ಉಡುಪಿ ಜ 20 : ಉಡುಪಿ ತಾಲೂಕು ಸಹಕಾರ ಭಾರತೀಯ ಆಶ್ರಯದಲ್ಲಿ ಸಹಕಾರ ಭಾರತಿ ಸ್ಥಾಪನಾ ದಿನಾಚರಣೆಯು ಇಂಡಸ್ಟ್ರಿಯಲ್ ಕಾರ್ಪೊರೇಟರ್ ಸೊಸೈಟಿ ಕಿನ್ನಿಮುಲ್ಕಿ ಉಡುಪಿಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ್ ಅಧ್ಯಕ್ಷರಾದ ದಿನೇಶ್ ಹೆಗ್ಡೆ ಆತ್ರಾಡಿಯವರು ವಹಿಸಿದ್ದರು , ಜಿಲ್ಲಾ ಅಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು .


ಸಹಕಾರ ಭಾರತಿ ಸ್ಥಾಪನಾ ದಿನದ ವಿಶೇಷತೆಯನ್ನು ಮೋಹನ್ ಕುಂಬ್ಳೆಕರ್ ವಿಭಾಗ ಪ್ರಮುಖ ಮಂಗಳೂರು ತಿಳಿಸಿದರು ಕಾರ್ಯಕ್ರಮದಲ್ಲಿ ಮಹಿಳಾ ಪ್ರಕೋಷ್ಠದ ಸಂಚಾಲಕರಾದ ಶ್ರೀಮತಿ ವಿಜೇತ ವಿದ್ಯಾ ಪೈ , ಶ್ರೀ ರಾಜೇಶ್ ಹೆಗ್ದೆ ಕಾರ್ಯನಿರ್ವಹಣಾಧಿಕಾರಿ ಇಂಡಸ್ಟ್ರಿಯಲ್ ಕೋ – ಅರೇಟಿವ್ ಸೊಸೈಟಿ ಉಡುಪಿ , ಜಯಪ್ರಕಾಶ್ ಕೆದ್ಲಾಯ ಜಿಲ್ಲಾ ಉಪಾಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿದರು ,
ಶ್ರೀ ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷರು ಇಂಡಸ್ಟ್ರಿಯಲ್ ಕೋಪರೇಟಿವ್ ಸೊಸೈಟಿ ಇವರನ್ನು ಸನ್ಮಾನಿಸಲಾಯಿತು ಸನ್ಮಾನ ಪತ್ರವನ್ನು ಮಂಜುನಾಥ್ ಮಣಿಪಾಲ್ ಓದಿದರು , ಪ್ರದೀಪ್ ನಾಯಕ್ ವಂದನಾರ್ಪಣೆ ಮಾಡಿದರು ಸಂಘಟನಾ ಕಾರ್ಯದರ್ಶಿ ಡಾl ಬಾಲಕೃಷ್ಣ ಮದ್ದೊಡಿ ಕಾರ್ಯಕ್ರಮವನ್ನು ನಿರ್ವಹಿಸಿದರು ನೀಡಿದರು
Discover more from Coastal Times Kannada
Subscribe to get the latest posts sent to your email.
Discussion about this post