ಮಂಗಳೂರು, ಆಗಸ್ಟ್ 6: ಕೆಥೋಲಿಕ್ ಅಸೋಸಿಯೇಶ್ ಸೌತ್ ಕೆನರಾ (ಸಿಎಎಸ್ಕೆ) ವತಿಯಿಂದ ಮಂಗಳೂರಿನ ಬಿಷಪ್ ಹೌಸ್ ನಲ್ಲಿ 141 ಬಡ ವಿದ್ಯಾರ್ಥಿಗಳಿಗೆ 17.5 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬಿಷಪ್ ಡಾ.ಪೀಟಲ್ ಪೌಲ್ ಸಲ್ದಾನಾ ವಿದ್ಯಾರ್ಥಿಗಳಿಗೆ ನಿಧಿಯನ್ನು ವಿತರಣೆ ಮಾಡಿದರು. ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ದತ್ತಿನಿಧಿ ಪ್ರತಿಷ್ಠಾನಗಳ ವತಿಯಿಂದ 111 ವಿದ್ಯಾರ್ಥಿಗಳಿಗೆ 11.20 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಇದಲ್ಲದೆ, ಕೋವಿಡ್ ಕಾರಣದಿಂದ ಹೆತ್ತವರನ್ನು ಕಳಕೊಂಡ 30 ವಿದ್ಯಾರ್ಥಿಗಳನ್ನು ಆಯ್ದು 6.20 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.


ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ.ಪೀಟರ್ ಪೌಲ್ ಸಲ್ಡಾನ್ಹಾ, ಕಳೆದ 108 ವರ್ಷಗಳಿಂದ ಜಾತಿ, ಮತ, ಧರ್ಮದ ಭೇದವಿಲ್ಲದೆ ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ (ಸಿಎಎಸ್ಕೆ) ಮಹತ್ತರವಾದ ಕೆಲಸವನ್ನು ಮಾಡುತ್ತಿದೆ ಬಡ ವರ್ಗದ ವಿದ್ಯಾರ್ಥಿಗಳಿಗೆ ಆಸರೆಯಾಗುತ್ತಾ ಬಂದಿದ್ದು ಶ್ಲಾಘನೀಯ ಕಾರ್ಯ ಇದು ದೀರ್ಘಕಾಲ ಮುಂದುವರಿಯಲಿ ಎಂದು ನಾನು ಬಯಸುತ್ತೇನೆ ಎಂದು ಹೇಳಿದರು.

ಕೆಥೋಲಿಕ್ ಅಸೋಸಿಯೇಶನ್ ಅಧ್ಯಕ್ಷ ಕ್ಯಾ. ವಿನ್ಸೆಂಟ್ ಪಾಯಸ್ ಸ್ವಾಗತಿಸಿದರು. ಸೆಕ್ರಟರಿ ಆನಂದ್ ಪಿರೇರಾ ವಂದಿಸಿದರು. ರತ್ನಾ ಪಿಂಟೋ ಮತ್ತು ನಯನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ನೋಬರ್ಟ್ ಶೆಣೈ, ಡಾ.ಡೆರಿಕ್ ಲೋಬೊ, ಸಿಎಎಸ್ಕೆ ವಾರ್ಷಿಕ ವಿದ್ಯಾರ್ಥಿವೇತನದ ಸಂಯೋಜಕ ಉಲ್ಲಾಸ್ ರಸ್ಕ್ವಿನ್ಹಾ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post