ಬಜಪೆ: ಇಲ್ಲಿನ ಕಾಜಿಲ್ ಎಂಬಲ್ಲಿ ಬಜಪೆ ಠಾಣೆಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್ನಲ್ಲಿ ಬರುತ್ತಿದ್ದ ಮೂವರನ್ನು ತಡೆದು ವಿಚಾರಣೆ ನಡೆಸಿದಾಗ ಗಾಂಜಾವನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು. ಈ ಸಂಬಂಧ ಮೂರು ಮಂದಿ ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸ್ಕೂಟರ್ನಲ್ಲಿ ಬರುತ್ತಿದ್ದ ಮೂವರನ್ನು ಎಸ್ಐ ಗುರಪ್ಪ ಕಾಂತಿ ತಡೆದಾಗ ಅವರು ಸ್ಕೂಟರ್ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದರು. ಆದರೆ ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ ಗಾಂಜಾ ಸಾಗಿರುವುದು ತಿಳಿದುಬಂತು. ಬಳಿಕ ತೇಜಾಕ್ಷ ಪೂಜಾರಿ (22), ಸಂತೋಷ್ ಪೂಜಾರಿ (24) ಮತ್ತು ಅಬೂಬಕ್ಕರ್ ಸಿದ್ದಿಕ್ (26) ನನ್ನು ಬಂಧಿಸಿ ಗಾಂಜಾವನ್ನು ವಶಡಿಸಿಕೊಳ್ಳಲಾಯಿತು.
ಬಂಧಿತರಿಂದ 340 ಗ್ರಾಂ ಗಾಂಜಾ, 40 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಸೇರಿ ಒಟ್ಟು 46 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Discussion about this post