• About us
  • Contact us
  • Disclaimer
Saturday, December 20, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಖ್ಯಾತ ಬಹುಭಾಷಾ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ !

Coastal Times by Coastal Times
August 11, 2023
in ರಾಷ್ಟ್ರೀಯ ಸುದ್ದಿ
ಖ್ಯಾತ ಬಹುಭಾಷಾ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ !
198
VIEWS
WhatsappTelegramShare on FacebookShare on Twitter

ತಮಿಳುನಾಡು: ಖ್ಯಾತ ಬಹುಭಾಷಾ ನಟಿ ಜಯಪ್ರದಾಗೆ 6 ತಿಂಗಳ ಜೈಲು ಶಿಕ್ಷೆಯಾಗಿದೆ. ನಟಿ ಜಯಪ್ರದಾ ಸೇರಿದಂತೆ ಮೂವರಿಗೆ 6 ತಿಂಗಳ ಕಾಲ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿ ತಮಿಳುನಾಡಿನ  ಎಗ್ಮೋರ್ ಕೋರ್ಟ್  ಆದೇಶ ನೀಡಿದೆ. ಬಹುಭಾಷಾ ನಟಿ ಜಯಪ್ರದಾ ರಾಜಕಾರಣಿಯಾಗಿಯೂ  ಗುರುತಿಸಿಕೊಂಡವರು. ಚೆನ್ನೈನಲ್ಲಿ  ಅವರ ಮಾಲೀಕತ್ವದ ಸಿನಿಮಾ ಥಿಯೇಟರ್‌ನಲ್ಲಿ  ಕಾರ್ಮಿಕರಿಗೆ ಕಾರ್ಮಿಕ ವಿಮಾ ನಿಧಿ  ಪಾವತಿಸದೇ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕೇಸ್‌ನ ವಿಚಾರಣೆ ನಡೆಸಿದ ಕೋರ್ಟ್, ಜಯಪ್ರದಾ ಸೇರಿದಂತೆ ಮೂವರಿಗೆ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಚೆನ್ನೈನ ರಾಯಪೇಟಾ ಎಂಬಲ್ಲಿ ನಟಿ ಜಯಪ್ರದಾ ಒಡೆತನದ ಜಯಪ್ರದಾ ಎಂಬ ಸಿನಿಮಾ ಥಿಯೇಟರ್ ಇದೆ. ಈ ಥಿಯೇಟರ್‌ನಲ್ಲಿ ಕಾರ್ಮಿಕರಿಗೆ ಕಾರ್ಮಿಕ ವಿಮಾ ನಿಧಿ (ESI) ನೀಡದೇ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ದೂರು ದಾಖಲಿಸಿದ್ದ ಥಿಯೇಟರ್ ಕಾರ್ಮಿಕ : ಜಯಪ್ರದಾ ಸಿನಿಮಾ ಥಿಯೇಟರ್‌ನಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದನ್ನು ರಾಮ್ ಕುಮಾರ್ ಮತ್ತು ರಾಜಾಬಾಬು ಎಂಬುವರು ಥಿಯೇಟರ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಮೊದಲಿಗೆ ದೂರು ನೀಡಿದ್ದ. ತಮ್ಮ ಇಎಸ್‌ಐ ನಿಧಿ ಮೊತ್ತವನ್ನು ಪಾವತಿಸಿಲ್ಲ ಅಂತ ತಮಿಳುನಾಡು ರಾಜ್ಯ ವಿಮಾ ನಿಗಮದ ವಿರುದ್ಧ ದೂರು ದಾಖಲಿಸಿದರು.

ಈ ವೇಳೆ ಪರಿಶೀಲನೆ ನಡೆಸಿದಾಗ ಜಯಪ್ರದಾ ಥಿಯೇಟರ್‌ನವರೇ ವಿಮಾ ಹಣ ಪಾವತಿಸಿರಲಿಲ್ಲ ಎನ್ನಲಾಗಿದೆ. ಇದರ ಬೆನ್ನಲ್ಲೇ ಕಾರ್ಮಿಕ ಸರ್ಕಾರಿ ವಿಮಾ ನಿಗಮವು ನಟಿ ಜಯಪ್ರದಾ, ಥಿಯೇಟರ್ ಉಸ್ತುವಾರಿಗಳಾದ ರಾಜಾಬಾಬು ಹಾಗೂ ರಾಮ್‌ ಕುಮಾರ್ ವಿರುದ್ಧ ಚೆನ್ನೈನ ಎಗ್ಮೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಕೇಸ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಜಯಪ್ರದಾ ಹಾಗೂ ಥಿಯೇಟರ್ ಉಸ್ತುವಾರಿಗಳು ಮನವಿ ಮಾಡಿಕೊಂಡಿದ್ದರು. ಥಿಯೇಟರ್ ಕಾರ್ಮಿಕರಿಗೆ ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿ, ತಮ್ಮ ಮೇಲೆ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

6 ತಿಂಗಳ ಜೈಲು ಶಿಕ್ಷೆ, ದಂಡ ವಿಧಿಸಿದ ಕೋರ್ಟ್ : ಆದರೆ ಕಾರ್ಮಿಕ ಸರ್ಕಾರಿ ವಿಮಾ ನಿಗಮದ ವಕೀಲರು ಜಯಪ್ರದಾ ಹಾಗೂ ಇತರೇ ಇಬ್ಬರು ಆರೋಪಿಗಳ ಮನವಿಯನ್ನು ವಿರೋಧಿಸಿದರು. ನಂತರ ಜಯಪ್ರದಾದ್ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರ ಮೂವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅದೇ ರೀತಿ ತಲಾ 5,000 ರೂ.ಗಳ ದಂಡ ಕಟ್ಟುವಂತೆಯೂ ಎಗ್ಮೋರ್ ಕೋರ್ಟ್ ಸೂಚಿಸಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಏರ್ ಇಂಡಿಯಾದ ವಿಮಾನಯಾನ ಸಂಸ್ಥೆಯು ನೂತನ ಲೋಗೋ ಅನಾವರಣ ಮಾಡಿದ ಟಾಟಾ ಸಂಸ್ಥೆ

Next Post

ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ‌ ಅರೆಸ್ಟ್

Related Posts

ಜೆಡ್ಡಾದಿಂದ ಕೋಝಿಕ್ಕೋಡ್‌ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ತುರ್ತು ಭೂಸ್ಪರ್ಶ, ಟೈರ್ ಸ್ಫೋಟ, ತಪ್ಪಿದ ದೊಡ್ಡ ಅನಾಹುತ!
ರಾಷ್ಟ್ರೀಯ ಸುದ್ದಿ

ಜೆಡ್ಡಾದಿಂದ ಕೋಝಿಕ್ಕೋಡ್‌ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ತುರ್ತು ಭೂಸ್ಪರ್ಶ, ಟೈರ್ ಸ್ಫೋಟ, ತಪ್ಪಿದ ದೊಡ್ಡ ಅನಾಹುತ!

December 18, 2025
34
ವಿಶ್ವಕಪ್​ ಗೆದ್ದ ಪ್ರತಿಯೊಬ್ಬ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಗೆ ಸಿಕ್ತು ಟಾಟಾ ಸಿಯೆರಾ ಎಸ್‌ಯುವಿ ಗಿಫ್ಟ್!
ಕ್ರೀಡಾ ಸುದ್ದಿ

ವಿಶ್ವಕಪ್​ ಗೆದ್ದ ಪ್ರತಿಯೊಬ್ಬ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಗೆ ಸಿಕ್ತು ಟಾಟಾ ಸಿಯೆರಾ ಎಸ್‌ಯುವಿ ಗಿಫ್ಟ್!

December 18, 2025
32
Next Post
ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ‌ ಅರೆಸ್ಟ್

ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ‌ ಅರೆಸ್ಟ್

Discussion about this post

Recent News

ಖ್ಯಾತ ಮಲಯಾಳಂ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್ ಇನ್ನಿಲ್ಲ

ಖ್ಯಾತ ಮಲಯಾಳಂ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್ ಇನ್ನಿಲ್ಲ

December 20, 2025
44
ಮಂಗಳೂರು: ಅರ್ಮೇನಿಯಾದಲ್ಲಿ 1.5 ಲಕ್ಷ ಸಂಬಳದ ಉದ್ಯೋಗ ಕೊಡಿಸುವುದಾಗಿ 2-3 ಲಕ್ಷ ಹಣ ಪಡೆದು ವಂಚನೆ; ಮೂವರ ವಿರುದ್ದ ದೂರು ದಾಖಲು

ಮಂಗಳೂರು: ಅರ್ಮೇನಿಯಾದಲ್ಲಿ 1.5 ಲಕ್ಷ ಸಂಬಳದ ಉದ್ಯೋಗ ಕೊಡಿಸುವುದಾಗಿ 2-3 ಲಕ್ಷ ಹಣ ಪಡೆದು ವಂಚನೆ; ಮೂವರ ವಿರುದ್ದ ದೂರು ದಾಖಲು

December 19, 2025
89
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಖ್ಯಾತ ಮಲಯಾಳಂ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್ ಇನ್ನಿಲ್ಲ

ಖ್ಯಾತ ಮಲಯಾಳಂ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್ ಇನ್ನಿಲ್ಲ

December 20, 2025
ಮಂಗಳೂರು: ಅರ್ಮೇನಿಯಾದಲ್ಲಿ 1.5 ಲಕ್ಷ ಸಂಬಳದ ಉದ್ಯೋಗ ಕೊಡಿಸುವುದಾಗಿ 2-3 ಲಕ್ಷ ಹಣ ಪಡೆದು ವಂಚನೆ; ಮೂವರ ವಿರುದ್ದ ದೂರು ದಾಖಲು

ಮಂಗಳೂರು: ಅರ್ಮೇನಿಯಾದಲ್ಲಿ 1.5 ಲಕ್ಷ ಸಂಬಳದ ಉದ್ಯೋಗ ಕೊಡಿಸುವುದಾಗಿ 2-3 ಲಕ್ಷ ಹಣ ಪಡೆದು ವಂಚನೆ; ಮೂವರ ವಿರುದ್ದ ದೂರು ದಾಖಲು

December 19, 2025
ಡಿಸೆಂಬರ್ 21ರಂದು ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿವೇತನ ಪರೀಕ್ಷೆ

ಡಿಸೆಂಬರ್ 21ರಂದು ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿವೇತನ ಪರೀಕ್ಷೆ

December 18, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d