ಮಂಗಳೂರು, ನ 03 : ಪ್ರೀತಿಸುತ್ತಿದ್ದ ಹುಡುಗಿ, ತನ್ನೊಂದಿಗೆ ಸುತ್ತಾಡಲು ಬಂದಿಲ್ಲ ಎಂದು ಕೋಪಗೊಂಡ ಯುವಕನೊಬ್ಬ ಪಿಜಿ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲೆಸೆದು ಹಾನಿಗೊಳಿಸಿದ ವಿಚಿತ್ರ ಘಟನೆ ನಗರ ಬೆಂದೂರು ಬಳಿ ನಡೆದಿದೆ.
ಆರೋಪಿ ಸುಳ್ಯದ ವಿವೇಕ್ (18) ಕಲ್ಲೆಸೆದ ಆರೋಪಿ . ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಈತ ಪಿಜಿಯಲ್ಲಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ನಗರದ ಸಂತ ಆಯಗ್ನೆಸ್ ಕಾಲೇಜು ಸಮೀಪದ ಪಿಜಿಯಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಗುರುವಾರ ಸಂಜೆ ಆಕೆಯನ್ನು ಯುವಕನು ಸುತ್ತಾಡಲು ಕರೆದಿದ್ದ. ಆದರೆ ಆಕೆ ಅದಕ್ಕೆ ಒಪ್ಪದ ಕಾರಣ ಸಿಟ್ಟಾದ ವಿವೇಕ್ ಆಕೆ ಕೆಲಸ ಮಾಡುತ್ತಿದ್ದ ಪಿಜಿ ಹಾಸ್ಟೆಲ್ ಕಟ್ಟಡದ ಗಾಜುಗಳಿಗೆ ಕಲ್ಲೆಸೆದ ಎಂದು ಆರೋಪಿಸಲಾಗಿದೆ. ಕಲ್ಲೆಸೆತದಿಂದ ಕಟ್ಟಡದ ಗಾಜು ಪುಡಿಯಾಗಿದ್ದರಿಂದ ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆ ಎಂದು ತಿಳಿದುಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post