ಮಂಗಳೂರು: ಇಲ್ಲಿನ ‘ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್’ ಜಾಹೀರಾತು ಸಂಸ್ಥೆಯ ಮಾಲೀಕರಾಗಿದ್ದ ಸುಧೀರ್ ಘಾಟೆ (64) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಆರ್ಎಸ್ಎಸ್ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ವೃತ್ತಿ ಜೀವನ ಆರಂಭಿಸಿ, 1992ರಲ್ಲಿ ಜಾಹೀರಾತು ಸಂಸ್ಥೆಯನ್ನು ಕಟ್ಟಿದರು. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಈ ಸಂಸ್ಥೆ, ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ.
1991ರ ತನಕ ಕಾಂಗ್ರೇಸ್ ತೆಕ್ಕೆಯಲ್ಲಿದ್ದ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆಲುತಿದ್ದ ಜನಾರ್ಧನ್ ಪೂಜಾರಿಗೆ ಮೊದಲ ಸೋಲುನಿಸಿದ ವ್ಯಕ್ತಿ ಎಂದರೇ ಅದು ಧನಂಜಯ ಕುಮಾರ್. ಇವರ ಗೆಲುವಿಗಾಗಿ ಹಲವು ಸಮಾವೇಶ, ಸಭೆ, ಬೂತ್ ಸಮಿತಿ ಮಾಡಿ ಗೆಲುವಿನ ರುವಾರಿ ಆದವರು ಆಗಿನ ಜಿಲ್ಲಾ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಸುದೀರ್ ಘಾಟೆ.
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ಸುಧೀರ್ ಘಾಟೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.
Discussion about this post