು ಬಂದ ಬಾಲಕಿಗೆ ಗರ್ಭಿಣಿ ಎಂದು ವರದಿ ಆರೋಪ!: ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರ ದೂರು

July 12, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d