ಮಲ್ಪೆ: ವ್ಯಕ್ತಿಯೋರ್ವರು ರೂಂನಲ್ಲಿಟ್ಟಿದ್ದ 10.30 ಲಕ್ಷ ರೂ.ನಲ್ಲಿ 8.90 ಲಕ್ಷ ರೂ. ಕಳ್ಳತನವಾಗಿರುವ ಘಟನೆ ಮಲ್ಪೆ ಕೊಳದಲ್ಲಿ ನಡೆದಿದೆ. ಮಲ್ಪೆ ಬಂದರಿನ ರೈಟರ್ ಆಗಿ ಕೆಲಸ ಮಾಡುತ್ತಿರುವ ಗದಗದ ಕಳಸಾಪುರ ಗ್ರಾಮದ ಸುರೇಶ ಲಮಾಣಿ ಅವರು ಕಳ್ಳತನದ ಬಗ್ಗೆ ಮಲ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸುರೇಶ ಲಮಾಣಿ ಅವರು ವಾಮನ ಕಾಂಚನ್ ಅವರ ಪಾಲುದಾರಿಕೆಯ ಎಸ್ಡಿಡಿಕೆ ಮೀನು ಪಾರ್ಟಿಯಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಮೇ 7 ಮತ್ತು 8ರಂದು ನಡೆಸಿದ ಮೀನು ವ್ಯಾಪಾರದಿಂದ ಬಂದ 10.30 ಲಕ್ಷ ರೂ. ಹಣವನ್ನು ತಮ್ಮ ರೂಮಿನಲ್ಲಿ ಬಾಕ್ಸ್ ನ ಒಳಗಿಟ್ಟು ಬೀಗ ಹಾಕಿ, ಮರುದಿನ ಬೆಳಗ್ಗೆ 4.30ರ ಸುಮಾರಿಗೆ ಮೀನುಗಾರಿಕ ಬಂದರಿಗೆ ಹೋಗಿದ್ದರು. ಮೇ 9ರಂದು ಬೆಳಗ್ಗೆ 9.30ರ ಸುಮಾರಿಗೆ ಮೀನುಗಾರಿಕೆ ಕೆಲಸ ಮುಗಿಸಿ ವಾಪಸು ರೂಮಿನ ಬಳಿ ಬಂದು ನೋಡಿದಾಗ ರೂಮಿನ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳ ಬಾಕ್ಸ್ನಲ್ಲಿಟ್ಟಿದ್ದ 10.30 ಲಕ್ಷ ರೂ. ನಲ್ಲಿ 8.90 ಲಕ್ಷ ರೂ. ಕಳ್ಳತನ ಮಾಡಿ ಉಳಿದ ಹಣವನ್ನು ಅಲ್ಲೇ ಬಿಟ್ಟು ಪರಾರಿಯಾಗಿರುವುದು ತಿಳಿದು ಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post