ಮಂಗಳೂರು: ಶ್ರೀ ಕ್ಷೇತ್ರ ಕಾರಿಂಜೇಶ್ವರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸುವಂತೆ ಹಾಗೂ ಕ್ಷೇತ್ರದ ಸಂರಕ್ಷಣೆಗೆ ಆಗ್ರಹಿಸಿ, ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗದ ಆಶ್ರಯದಲ್ಲಿ ವಿವಿಧ ಹಿಂದು ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಹಂಪನಕಟ್ಟೆಯ ಕ್ಲಾಕ್ಟವರ್ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಕಾರಿಂಜೇಶ್ವರದ ದೇವಸ್ಥಾನ ಮುಜರಾಯಿ ಇಲಾಖೆಯಲ್ಲಿದೆ. ಅದನ್ನು ಸರಕಾರಕ್ಕೆ ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಅಂತಾದರೆ ಹಿಂದು ಸಮಾಜಕ್ಕೆ ಬಿಟ್ಟುಕೊಡಲಿ. ಅಲ್ಲಿನ ಬೆಟ್ಟದ ತುದಿಯಲ್ಲಿರುವ ಶಿವನ ಆಲಯ ಬಿರುಕು ಬಿಟ್ಟಿದೆ. 360 ಡಿಗ್ರಿ ನೇರ ಇರಬೇಕಾದ ಧ್ವಜ ಸ್ತಂಭ ಡೈನಮೈಟ್ ಸ್ಫೋಟಕ್ಕೆ ನಲುಗಿ ಅಡ್ಡಲಾಗಿ ನಿಂತಿದೆ. ಸುತ್ತಲಿನ ಕಾಡಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಕೂಡದು, ಅದರಿಂದ ದೇವಸ್ಥಾನಕ್ಕೆ ಧಕ್ಕೆಯಾಗುತ್ತದೆ ಎಂಬ ನಮ್ಮ ಕೂಗು ಜಿಲ್ಲಾಧಿಕಾರಿಗಳಿಗೆ ಕೇಳಿಸಿಲ್ಲವಾದರೇ ನಾವು ಯಾರಿಗೆ ಹೇಳಬೇಕು. ಇಲ್ಲಿಯವರೆಗೆ ಕಾನೂನನ್ನು ಗೌರವಿಸಿಕೊಂಡು ಬಂದಿದ್ದೇವೆ. ಸರ್ಕಾರ, ಜಿಲ್ಲಾಡಳಿತ ಇನ್ನೂ ನಮ್ಮ ಮಾತಿಗೆ ಬೆಲೆ ನೀಡದಿದ್ದರೆ, ಮುಂದಿನ ದಾರಿಯನ್ನು ನಾವೇ ಹಿಡಿಯುತ್ತೇವೆ. ದೇವಳದ ಸಂರಕ್ಷಣೆಗಾಗಿ ಜೈಲಿಗೆ ಹೋಗಲೂ ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

ತಪೋನಿಧಿ ನಾಗಾಸಾಧು ಬಾಬಾ ವಿಠಲಗಿರಿ ಮಹಾರಾಜ್, ಚಿಲಿಂಬಿ ಓಂ ಶ್ರೀ ಮಠದ ಶ್ರೀ ನಿತ್ಯಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮಾತೃಶ್ರೀ ಶಿವಜ್ಞಾನಮಯಿ, ವಿಎಚ್ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಹಿಂ.ಜಾ.ವೇ. ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಮೊದಲಾದವರು ಮಾತನಾಡಿದರು. ನೂರಾರು ಸಂಖ್ಯೆಯಲ್ಲಿ ಹಿಂದು ಕಾರ್ಯಕರ್ತರು ಹಾಗೂ ಕ್ಷೇತ್ರದ ಭಕ್ತರು ಭಾವಗಹಿಸಿದ್ದರು. ಪ್ರತಿಭಟನಾಕಾರರ ಆಗ್ರಹದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪರವಾಗಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ. ಮನವಿ ಸ್ವೀಕರಿಸಿ, ಈಗಾಗಲೇ 3 ಗಣಿಗಳಲ್ಲಿ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post