• About us
  • Contact us
  • Disclaimer
Wednesday, July 9, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಎಲಾನ್ ಮಸ್ಕ್​ ಒಡೆತನದ ಸ್ಟಾರ್​ಲಿಂಕ್​ ಜೊತೆ ಏರ್​ಟೆಲ್​ ಒಪ್ಪಂದ : ಭಾರತದಲ್ಲಿ ಇಂಟರ್​ನೆಟ್​ ಸೇವೆಗೆ ಸಿಗಲಿದೆ ಮತ್ತಷ್ಟು ವೇಗ

Coastal Times by Coastal Times
March 13, 2025
in ರಾಷ್ಟ್ರೀಯ ಸುದ್ದಿ
ಎಲಾನ್ ಮಸ್ಕ್​ ಒಡೆತನದ ಸ್ಟಾರ್​ಲಿಂಕ್​ ಜೊತೆ ಏರ್​ಟೆಲ್​ ಒಪ್ಪಂದ : ಭಾರತದಲ್ಲಿ ಇಂಟರ್​ನೆಟ್​ ಸೇವೆಗೆ ಸಿಗಲಿದೆ ಮತ್ತಷ್ಟು ವೇಗ
25
VIEWS
WhatsappTelegramShare on FacebookShare on Twitter

ನವದೆಹಲಿ: ಅಮೆರಿಕದ ಇಂಟರ್​ನೆಟ್​ ದೈತ್ಯ ಸ್ಟಾರ್​ಲಿಂಕ್​ ಶೀಘ್ರದಲ್ಲೇ ಭಾರತದ ಗ್ರಾಹಕರಿಗೂ ಸೇವೆ ನೀಡುವ ಕಾಲ ಸಮೀಪಿಸುತ್ತಿದೆ. ಇಂಟರ್​ನೆಟ್‌ಗೆ ವೇಗ ನೀಡುವ ಸಂಬಂಧ ಭಾರತದ ಟೆಲಿಕಾಂ ಕಂಪನಿ ಭಾರ್ತಿ ಏರ್​ಟೆಲ್​ ಎಲಾನ್​ ಮಸ್ಕ್​ ಅವರ ಸ್ಟಾರ್​ಲಿಂಕ್​ ಜೊತೆಗೆ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಸರ್ಕಾರದ ಅನುಮತಿಯೊಂದೇ ಬಾಕಿ ಇದೆ.

​ಭಾರತದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್​ಟೆಲ್​, “ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಭಾರತಕ್ಕೆ ಸ್ಟಾರ್‌ಲಿಂಕ್ ತರಲು ಸ್ಪೇಸ್‌ಎಕ್ಸ್‌ನೊಂದಿಗಿನ ಸಹಯೋಗ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ. ಇದು ಎಲ್ಲರಿಗೂ ತಡೆರಹಿತ ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡುವಲ್ಲಿ ಒಂದು ಪರಿವರ್ತಕ ಹೆಜ್ಜೆ. ಆದರೆ, ಸ್ಟಾರ್​ಲಿಂಕ್​ ಭಾರತದಲ್ಲಿ ಕಾರ್ಯನಿರ್ವಹಿಸುವ ನಿರ್ಧಾರ ಸರ್ಕಾರದ ಅನುಮೋದನೆಯ ಮೇಲೆ ಅವಲಂಬಿತವಾಗಿದೆ” ಎಂದಿದೆ.

“ಭಾರತದ 140 ಕೋಟಿ ಜನರಲ್ಲಿ ಕನಿಷ್ಠ ಶೇ.40ರಷ್ಟು ಜನರು ಇನ್ನೂ ಕೂಡ ಇಂಟರ್​ನೆಟ್​ ಸೌಲಭ್ಯ ಪಡೆದಿಲ್ಲ. ಸ್ಯಾಟಲೈಟ್​ ಬ್ರಾಂಡ್​ಬಾಂಡ್​ಗಳು ಈ ಅಂತರವನ್ನು ನೀಗಿಸಬೇಕಿದೆ. ವಿಶೇಷವಾಗಿ, ಭಾರತದ ಕುಗ್ರಾಮಗಳು ಮತ್ತು ಬೆಟ್ಟಗಾಡು ಪ್ರದೇಶದಲ್ಲಿ ಅವರಿಗೆ ಸೌಲಭ್ಯ ಬೇಕಿದೆ. ಮಸ್ಕ್​ ಅವರ ಸ್ಟಾರ್‌ ಲಿಂಕ್​ ಭೂಮಿಯ ಸುತ್ತ ಕನಿಷ್ಠ 6,900 ಸಕ್ರಿಯ ಸ್ಯಾಟಲೈಟ್‌ಗಳನ್ನು​ ಹೊಂದಿದ್ದು, ಈ ಹಿಂದೆ ಇಂಟರ್​ನೆಟ್​ ಸಿಗುವುದಿಲ್ಲ ಎನ್ನುತ್ತಿದ್ದ ಸ್ಥಳಗಳೂ ಸೇರಿದಂತೆ ಎಲ್ಲೆಡೆ ಕಡಿಮೆ ಸುಪ್ತ ಬ್ರಾಂಡ್​ಬ್ಯಾಂಡ್​ ಹೊಂದಿದೆ” ಎಂದು ಮಾಹಿತಿ ನೀಡಿದೆ.

ಜಗತ್ತಿನ ಅತಿದೊಡ್ಡ ಮಾರುಕಟ್ಟೆಗೆ ಸ್ಟಾರ್​ಲಿಂಕ್​ ಪ್ರವೇಶಕ್ಕಾಗಿ ಮಸ್ಕ್​​ ಕೂಡಾ ಬಹುದಿನಗಳಿಂದ ಕಾಯುತ್ತಿದ್ದಾರೆ. ಆದರೆ ದೇಶದ ನಿಯಂತ್ರಕ ನಿಯಮಗಳ ಸವಾಲುಗಳು, ದೇಶಿಯ ಟೆಲಿಕಾಂ ದೈತ್ಯ ಕಂಪನಿಗಳ ವಿರೋಧ ಹಾಗೂ ಭದ್ರತಾ ವಿಚಾರಗಳು ತೊಡಕಾಗಿದ್ದವು. ಭಾರತ ಪ್ರವೇಶಕ್ಕೆ ಸ್ಟಾರ್​ಲಿಂಕ್​ ಇನ್ನೂ ಭದ್ರತಾ ನಿಯಮಗಳನ್ನು ಪೂರ್ಣಗೊಳಿಸಿಲ್ಲ. ಇದು ಪೂರ್ಣಗೊಂಡ ನಂತರವೇ ಸ್ಯಾಟಲೈಟ್​ ಸಂಪರ್ಕ ಸೇವೆಗೆ ಲೈಸೆನ್ಸ್​ ನೀಡಲಾಗುವುದು. ಇದಕ್ಕೆ ಸಂಸ್ಥೆ ಅಗತ್ಯ ಕಾನೂನು ಕ್ರಮಗಳನ್ನು ಮುಗಿಸಬೇಕು ಎಂದು ಕಳೆದ ನವೆಂಬರ್​ನಲ್ಲಿ ಭಾರತದ ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸ್ಕಿಂದಿಯಾ ಹೇಳಿದ್ದರು.

ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕಕ್ಕೆ ಪ್ರವಾಸ ಕೈಗೊಂಡ ವೇಳೆ ಮಸ್ಕ್​ ಅವರನ್ನು ಭೇಟಿಯಾಗಿ ಸ್ಪೇಸ್​ ಎಕ್ಸ್​, ಟೆಸ್ಲಾ ಭಾರತ ಪ್ರವೇಶ ಹಾಗು ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೇ ಈ ಒಪ್ಪಂದವೂ ನಡೆದಿದೆ.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ಮಾಡಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್

Next Post

ಪ್ಯಾಟ್ರಿಕ್ ಮೊರಾಸ್, ಜೊಯೆಲ್ ಪಿರೇರಾ, ಸೊಬೀನಾ ಮೊತೇಶ್ ಕಾಬ್ರೇಕರ್ ಗೆ 2024ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

Related Posts

57 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಜೆಂಟೀನಾಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ
ರಾಜಕೀಯ

57 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಜೆಂಟೀನಾಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ

July 5, 2025
35
ಸಾವಿರ ವರ್ಷಗಳ ಇತಿಹಾಸ ಇರುವ ಕೇರಳದ ಕೊಟ್ಟಿಯೂರು ಶಿವ ದೇಗುಲ ವರ್ಷದಲ್ಲಿ 28 ದಿನ ಮಾತ್ರ ತೆರೆದಿರುತ್ತದೆ- ದೇವಾಲಯದ ವಿಶೇಷತೆ ಏನು?
ರಾಷ್ಟ್ರೀಯ ಸುದ್ದಿ

ಸಾವಿರ ವರ್ಷಗಳ ಇತಿಹಾಸ ಇರುವ ಕೇರಳದ ಕೊಟ್ಟಿಯೂರು ಶಿವ ದೇಗುಲ ವರ್ಷದಲ್ಲಿ 28 ದಿನ ಮಾತ್ರ ತೆರೆದಿರುತ್ತದೆ- ದೇವಾಲಯದ ವಿಶೇಷತೆ ಏನು?

June 22, 2025
118
Next Post
ಪ್ಯಾಟ್ರಿಕ್ ಮೊರಾಸ್, ಜೊಯೆಲ್ ಪಿರೇರಾ, ಸೊಬೀನಾ ಮೊತೇಶ್ ಕಾಬ್ರೇಕರ್ ಗೆ 2024ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

ಪ್ಯಾಟ್ರಿಕ್ ಮೊರಾಸ್, ಜೊಯೆಲ್ ಪಿರೇರಾ, ಸೊಬೀನಾ ಮೊತೇಶ್ ಕಾಬ್ರೇಕರ್ ಗೆ 2024ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

Discussion about this post

Recent News

ಯೆಮೆನ್ ಪ್ರಜೆಯ ಕೊಲೆ ಪ್ರಕರಣ: ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಯೆಮೆನ್ ನಲ್ಲಿ ಗಲ್ಲು ಶಿಕ್ಷೆ

ಯೆಮೆನ್ ಪ್ರಜೆಯ ಕೊಲೆ ಪ್ರಕರಣ: ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಯೆಮೆನ್ ನಲ್ಲಿ ಗಲ್ಲು ಶಿಕ್ಷೆ

July 9, 2025
139
ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

July 8, 2025
134
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಯೆಮೆನ್ ಪ್ರಜೆಯ ಕೊಲೆ ಪ್ರಕರಣ: ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಯೆಮೆನ್ ನಲ್ಲಿ ಗಲ್ಲು ಶಿಕ್ಷೆ

ಯೆಮೆನ್ ಪ್ರಜೆಯ ಕೊಲೆ ಪ್ರಕರಣ: ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಯೆಮೆನ್ ನಲ್ಲಿ ಗಲ್ಲು ಶಿಕ್ಷೆ

July 9, 2025
ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

ಬಂಟ್ವಾಳ: ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

July 8, 2025
ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

ಉಳ್ಳಾಲ: ಬಾಲಕಿಯ ಅಪಹರಣ ಪ್ರಕರಣ, ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

July 8, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d