ಮಂಗಳೂರು, ಸೆ.11 : ಮೀನುಗಾರಿಕೆ ನಡೆಸುತ್ತಿದ್ದ ಗಿಲ್ನೆಟ್ ಬೋಟ್ ಮುಳುಗಡೆಯಾಗಿ ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಪಣಂಬೂರು ತೀರದಲ್ಲಿ ನಡೆದಿದೆ. ಈ ವೇಳೆ ನಾಲ್ವರನ್ನು ರಕ್ಷಿಸಲಾಗಿದೆ.
ಪಣಂಬೂರು ಬೀಚ್ ಸಮೀಪವೇ ಈ ಅವಗಢ ಶನಿವಾರ ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ. ದೋಣಿ ಹಾಕಿ ಮೀನು ಹಿಡಿಯುವ ವೇಳೆ ಬೀಸಿದ ಗಾಳಿಗೆ ಗಿಲ್ನೆಟ್ ಬೋಟ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಅಝರ್ ಎಂಬವರ ಮಾಲಕತ್ವದ ಗಿಲ್ನೆಟ್ ದೋಣಿಯಲ್ಲಿ ಬೆಂಗ್ರೆಯ ಅಬ್ದುಲ್ ಅಜೀಜ್, ಇಮ್ತಿಯಾಜ್, ಸಿನಾನ್, ಫೈರೋಜ್ ಹಾಗೂ ಶರೀಫ್ ಎಂಬವರಿದ್ದರು. ಇವರಲ್ಲಿ ಶರೀಫ್ ನೀರುಪಾಲಾಗಿದ್ದು ಅವರ ಶೋಧ ಕಾರ್ಯ ನಡೆದಿದೆ. ಉಳಿದ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ದೋಣಿಯನ್ನು ದಡಕ್ಕೆ ಎಳೆದು ತರಲಾಗಿದೆ.
Discussion about this post