ಮಂಗಳೂರು, ಆ.15: ಮಂಗಳೂರಿನ ಹೆಸರಾಂತ ಸಿಟಿ ಸೆಂಟರ್ ಮಾಲ್ ನಲ್ಲಿರುವ ಕೆಎಫ್ ಸಿ ಚಿಕನ್ ಸೆಂಟರ್ ನಲ್ಲಿ ಕೊಳೆತ ಮಾಂಸದ ಫುಡ್ ಐಟಂ ಕೊಟ್ಟಿದ್ದಾರೆಂಬ ದೂರಿನ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಆರು ತಿಂಗಳ ಹಿಂದೆ ಪ್ಯಾಕ್ ಮಾಡಿಟ್ಟಿರುವ ಕೊಳೆತ ಚಿಕನ್ ಮಾಂಸವನ್ನು ಪತ್ತೆ ಮಾಡಿದ್ದಾರೆ.
ಮಾಜಿ ಮೇಯರ್ ಮತ್ತು ಬಿಜೆಪಿ ನಾಯಕಿ ಕವಿತಾ ಸನಿಲ್ ತಮ್ಮ ಮಗುವಿಗೆ ಸ್ವಿಗ್ಗಿ ಮೂಲಕ ಪೆರಿ-ಪೆರಿ ಚಿಕನ್ ಆರ್ಡರ್ ಮಾಡಿದ್ದರು. ಕೆಎಫ್ಸಿ ಪಾರ್ಸೆಲ್ ಬಂದ ನಂತರ, ಅವರ 10 ವರ್ಷದ ಮಗು ಕೋಳಿಯನ್ನು ತಿನ್ನುತ್ತಿದ್ದಾಗ ಮಾಂಸ ಕಪ್ಪು ಬಣ್ಣಕ್ಕೆ ತಿರುಗಿರುವುದನ್ನು ಕಂಡು ಬಂತು. ಅದು ಕೆಟ್ಟ ವಾಸನೆಯನ್ನು ಹೊಂದಿತ್ತು ಎಂದು ವರದಿಯಾಗಿದೆ.


ಬಿಲ್ ಹೊತ್ತುಕೊಂಡು ಕವಿತಾ, ತಕ್ಷಣ ಸಿಟಿ ಸೆಂಟರ್ ಮಾಲ್ನಲ್ಲಿರುವ ಕೆಎಫ್ಸಿ ಔಟ್ಲೆಟ್ಗೆ ಹೋಗಿ ಡಿಎಚ್ಒ ಮತ್ತು ಇತರ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದಾರೆ. ಅವರು ಈ ವಿಷಯವನ್ನು ಉಸ್ತುವಾರಿ ಸಚಿವ ಯುಟಿ ಖಾದರ್ ಅವರ ಗಮನಕ್ಕೂ ತಂದರು. ತಕ್ಷಣ ಅವರು ದ.ಕ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ರ ಗಮನಕ್ಕೆ ತಂದಿದ್ದಾರೆ. ಸಚಿವರ ಸೂಚನೆಯಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ಮತ್ತು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ಜಂಟಿಯಾಗಿ ಕೆಎಫ್ಸಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.



ಒಳಗಡೆ ಹೊಕ್ಕು ಪರಿಶೀಲನೆ ನಡೆಸಿದಾಗ ಐದಾರು ತಿಂಗಳ ಹಿಂದೆ ಪ್ಯಾಕ್ ಮಾಡಿರುವ ಚಿಕನ್ ಪತ್ತೆಯಾಗಿದೆ. ಆರಂಭದಲ್ಲಿ ಸಾರಿ ಎನ್ನುತ್ತಲೇ ಆ ರೀತಿ ಏನೂ ಇಲ್ಲ, ಒಂದು ಪಾರ್ಸೆಲ್ ಮಾತ್ರ ಆ ರೀತಿಯಾಗಿದೆ ಎಂದು ಸಮಜಾಯಿಷಿ ಕೊಡುತ್ತಿದ್ದವರು ಬಳಿಕ ಸಪ್ಪಗಾಗಿದ್ದಾರೆ. ಒಳಗಡೆ ಫ್ರೀಜರ್ ನಲ್ಲಿ ಮಾರ್ಚ್ ತಿಂಗಳಲ್ಲಿ ಪ್ಯಾಕ್ ಆಗಿದ್ದ ಚಿಕನ್ ಗಟ್ಟಿಯಾಗಿರುವುದು ಪತ್ತೆಯಾಗಿದೆ. ಅಲ್ಲದೆ, ಒಳಗೆ ಗಬ್ಬು ವಾಸನೆಯೂ ಬರ್ತಾ ಇತ್ತು. ಇದನ್ನು ನೋಡಿದ ಅಧಿಕಾರಿಗಳು ಮತ್ತು ಸಾರ್ವಜನಿಕರು ಗಾಬರಿಗೊಂಡಿದ್ದು ಎಲ್ಲವನ್ನೂ ಹೊರತೆಗೆಸಿ ತಪಾಸಣೆ ನಡೆಸಿದ್ದಾರೆ.
3 ಮಾದರಿಗಳ ಸಂಗ್ರಹ – 4 ತಿಂಗಳ ಹಳೆಯ ಪ್ಯಾಕೆಟ್ಗಳು ಪತ್ತೆ: ತಪಾಸಣೆ ವೇಳೆ ಮೇಲ್ನೋಟಕ್ಕೆ ಚಿಕನ್ ಹಾಳಾಗಿರುವುದು ಹಾಗೂ ದುರ್ವಾಸನೆ ಬರುತ್ತಿರುವುದು ಕಂಡುಬಂದಿದೆ. ಸ್ಥಳದಿಂದ ಫ್ರೋಜನ್ ಲೆಗ್ ಪೀಸ್ ಚಿಕನ್ ಮಾದರಿ, ತಾಪಮಾನ ಸಮತೋಲನಗೊಳಿಸಿದ ಚಿಕನ್, ಮಸಾಲೆ ಬೆರೆಸಿದ ಚಿಕನ್ ಸೇರಿದಂತೆ 3 ಬಗೆಯ ಚಿಕನ್ ಸ್ಯಾಂಪಲ್ಗಳು ಹಾಗೂ ಚಿಕನ್ ಕರಿಯಲು ಬಳಸುತ್ತಿದ್ದ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟ ಮತ್ತು ಬ್ಯಾಕ್ಟೀರಿಯಾ ಪರೀಕ್ಷೆಗಾಗಿ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಡಾ.ಪ್ರವೀಣ್ ಕುಮಾರ್ ಸಿ.ಹೆಚ್. ತಿಳಿಸಿದ್ದಾರೆ.
ಕೆಎಫ್ ಸಿಯಲ್ಲಿ ಬೇರೆ ಬೇರೆ ಮಾದರಿಯ ಚಿಕನ್ ಐಟಂಗಳಿಗೆ ವಿಶೇಷ ಆಫರ್ ಗಳಿದ್ದು ಚಿಕನ್ ತಿನ್ನುವುದಕ್ಕಾಗಿಯೇ ಸಾವಿರಾರು ಜನರು ಸಿಟಿ ಸೆಂಟರ್ ಬರುತ್ತಾರೆ. ಆದರೆ ಇಂಥ ಹೆಸರಾಂತ ಫುಡ್ ಕೌಂಟರ್ ನಲ್ಲಿ ಚಿಕನ್ ಪತ್ತೆಯಾಗಿರುವುದು ಮಂಗಳೂರಿನಲ್ಲೂ ಕೊಳೆತ ಚಿಕನ್ ತಿನ್ನಿಸುವವವರಿದ್ದಾರೆಂಬುದು ಖಾತ್ರಿಯಾಗಿದೆ. ಕವಿತಾ ಸನಿಲ್ ಮೂರು ಗಂಟೆಗಳ ಕಾಲ ಅಲ್ಲಿಯೇ ಇದ್ದು ಅಧಿಕಾರಿಗಳ ಮೂಲಕ ಪರಿಶೀಲನೆಗೆ ಒಳಪಡಿಸಿದ್ದಾರೆ.
ನೊಟೀಸ್ ಜಾರಿ, ಡಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು: ನಿಯಮಗಳ ಪ್ರಕಾರ ಸ್ವಚ್ಛತೆ ಕಾಪಾಡಲು ಹಾಗೂ ಹಳಸಿದ ಪದಾರ್ಥಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಮಳಿಗೆಗೆ ಅಧಿಕೃತ ನೊಟೀಸ್ ಜಾರಿ ಮಾಡಲಾಗುತ್ತಿದ್ದು, ಅವರ ಉತ್ತರ ಹಾಗೂ ಲ್ಯಾಬ್ ವರದಿ ಬಂದ ಬಳಿಕ ಜಿಲ್ಲಾಧಿಕಾರಿಗಳ (ಅಪರ ಜಿಲ್ಲಾಧಿಕಾರಿ) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಡಾ.ಪ್ರವೀಣ್ ಕುಮಾರ್ ಸಿ.ಹೆಚ್. ವಿವರಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post