ಉಳ್ಳಾಲ: ಅಪರಿಮಿತ ವೇಗದಿಂದ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚತುಷ್ಪಥ ರಸ್ತೆಯ ಡಿವೈಡರ್ನಿಂದ ದಾಟಿ ಇನ್ನೊಂದು ಬದಿಯ ರಸ್ತೆಯಲ್ಲಿ ಚಲಿಸಿದ್ದು, ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಣ್ಣ,ಪುಟ್ಟ ಗಾಯದಿಂದ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಕಾಪಿಕಾಡ್ ಬಳಿ ಶನಿವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.
ಅಪರಿಮಿತ ವೇಗದಲ್ಲಿ ತೊಕ್ಕೊಟ್ಟಿನಿಂದ ತಲಪಾಡಿಯ ಕಡೆ ಧಾವಿಸುತ್ತಿದ್ದ ಕಾರೊಂದು ರಾ.ಹೆ.66 ರ ಓವರ್ ಬ್ರಿಡ್ಜ್-ಕಾಪಿಕಾಡು ನಡುವಿನ ಡಿವೈಡರ್ ನಿಂದ ನೆಗೆದಿದೆ.ಈ ವೇಳೆ ಕೊಲ್ಯದಿಂದ ತೊಕ್ಕೊಟ್ಟು ಕಡೆ ಸಾಗುತ್ತಿದ್ದ ಸ್ಕೂಟರ್ಗೆ ಕಾರು ಢಿಕ್ಕಿ ಹೊಡೆದಿದ್ದು ಚಾಲಕ ಪವಾಡಸದೃಶವಾಗಿ ಸಣ್ಣ,ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಬಲ ಭಾಗದ ರಸ್ತೆಯ ಬದಿಯ ಮೋರಿಯಲ್ಲಿ ಕಾರು ನಿಂತಿದ್ದು ಕಾರಿನ ಚಾಲಕ ಮತ್ತ ಇನ್ನೊರ್ವ ಪ್ರಯಾಣಿಕ ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಬೆಳಗ್ಗಿನ ಹೊತ್ತಿಗೆ ಕಾಪಿಕಾಡು ಹೆದ್ದಾರಿಯಲ್ಲಿ ವಾಹನ ದಟ್ಟನೆ ಹೆಚ್ಚಿರುತ್ತದೆ,ಅಪಘಾತದ ಸಂದರ್ಭದಲ್ಲಿ ಸ್ಕೂಟರ್ ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಲ್ಲದ ಕಾರಣ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Discussion about this post