ಮಂಗಳೂರು, ಡಿ.25: ಕೃಷ್ಣಾಪುರ 9ನೇ ಬ್ಲಾಕ್ ನ ನಿವಾಸಿ ಫ್ಯಾನ್ಸಿ ಅಂಗಡಿ ಮಾಲಿಕ ಜಲೀಲ್ ರವರನ್ನು ಅಮಾನುಷವಾಗಿ ಕೊಲೆಗೈದ ಕೃತ್ಯವನ್ನು ಉಡುಪಿ ಜಿಲ್ಲಾ ಎಸ್ ಕೆ ಎಸ್ ಜೆ ಎಂ ಪ್ರಧಾನ ಕಾರ್ಯದರ್ಶಿ ಹಂಝ ಫೈಝಿ ತೋಡಾರ್ ತೀವ್ರವಾಗಿ ಖಂಡಿಸಿದ್ದಾರೆ.

ಕೋಮು ಸೂಕ್ಷ್ಮ ಪ್ರದೇಶವಾದ ಜಿಲ್ಲೆಯಾದ್ಯಂತ ಮುಸಲ್ಮಾನರ ಮೇಲೆ ದೈನಂದಿನ ಹೆಚ್ಚುತ್ತಿರುವ ಕೊಲೆ, ಹಲ್ಲೆ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಆಡಲಿತ ಮತ್ತು ಪೋಲಿಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು, ಈ ಹಿಂದೆ ನಡೆದ ಸರಣಿ ಕೊಲೆಗಳ ಹಿಂದಿರುವ ನಿಜವಾದ ಅರೋಪಿಗಳನ್ನು ಬಂದಿಸದೇ ಇದ್ದುದೇ ಇಂತಹ ಪ್ರಕರಣಗಳು ಹೆಚ್ಚಾಗಲು ಮೂಲಕಾರಣ ಎಂದು ಅವರು ಹೇಳಿದರು.

ಚುನಾವಣಾ ಪೂರ್ವ ಕೊಲೆ ಪ್ರಕಾರ ಕರಣಗಳು ಹೆಚ್ಚಾಗುತ್ತಿರುವುದರಿಂದ ಜನ ಸಾಮಾನ್ಯರು ಜೀವಿಸಲು ಭಯ ಪಡುವಂತಹ ಶೋಚನೀಯ ಪರಿಸ್ಥಿತಿಯು ನಿರ್ಮಾಣವಾಗಿದೆ. ಮತ್ತು ಎಲ್ಲಾ ಕೊಲೆ ಪ್ರಕರಣಗಳ ನೈಜ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಸಮಸ್ತ ಕೇರಳ ಜಂಇಯತುಲ್ ಮುಅಲ್ಲಿಮೀನ್ ಆಗ್ರಹಿಸಿದೆ
Discover more from Coastal Times Kannada
Subscribe to get the latest posts sent to your email.







Discussion about this post