ವಿಟ್ಲ ಜ.7 : ಮದುಮಗ ಕೊರಗಜ್ಜನ ವೇಷಧರಿಸಿ ಕುಣಿದಿದ್ದಾನೆಂದು ಆರೋಪಿಸಿ ವಿಟ್ಲ ಪ್ರಖಂಡ ಭಜರಂಗದಳ ಮತ್ತು ವಿ.ಎಚ್ ಪಿ ಕಾರ್ಯಕರ್ತರು ಮದುಮಗಳ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ.
ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ಮನೆಯತ್ತ ಬಂದ ಕಾರ್ಯಕರ್ತರು ದಿಕ್ಕಾರ ಕೂಗಿದರು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ
ಉಪ್ಪಳದ ವರನಿಗೆ ಸಾಲೆತ್ತೂರಿನಿಂದ ನಿನ್ನೆ ವಿವಾಹ ವಾಗಿತ್ತು. ರಾತ್ರಿ ವರನ ಸಂಗಡಿಗರು ತಾಳ ಕಾರ್ಯಕ್ರಮ ಕ್ಕೆ ಬಂದು ಸಾಲೆತ್ತೂರಿನಲ್ಲಿ ತುಳುನಾಡಿನ ಜನರು ಆರಾಧಿಸುವ ಕೊರಗಜ್ಜನ ಮಾದರಿಯಲ್ಲಿ ವೇಷ ತೊಟ್ಟು ಮದುಮಗನೊಬ್ಬ ಮದುವೆ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ದರು. ಈ ಕುರಿತ ವೈರಲ್ ವಿಡಿಯೋ ವಿವಾದ ಸೃಷ್ಟಿಸಿತ್ತು.
Discussion about this post