ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಎರಡನೇ ಅವಧಿಗೆ ಅಸ್ಥಿತ್ವಕ್ಕೆ ಬಂದಿದ್ದು, ಹಳೆಯ ಸಂಪುಟದಲ್ಲಿ 24 ಸಚಿವರಿಗೆ ಖೋಕ್ ನೀಡಲಾಗಿದೆ.
ದಿನೇಶ್ ಶರ್ಮಾ, ಸತೀಶ್ ಮಹಾನ, ಅಶುತೋಷ್ ತಂಡನ್, ಶ್ರೀಕಾಂತ್ ಶರ್ಮಾ, ಸಿದ್ಧಾರ್ಥ್ ನಾಥ್ ಸಿಂಗ್ ಹಾಗೂ ಇನ್ನಿತರರಿಗೆ ಸಚಿವ ಸಂಪುಟದಿಂದ ಖೋಕ್ ನೀಡಲಾಗಿದೆ. ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ಬ್ರಿಜೇಶ್ ಪಾಠಕ್ ಅವರು 2.0 ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನೀಲಕಂಠ ತಿವಾರಿ ದತ್ತಿ ಹಾಗೂ ಪ್ರವಾಸೋದ್ಯಮ ಇಲಾಖೆಯನ್ನು ನಿರ್ವಹಿಸಿದ್ದರು. ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾದ ಕಾಶಿ ವಿಶ್ವನಾಥ ಕಾರಿಡಾರ್ ನೀಲಕಂಠ ತಿವಾರಿ ಅವರ ಉಸ್ತುವಾರಿಯಲ್ಲೇ ಪೂರ್ಣಗೊಂಡಿತ್ತು. ಈ ಹಿಂದೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿಯಾಗಿದ್ದ ದಿನೇಶ್ ಶರ್ಮಾ ಅವರನ್ನು ಈ ಬಾರಿ ಸಚಿವ ಸ್ಥಾನದಿಂದ ಕೈಬಿಡಲಾಗಿದೆ. ಅವರ ಬದಲು ಬ್ರಿಜೇಶ್ ಪಾಠಕ್ ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.
Discussion about this post