ಉಳ್ಳಾಲ: ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಡಿಕ್ಕಿಯಾಗಿ ಒಬ್ಬ ಮೀನುಗಾರ ನಾಪತ್ತೆಯಾಗಿದ್ದು, 10 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಉಳ್ಳಾಲ ಸಮೀಪದ ಸಮುದ್ರ ಮಧ್ಯೆ ಕೆಲ ವರ್ಷಗಳ ಹಿಂದೆ ಮುಳುಗಿದ್ದ ಹಡಗಿಗೆ, ಈ ಮೀನುಗಾರಿಕೆ ಬೋಟ್ ಡಿಕ್ಕಿ ಹೊಡೆದು, ನೀರಿನಲ್ಲಿ ಮಗುಚಿ ಬಿದ್ದಿದೆ. ಬೋಟ್ನಲ್ಲಿ 11 ಕಾರ್ಮಿಕರಿದ್ದು, ಕೂಡಲೇ ಅವರನ್ನು ಹಿಂದಿನಿಂದ ಬರುತ್ತಿದ್ದ ಬೋಟ್ನವರು ರಕ್ಷಣೆ ಮಾಡಲು ಯತ್ನಿಸಿದ್ದಾರೆ. 10 ಮಂದಿ ಈಜಿ, ಇನ್ನೊಂದು ಬೋಟ್ನ ಮೂಲಕ ಜೀವ ಉಳಿಸಿಕೊಂಡಿದ್ದಾರೆ. ತಮಿಳುನಾಡಿನ ಕಾರ್ಮಿಕ ನೀರಿನಲ್ಲಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ತಮಿಳುನಾಡು ಮೂಲದ ಒಬ್ಬ ಕಾರ್ಮಿಕ ನಾಪತ್ತೆಯಾಗಿದ್ದಾನೆ ಎನ್ನಲಾಗುತ್ತಿದೆ. ಆದ್ಯ ಹೆಸರಿನ ಬೋಟ್ ಆಗಿದ್ದು, ಅದರ ಮಾಲಕ ಉಳ್ಳಾಲ ಮೊಗವೀರಪಟ್ಣದ ಭಾನುಪ್ರಕಾಶ್ ಎಂಬವರಾಗಿದ್ದಾರೆ. ಹಲವು ವರ್ಷಗಳ ಹಿಂದೆ ಮುಳುಗಿದ್ದ ಹಡಗನ್ನು ಇದುವರೆಗೆ ತೆರವುಗೊಳಿಸಿಲ್ಲ. ಹಡಗು ಇರುವ ಬಗ್ಗೆ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ. ಇದರಿಂದಾಗಿ ಮೀನುಗಾರಿಕಾ ಬೋಟ್ಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಮೀನುಗಾರರು ದೂರಿದ್ದಾರೆ.