ಚಂಢೀಗಢ(ಸೆ.23): ಪಂಜಾಬ್ನ ಕಪುರ್ತಲಾ ಜಿಲ್ಲೆಯ ಕಬಡ್ಡಿ ಆಟಗಾರ ಹರ್ದೀಪ್ ಸಿಂಗ್ ನ ಬರ್ಬರ ಹತ್ಯೆಯಾಗಿರುವುದು ವರದಿಯಾಗಿದೆ. ಸೆಪ್ಟೆಂಬರ್ 19ರ ರಾತ್ರಿ ಈ ಘಟನೆ ನಡೆದಿದೆ. ಅದರಲ್ಲೂ ಆ ಕಬಡ್ಡಿ ಆಟಗಾರನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಅವರ ಮನೆಯ ಮುಂದೆಯೇ ಬೀಸಾಡಿ ಹೋಗಿದ್ದರಿಂದ ಇದೀಗ ಈ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಜಿಲ್ಲೆಯ ದಿಲ್ವಾನ್ ತಹಸಿಲ್ ನಲ್ಲಿ ಈ ಘಟನೆ ನಡೆದಿದೆ. ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ.
ಇನ್ನು ಈ ಘಟನೆಯನ್ನು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಕಠಿಣವಾದ ಪದಗಳಿಂದ ಖಂಡಿಸಿದ್ದಾರೆ. ಪಂಜಾಬ್ನಲ್ಲಿ ಈಗ ಜಂಗಲ್ ರಾಜ್ಯದ ಆಡಳಿತ ಜಾರಿಯಲ್ಲಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವತ್ ಮನ್ ವಿರುದ್ದ ವಾಕ್ಪ್ರಹಾರ ನಡೆಸಿದ್ದಾರೆ. ಈ ಘಟನೆಯ ಸಂಬಂಧ, ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾದ ಮುಖ್ಯಮಂತ್ರಿ ಭಗವತ್ ಮನ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಪುರ್ತಲಾ ಜಿಲ್ಲೆಯ ಯುವ ಕಬಡ್ಡಿ ಆಟಗಾರ ಹರ್ದೀಪ್ ಸಿಂಗ್ ಅವರ ಬರ್ಬರ ಹತ್ಯೆಯ ವಿಚಾರ ತಿಳಿದು ನಿಜಕ್ಕೂ ಆಘಾತ ಮೂಡಿಸಿತು. ಈ ರೀತಿ ಕೊಲೆ ಮಾಡಲು ಜನರು ಎಷ್ಟು ನಿರ್ಭಯವಾಗಿದ್ದಾರೆ ಎನ್ನುವುದನ್ನು ಈ ಘಟನೆ ತೋರಿಸುತ್ತದೆ. ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದು ಮಾತ್ರವಲ್ಲದೇ ಮನೆಯ ಬಾಗಿಲು ಬಡಿದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಸ್ಥಳೀಯ ವರದಿಗಳ ಪ್ರಕಾರ ಯುವ ಕಬಡ್ಡಿ ಆಟಗಾರನನ್ನು ಬರ್ಬರವಾಗಿ ಹತ್ಯೆ ಮಾಡಿದ ಸಂಬಂಧ, ಇದುವರೆಗೂ ಯಾವುದೇ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿಲ್ಲ ಎಂದು ವರದಿಯಾಗಿದೆ. ಸೆಪ್ಟೆಂಬರ್ 19ರ ರಾತ್ರಿ ಕಬಡ್ಡಿ ಆಟಗಾರನ ಹತ್ಯೆ ನಡೆದಿದೆ ಎಂದು ವರದಿಯಾಗಿದೆ.
ಕೆಲವು ವರದಿಗಳ ಪ್ರಕಾರ, ಕಬಡ್ಡಿ ಆಟಗಾರ ಹರ್ದೀಪ್ ಸಿಂಗ್ ಹಾಗೂ ಅದೇ ಏರಿಯಾದಲ್ಲಿ ವಾಸವಾಗಿದ್ದ ಹರ್ಪ್ರೀತ್ ಸಿಂಗ್ ನಡುವೆ ಸಾಕಷ್ಟು ಸಮಯದಿಂದ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಹೀಗಾಗಿ ಈ ಹಿಂದೆಯೇ ಹರ್ದೀಪ್ ಹಾಗೂ ಹರ್ಪ್ರೀತ್ ಅವರ ಮೇಲೆ ದಿಲ್ವಾನ್ ಪೊಲೀಸ್ ಠಾಣೆಯಲ್ಲಿ ಕೇಸ್ಗಳು ದಾಖಲಾಗಿದ್ದವು.
Shocked to learn about the brutal killing of a young Kabaddi player at vill Dhilwan in Kapurthala. See the level of fearlessness of the murderers; they knocked at the door and told the parents: "Aah maar ditta tuhada Sher putt". This isn't an isolated incident. There is complete… pic.twitter.com/myulUOWFvJ
— Sukhbir Singh Badal (@officeofssbadal) September 22, 2023
Discover more from Coastal Times Kannada
Subscribe to get the latest posts sent to your email.
Discussion about this post