ಮಂಗಳೂರು, ಸೆ. 01: ಲೋನ್ ಆ್ಯಪ್ ಕಿರುಕುಳಕ್ಕೆ ರಾಜ್ಯ ಮಟ್ಟದ ಪ್ರತಿಭಾನ್ವಿತ ಕಬ್ಬಡಿ ಆಟಗಾರ ಬಲಿಯಾಗಿದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ. ಲೋನ್ ಆ್ಯಪ್ ಸಿಬ್ಬಂದಿಯ ನಿರಂತರ ಕಿರುಕುಳ ಮತ್ತು ಬೆದರಿಕೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ನಿವಾಸಿ ಸ್ವರಾಜ್(24) ಸಾವಿಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ.
ಸ್ವರಾಜದ ವಾಟ್ಸಾಪ್ನಲ್ಲಿ ಅಕ್ಕನ ಮಗಳ ಫೋಟೊ ಹಾಕಿದ್ದು, ಈ ಫೋಟೋವನ್ನು ‘Baby for sale’ ಅಂತಾ ಎಡಿಟ್ ಮಾಡಿ ಲೋನ್ ಆ್ಯಪ್ ಸಿಬ್ಬಂದಿ ಸ್ವರಾಜ್ನ ಸ್ನೇಹಿತರು, ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಫಾರ್ವರ್ಡ್ ಮಾಡಿದ್ದಾರೆ. ಸ್ವರಾಜ್ನ ಕಾಂಟಾಕ್ಟ್ ಲಿಸ್ಟ್ ವೀವ್ ಮಾಡುತ್ತಿದ್ದ ಆಪ್ ಮಾಡಿರುವ ಆ್ಯಪ್ ಸಿಬ್ಬಂದಿ ಸ್ವರಾಜ್ನ ಸಾಲ ಬಾಕಿ ಇದೆ ಎಂದೂ ಸ್ನೇಹಿತರಿಗೆ ಮೆಸೇಜ್ ಕಳುಹಿಸಿದ್ದಾರೆ.
ಲೋನ್ ಆ್ಯಪ್ ಸಿಬ್ಬಂದಿಯ ನಿರಂತರ ಕಿರುಕುಳ ಬೆದರಿಕೆ ತಾಳಲಾರದೆ ಸ್ವರಾಜ್ ಆಗಸ್ಟ್ 31 ರಂದು ತಮ್ಮ ಹಳೆಯ ಮನೆಯ ಬಚ್ಚಲು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲೋನ್ ಆ್ಯಪ್ ಸಿಬ್ಬಂದಿ ಆಗಸ್ಟ್ 31ರ ಮಧ್ಯಾಹ್ನ 2 ಗಂಟೆಗೆ ಡೆಡ್ ಲೈನ್ ನೀಡಿದ್ದು. ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯದ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದು ಲೋನ್ ಆ್ಯಪ್ ಕಿರುಕುಳದಿಂದಲೇ ಯುವಕ ಸಾವಿಗೆ ಶರಣಾದ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
Discussion about this post