ತುಮಕೂರು: ಜೂನಿಯರ್ ರವಿಚಂದ್ರನ್ ಎಂದೇ ಖ್ಯಾತಿ ಗಳಿಸಿದ್ದ ತುಮಕೂರು ಜಿಲ್ಲೆಯ ಲಕ್ಷ್ಮೀನಾರಾಯಣ ಅವರು ವಿದ್ಯುತ್ ಸ್ಪರ್ಶಿಸಿ ಕುಣಿಗಲ್ ತಾಲೂಕು ಹೇರೂರು ಗ್ರಾಮದಲ್ಲಿ ಮೃತಪಟ್ಟಿದ್ದಾರೆ. 35 ವರ್ಷ ವಯಸ್ಸಿನ ಲಕ್ಷ್ಮೀನಾರಾಯಣ ಮಂಗಳವಾರ ಸಂಜೆ ತಮ್ಮ ಮನೆಯ ಸಂಪಿಗೆ ನೀರು ತುಂಬಿಸಲು ಮೋಟಾರ್ ಸ್ವಿಚ್ಡ್ ಆನ್ ಮಾಡಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿದೆ. ಇದರಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಾಕಷ್ಟು ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಅನೇಕ ವರ್ಷಗಳಿಂದ ವಿವಿಧ ಆರ್ಕೆಸ್ಟ್ರಾಗಳಲ್ಲಿ ಜೂನಿಯರ್ ರವಿಚಂದ್ರನ್ ಆಗಿ ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮೀನಾರಾಯಣ ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳಲ್ಲಿಯೂ ಖ್ಯಾತಿಗಳಿಸಿದ್ದರು. ಈ ಘಟನೆ ಸಂಬಂಧ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post