ಮಂಗಳೂರು, ನ.30: ನಗರದ ಬರ್ಕೆ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಎಂಟು ಮಂದಿ ತಂಡದಿಂದ ಯುವಕನಿಗೆ ಮಾರಣಾಂತಿಕ ದಾಳಿಯಾಗಿದೆ.
ಶ್ರವಣ್ (22) ಎಂಬ ಯುವಕನ ಮೇಲೆ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಕಡಿದಿದ್ದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಭಾನುವಾರ ರಾತ್ರಿ ಘಟನೆ ನಡೆದಿದ್ದು ಬೋಳೂರು ಮತ್ತು ಅಳಕೆ ಗ್ಯಾಂಗ್ ಸದಸ್ಯರ ನಡುವಿನ ಕಾಳಗದಲ್ಲಿ ತಲವಾರು ದಾಳಿ ನಡೆದಿದೆ. ಒಂದು ವರ್ಷದ ಹಿಂದೆ ಬೋಳೂರಿನಲ್ಲಿ ಇಂದ್ರಜಿತ್ ಎಂಬ ಯುವಕನ ಕೊಲೆ ನಡೆದಿತ್ತು. ಬೋಳೂರಿನ ತಲ್ವಾರ್ ಜಗ್ಗ ಮತ್ತು ಸಹಚರರು ಕೃತ್ಯ ಎಸಗಿದ್ದರು. ಇದರಲ್ಲಿ ಪ್ರಮುಖ ಆರೋಪಿಯ ಸೋದರನಾಗಿರುವ ಅಂಕಿತ್ ಜೊತೆಗೆ ತಿರುಗಾಡುತ್ತಿದ್ದ ಶ್ರವಣ್ ಮೇಲೆ ಭಾನುವಾರ ರಾತ್ರಿ ಅಳಕೆ ಗ್ಯಾಂಗ್ ಸದಸ್ಯರು ರಿವೇಂಜ್ ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಎಂಟು ಮಂದಿ ಸೇರಿ ಈ ಕೃತ್ಯ ನಡೆಸಿದ್ದಾರೆ ಎನ್ನುವ ಮಾಹಿತಿಗಳಿವೆ. ಆರಂಭದಲ್ಲಿ ಕೊಲೆಯತ್ನ ಕೃತ್ಯ ಎಂದು ತಿಳಿದು ಪೊಲೀಸರು ಪ್ರಕರಣ ದಾಖಲಿಸಲಿಸಿದ್ದರು. ಆಬಳಿಕ ಇದೊಂದು ಗ್ಯಾಂಗ್ ವಾರ್ ಎನ್ನೋದು ತಿಳಿದುಬಂದಿದೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post