• About us
  • Contact us
  • Disclaimer
Thursday, September 18, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಎಂ.ಸಿ.ಸಿ. ಬ್ಯಾಂಕಿನ 18ನೇ ಶಾಖೆ ಬೆಳ್ತಂಗಡಿಯಲ್ಲಿ ಉದ್ಘಾಟನೆ

Coastal Times by Coastal Times
November 25, 2024
in ಕರಾವಳಿ
ಎಂ.ಸಿ.ಸಿ. ಬ್ಯಾಂಕಿನ 18ನೇ ಶಾಖೆ ಬೆಳ್ತಂಗಡಿಯಲ್ಲಿ ಉದ್ಘಾಟನೆ
16
VIEWS
WhatsappTelegramShare on FacebookShare on Twitter

ಬೆಳ್ತಂಗಡಿ : ಎಂ.ಸಿ.ಸಿ. ಬ್ಯಾಂಕಿನ 18ನೇ ಶಾಖೆಯು ಬೆಳ್ತಂಗಡಿಯ ಚರ್ಚ್ರಸ್ತೆಯ ಹತ್ತಿರ, ಬೆಳ್ತಂಗಡಿ ಹೈವೆ, ವೈಬವ್ ಅರ್ಕೆಡ್‌ನ ನೆಲಮಹಡಿಯಲ್ಲಿ ದಿನಾಂಕ 24.11.2024ರಂದು ಉದ್ಘಾಟನೆಗೊಂಡಿತು.ನೂತನ ಶಾಖೆಯನ್ನು ಬ್ಯಾಂಕಿನಅಧ್ಯಕ್ಷರಾದ ಸಹಕಾರರತ್ನ ಶ್ರೀ ಅನಿಲ್ ಲೋಬೊ ಉದ್ಘಾಟಿಸಿದರು. ಶಾಖೆಯನ್ನು ಬೆಳ್ತಂಗಡಿ ಹೋಲಿ ರೆಡೀಮರ್‌ಚರ್ಚ್ನಧರ್ಮಗುರುಅತೀ ವಂ.ಫಾ| ವಾಲ್ಟರ್‌ಡಿಮೆಲ್ಲೊ ಆಶೀವರ್ಚಿಸಿದರು.
ಭದ್ರತಾಕೊಠಡಿಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರೊಕ್ಯೂರೇಟರ್‌ ಅತೀ ವಂ.ಅಬ್ರಹಾo ಪಟ್ಟೆರಿಲ್ ಉದ್ಘಾಟಿಸಿದರು.ಇ-ಸ್ಟಾಂಪಿoಗ್ ವ್ಯವಸ್ಥೆಯನ್ನು ಬೆಳ್ತಂಗಡಿ ಕಥೋಲಿಕ್‌ ಕ್ರೇಡಿಟ್‌ಕೋ ಆಪರೇಟಿವ್ ಸೊಸೈಟಿಯಅಧ್ಯಕ್ಷರಾದ ಶ್ರೀ ಹೆನ್ರಿ ಲೋಬೊ ಉದ್ಘಾಟಿಸಿದರು.ಸಿರಿಯನ್ ವಿವಿದ್ದೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಅಧ್ಯಕ್ಷರಾದ ಶ್ರೀ ಅನಿಲ್ ಎ.ಜೆ.ಉಪಸ್ಥಿತದ್ದರು.

ಸಭಾಕಾರ್ಯಕ್ರಮದಅಧ್ಯಕ್ಷತೆಯನ್ನು ಸಹಕಾರರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಸಹಕಾರರತ್ನ ಶ್ರೀ ಅನಿಲ್ ಲೋಬೊ ತಮ್ಮಅಧ್ಯಕ್ಷೀಯ ಭಾಷಣದಲ್ಲಿ ಬ್ಯಾಂಕಿನ ಸೇವೆ ಮತ್ತು ಸೌಲಭ್ಯಗಳನ್ನು ಪರಿಚಯಿಸಲು ಬೆಳ್ತಂಗಡಿ ಪರಿಸರದಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಬೇಟಿ ಮಾಡಿದ ಸಂದರ್ಭದಲ್ಲಿ ಬೆಳ್ತಂಗಡಿ ಪರಿಸರದಜನರು ನೀಡಿದ ಸಹಕಾರ ಮತ್ತು ಬೆಂಬಲಕ್ಕಾಗಿ ವಂದನೆಗಳನ್ನು ಸಲ್ಲಿಸಿದರು.ಶಾಖೆಯು ಪ್ರಾರಂಭವಾದಒAದು ವರ್ಷದೊಳಗೆ ಲಾಭ ಗಳಿಸಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಹಕಾರ ಮತ್ತು ಬೆಂಬಲವನ್ನುಕೋರಿದರು.ಇತರ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವಎಲ್ಲಾ ಸೇವೆಗಳನ್ನು ಎಂ.ಸಿ.ಸಿ.ಬ್ಯಾಂಕ್ಒದಗಿಸುತ್ತದೆ. ಬ್ಯಾಂಕ್ಕನ್ನು ಭಾರತೀಯರಿಸರ್ವ್ ಬ್ಯಾಂಕ್ ನಿಯಂತ್ರಿಸುವುದರಿoದ ಬ್ಯಾಂಕಿನ ಠೇವಣಿಗಳಿಗೆ DICGC ವಿಮಾ ಸೌಲಭ್ಯವಿದೆಎಂದು ಹೇಳಿದರು.ಮುಂದಿನ ದಿನಗಳಲ್ಲಿ ಗೂಗಲ್ ಪೇ ಮತ್ತುಯುಪಿಐ ಪಾವತಿಗಳಂತಹ ಡಿಜಿಟಲ್ ಬ್ಯಾಂಕಿಗ್ ಸೌಲಭ್ಯಗಳೊಂದಿಗೆ ಬ್ಯಾಂಕ್ ಬರಲಿದೆಎಂದು ಹೇಳಿ, ಬ್ಯಾಂಕಿನಲ್ಲಿರುವ ಖಾತೆಗಳಲ್ಲಿ ಸರಾಸರಿ ಒಂದು ಲಕ್ಷ ಇರುವಖಾತೆದಾರರಿಗೆಯಾವುದೇ ಸೇವಾ ಶುಲ್ಕವಿರುವುದಿಲ್ಲ. ಇದರ ಪ್ರಯೋಜನವನ್ನುಗ್ರಾಹಕರು ಪಡೆದುಕೊಳ್ಳೂವಂತೆ ವಿನಂತಿಸಿದರು.ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ ಮುಂದಿನ ದಿನಗಳಲ್ಲಿ ಬ್ಯಾಂಕಿನ ಬೆಳವಣಿಗೆಗೆ ಸಹಕಾರ ಮತ್ತು ಬೆಂಬಲವನ್ನುಕೋರಿದರು.

ಅತೀ ವಂದನೀಯ ಫಾ| ವಾಲ್ಟರ್‌ಡಿಮೆಲ್ಲೊ ಮಾತನಾಡಿ ಬೆಳ್ತಂಗಡಿಯಲ್ಲಿ ನೂತನ ಶಾಖೆಯನ್ನು ಆರಂಭಿಸಿ ಗ್ರಾಹಕ ಸ್ನೇಹಿ ವಾತವಾರಣವನ್ನು ಒದಗಿಸಿದ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು.ಬ್ಯಾoಕಿನ ಮುಂದಿನ ಯೋಜನೆಗಳಿಗೆ ಆಶೀರ್ವಾದವನ್ನು ಕೋರಿ ಸಮಾಜದಲ್ಲಿ ವಿಶೇಷವಾಗಿ ಬಡವರು ಮತ್ತುಕೆಳವರ್ಗದ ಜನರಿಗೆಬ್ಯಾಂಕ್ ವರದಾನವಾಗಲಿ ಎಂದು ಹಾರೈಸಿದರು.
ಮಾನಸಿಕ ಮತ್ತುದೈಹಿಕವಾಗಿ ವಿಕಲಾಂಗ ವ್ಯಕ್ತಿಗಳು ಮತ್ತುಅನಾಥರಆರೈಕೆಗಾಗಿ ಸಿಯೋನ್ ಅಶ್ರಮ್‌ಟ್ರಸ್ಟ್, ಗುಂಡಿಬಾಗಿಲು ಮತ್ತುಕೈಗೆಟಕುವದರದಲ್ಲಿಅತ್ಯುತ್ತಮಆರೋಗ್ಯ ಸೇವೆಗಳನ್ನು ಒದಗಿಸುವ ಫಾ| ಎಲ್. ಎಮ್.ಪಿಂಟೊ ಹೆಲ್ತ್ಕೇರ್ ಸೆಂಟರ್‌ಚಾರಿಟೇಬಲ್ ಟ್ರಸ್ಟ್, ಬದ್ದ್ಯಾರ್ ಇವರಿಗೆ ಬ್ಯಾಂಕಿನ ಧತ್ತಿ ನಿಧಿಯಿಂದ ದೇಣಿಗೆಯನ್ನು ನೀಡಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಬೆಳ್ತಂಗಡಿಧರ್ಮಪ್ರಾoತ್ಯದ ಪ್ರೋಕು ರೇಟರ್‌ಅತೀ ವಂದನೀಯ ಪಾ| ಅಬ್ರಹಾಂ ಪಟ್ಟೆರಿಲ್ ಮಾತನಾಡಿ ಸುತ್ತಮುತ್ತಲಿನ ಇತರ ಬ್ಯಾಂಕ್‌ಗಳಿಗಿoತ ಭಿನ್ನವಾಗಿ ಮಾನವೀಯತೆಯ ಸೇವೆಯ ಉದಾತ್ತ ಉದ್ದೇಶದಲ್ಲಿ ತೊಡಗಿರುವ ಸಂಸ್ಥೆ ಮತ್ತು ವ್ಯಕ್ತಿಗಳನ್ನು ಪ್ರೋತ್ಸಾಹಿಸುತ್ತಿರುವ ಎಂ.ಸಿ.ಸಿ.ಬ್ಯಾಂಕನ್ನು ಶ್ಲಾಘಿಸಿದರು.ಬ್ಯಾಂಕಿನಬೆಳವಣಿಗೆಗೆ ಸಾರ್ವಜನಿಕರು ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕೆಂದು ಕೋರಿದಅವರು ಸಮಾಜದ ಹಿತದೃಷ್ಟಿಯಿಂದ ಬ್ಯಾಂಕ್ ಕೆಲಸ ಮಾಡಲು ಸಾಧ್ಯವಾಗುತ್ತದೆಎಂದು ಬ್ಯಾಂಕಿನ ಸರ್ವತೋಮುಖ ಅಭಿವೃದ್ದಿಗೆ ಶುಭ ಹಾರೈಸಿದರು.

ಸಮಾಜ ಸೇವೆಗಾಗಿ ವಿಶೇಷವಾಗಿ ಅಪಘಾತಗಳಲ್ಲಿ ಗಾಯಗೊಂಡವರಿಗೆ ಮತ್ತು ನೈಸರ್ಗಿಕ ವಿಕೋಪಗಳಿಂದ ಹಾನಿಗೊಳಗಾದ ಜನರಿಗೆ ಸಹಾಯ ಮಾಡುತ್ತಿರುವ ಶ್ರೀ ಚಾರ್ಮಾಡಿ ಹಸನಬ್ಬ, ಕೃಷಿ ಮತ್ತುತೋಟಗಾರಿಕೆಯಲ್ಲಿ ನವೀನ ಯೋಜನೆಗಳನ್ನು ಅನುಷ್ಟಾನಗೊಳಿಸಿದ ಮತ್ತು ಶಿಕ್ಷಣ ಕ್ಷೇತ್ರದಲ್ಲಿನಕೊಡುಗೆಗಾಗಿ ಶ್ರೀ ಕಾಸ್ಮಿರ್ ಮಿನೇಜಸ್, ಸಾಮಾನ್ಯಜನರಿಗೆ ವೈದಕೀಯ ಸೇವೆಗಳನ್ನುಒದಗಿಸುವಜನರ ವೈದ್ಯರಾಗಿರುವ ಗುರುವಾಯನ್‌ಕೆರೆಯ ಡಾ| ವೇಣುಗೋಪಾಲ್ ಶರ್ಮ ಮತ್ತು ದೈಹಿಕ ಅಸಾಮರ್ಥದ ಹೊರತಾಗಿಯೂ ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಿದ ಕು| ಸಬಿತಾ ಮೋನಿಸ್ ಇವರನ್ನುಅವರ ಸೇವೆ ಮತ್ತು ಸಾಧನೆಗಾಗಿ ಬ್ಯಾಕಿನಿಂದಗುರುತಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕು| ಸಬಿತಾ ಮೋನಿಸ್ ಬ್ಯಾಂಕಿನ ಸನ್ಮಾನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ ಬ್ಯಾಂಕಿಗೆ ಶುಭ ಹಾರೈಸಿದರು. ಕಟ್ಟಡ ಮ್ಹಾಲಿಕರಾದ ಶ್ರೀ ಸೀತರಾಮ ಶೆಟ್ಟಿ ಮತ್ತುಇಂಜೀನಿಯರ್ ಶ್ರೀ ಕಾರ್ತಿಕ್‌ಕಿರಣ್‌ ಇವರನ್ನು ಸನ್ಮಾನಿಸಲಾಯಿತು.ಶಾಖೆಯಲ್ಲಿ ಮೊದಲ ಖಾತೆಯನ್ನುತೆರೆದ ಗ್ರಾಹಕರನ್ನು ಸನ್ಮಾನಿಸಲಾಯಿತು.ಮೊದಲ ಖಾತೆತೆರೆದ ಶ್ರೀಮತಿ ಸವಿತಾ ಬ್ಯಾಪ್ಟಿಸ್ಟ್ಇವರಜನ್ನ ದಿನಾಚರಣೆಯನ್ನು ಈ ಸಂದರ್ಭದಲ್ಲಿಆಚರಿಸಲಾಯಿತು.

ಉಪಾಧ್ಯಕ್ಷ ಶ್ರಿ ಜೆರಾಲ್ಡ್ ಡಿಸಿಲ್ವಾ, ನಿರ್ದೆಶಕರಾದ ಶ್ರೀ ಡೆವಿಡ್‌ಡಿಸೋಜ, ಶ್ರೀ ಅನಿಲ್ ಪತ್ರಾವೊ, ಶ್ರೀ ಮೆಲ್ವಿನ್ ವಾಸ್, ಶ್ರೀ ರೋಶನ್‌ಡಿಸೋಜ, ಡಾ| ಫ್ರೀಡಾಡಿಸೋಜ, ಶ್ರೀಮತಿ ಐರಿನ್‌ರೆಬೆಲ್ಲೊ, ಡಾ| ಜೆರಾಲ್ಡ್ ಪಿಂಟೊ, ಶ್ರೀ ಎಲ್‌ ರೊಯ್‌ಕಿರಣ್‌ ಕ್ರಾಸ್ತೊ, ಶ್ರೀ ಜೆ.ಪಿ. ರೊಡ್ರಿಗಸ್, ಶ್ರೀ ಸಿ.ಜಿ.ಪಿಂಟೊ, ಶ್ರೀ ಸುಶಾಂತ್ ಸಲ್ಡಾನ್ಹಾ, ಶ್ರೀ ಆಲ್ವಿನ್ ಪಿ.ಮೊಂತೇರೊ, ಮಹಾಪ್ರಬಂಧಕರಾದ ಶ್ರೀ ಸುನಿಲ್ ಮಿನೇಜಸ್ ಹಾಜರಿದ್ದರು.ನಿರ್ದೇಶಕರಾದ ಶ್ರೀ ವಿನ್ಸೆಂಟ್ ಲಸ್ರಾದೊ ಸ್ವಾಗತಿಸಿ ಶಾಖಾ ವ್ಯವಸ್ಥಾಪಕ ಶ್ರೀ ಶಾರುನ್ ಪಿಂಟೊ ವಂದಿಸಿದರು.ಶ್ರೀ ಅವಿಲ್ ಮೋರಾಸ್ ನಿರೂಪಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಉಡುಪಿ ಮೂಲದ ಬೇಗಂ ಆಂಟಿಯಿಂದ ಪ್ರೊಫೆಸರ್‌ಗೆ ಹನಿಟ್ರ್ಯಾಪ್‌ ಮಾಡಿ 3 ಕೋಟಿ ರೂ. ಲೂಟಿ-ಮೂವರು ಅರೆಸ್ಟ್

Next Post

ಮಂಗಳೂರು: ನ್ಯಾಯಾಲಯದ ಆದೇಶ ಉಲ್ಲಂಘನೆ: ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್‌ಗೆ 90 ದಿನಗಳ ಕಾರಾಗೃಹ ವಾಸದ ಶಿಕ್ಷೆ

Related Posts

ಧರ್ಮಸ್ಥಳ: ಎಸ್.ಐ.ಟಿ. ಶೋಧ ಕಾರ್ಯಾಚರಣೆ ವೇಳೆ ಮತ್ತೆ ಕುತೂಹಲ ಮೂಡಿಸಿದ ಬಂಗ್ಲೆಗುಡ್ಡೆಯ ಜಾಡು, ಒಂಭತ್ತು ಸ್ಥಳಗಳಲ್ಲಿ ಮಾನವ ಮೂಳೆಗಳು ಪತ್ತೆ!
ಕರಾವಳಿ

ಧರ್ಮಸ್ಥಳ: ಎಸ್.ಐ.ಟಿ. ಶೋಧ ಕಾರ್ಯಾಚರಣೆ ವೇಳೆ ಮತ್ತೆ ಕುತೂಹಲ ಮೂಡಿಸಿದ ಬಂಗ್ಲೆಗುಡ್ಡೆಯ ಜಾಡು, ಒಂಭತ್ತು ಸ್ಥಳಗಳಲ್ಲಿ ಮಾನವ ಮೂಳೆಗಳು ಪತ್ತೆ!

September 17, 2025
60
ಕೆಎಂಸಿಯಂದ ವಿಶ್ವ ಹೃದಯ ದಿನ ಆಚರಣೆ – ಸೆ. 21ರಂದು ವಾಕಥಾನ್‌ ಆಯೋಜನೆ
ಕರಾವಳಿ

ಕೆಎಂಸಿಯಂದ ವಿಶ್ವ ಹೃದಯ ದಿನ ಆಚರಣೆ – ಸೆ. 21ರಂದು ವಾಕಥಾನ್‌ ಆಯೋಜನೆ

September 17, 2025
12
Next Post
ಮಂಗಳೂರು: ನ್ಯಾಯಾಲಯದ ಆದೇಶ ಉಲ್ಲಂಘನೆ: ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್‌ಗೆ 90 ದಿನಗಳ ಕಾರಾಗೃಹ ವಾಸದ ಶಿಕ್ಷೆ

ಮಂಗಳೂರು: ನ್ಯಾಯಾಲಯದ ಆದೇಶ ಉಲ್ಲಂಘನೆ: ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್‌ಗೆ 90 ದಿನಗಳ ಕಾರಾಗೃಹ ವಾಸದ ಶಿಕ್ಷೆ

Discussion about this post

Recent News

ಧರ್ಮಸ್ಥಳ: ಎಸ್.ಐ.ಟಿ. ಶೋಧ ಕಾರ್ಯಾಚರಣೆ ವೇಳೆ ಮತ್ತೆ ಕುತೂಹಲ ಮೂಡಿಸಿದ ಬಂಗ್ಲೆಗುಡ್ಡೆಯ ಜಾಡು, ಒಂಭತ್ತು ಸ್ಥಳಗಳಲ್ಲಿ ಮಾನವ ಮೂಳೆಗಳು ಪತ್ತೆ!

ಧರ್ಮಸ್ಥಳ: ಎಸ್.ಐ.ಟಿ. ಶೋಧ ಕಾರ್ಯಾಚರಣೆ ವೇಳೆ ಮತ್ತೆ ಕುತೂಹಲ ಮೂಡಿಸಿದ ಬಂಗ್ಲೆಗುಡ್ಡೆಯ ಜಾಡು, ಒಂಭತ್ತು ಸ್ಥಳಗಳಲ್ಲಿ ಮಾನವ ಮೂಳೆಗಳು ಪತ್ತೆ!

September 17, 2025
60
ಕೆಎಂಸಿಯಂದ ವಿಶ್ವ ಹೃದಯ ದಿನ ಆಚರಣೆ – ಸೆ. 21ರಂದು ವಾಕಥಾನ್‌ ಆಯೋಜನೆ

ಕೆಎಂಸಿಯಂದ ವಿಶ್ವ ಹೃದಯ ದಿನ ಆಚರಣೆ – ಸೆ. 21ರಂದು ವಾಕಥಾನ್‌ ಆಯೋಜನೆ

September 17, 2025
12
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಧರ್ಮಸ್ಥಳ: ಎಸ್.ಐ.ಟಿ. ಶೋಧ ಕಾರ್ಯಾಚರಣೆ ವೇಳೆ ಮತ್ತೆ ಕುತೂಹಲ ಮೂಡಿಸಿದ ಬಂಗ್ಲೆಗುಡ್ಡೆಯ ಜಾಡು, ಒಂಭತ್ತು ಸ್ಥಳಗಳಲ್ಲಿ ಮಾನವ ಮೂಳೆಗಳು ಪತ್ತೆ!

ಧರ್ಮಸ್ಥಳ: ಎಸ್.ಐ.ಟಿ. ಶೋಧ ಕಾರ್ಯಾಚರಣೆ ವೇಳೆ ಮತ್ತೆ ಕುತೂಹಲ ಮೂಡಿಸಿದ ಬಂಗ್ಲೆಗುಡ್ಡೆಯ ಜಾಡು, ಒಂಭತ್ತು ಸ್ಥಳಗಳಲ್ಲಿ ಮಾನವ ಮೂಳೆಗಳು ಪತ್ತೆ!

September 17, 2025
ಕೆಎಂಸಿಯಂದ ವಿಶ್ವ ಹೃದಯ ದಿನ ಆಚರಣೆ – ಸೆ. 21ರಂದು ವಾಕಥಾನ್‌ ಆಯೋಜನೆ

ಕೆಎಂಸಿಯಂದ ವಿಶ್ವ ಹೃದಯ ದಿನ ಆಚರಣೆ – ಸೆ. 21ರಂದು ವಾಕಥಾನ್‌ ಆಯೋಜನೆ

September 17, 2025
30 ಲೀಟರ್‌ ಎದೆ ಹಾಲು ದಾನ ಮಾಡಿದ ಹೃದಯವಂತಿಕೆ ಮೆರೆದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ

30 ಲೀಟರ್‌ ಎದೆ ಹಾಲು ದಾನ ಮಾಡಿದ ಹೃದಯವಂತಿಕೆ ಮೆರೆದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ

September 17, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d