ಮಂಗಳೂರು ಸೆಪ್ಟೆಂಬರ್ 01: ವಿಷಕಾರಿ ಹಾವಿನ ಕಡಿತಕ್ಕೊಳಗಾಗಿ ಯುವಕನೊಬ್ಬ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನಲ್ಲಿ ಆ 31 ರಂದು ನಡೆದಿದೆ . ಬಡಗಕಜೆಕಾರು ಗ್ರಾಮದ ಪಾಂಡವರ ಕಲ್ಲು ನಿವಾಸಿ ಆಸಿದ್ ( 26) ಮೃತಪಟ್ಟ ಯುವಕ
ಕೂಲಿ ಕಾರ್ಮಿಕನಾಗಿದ್ದ ಆಸಿದ್ ವಾಮದಪದವು ಬಳಿ ಮಂಗಳವಾರ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಾವಿನ ಕಡಿತಕ್ಕೊಳಗಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ
ಪಾಂಡವರ ಕಲ್ಲು ಉಸ್ಮಾನ್ ರವರ ಮೂವರು ಪುತ್ರರ ಪೈಕಿ ಇವರು ಕೊನೆಯವರು . ಇವರು ಅವಿವಾಹಿತರಾಗಿದ್ದರು.